More

    ‘ಉತ್ತರಕಾಂಡ’ ಚಿತ್ರದಲ್ಲಿ ರಮ್ಯಾ? ಸ್ಯಾಂಡಲ್​ವುಡ್​ನಲ್ಲಿ ಹೀಗೊಂದು ಸುದ್ದಿ …

    ಬೆಂಗಳೂರು: ಧನಂಜಯ್​ ಅಭಿನಯದ ‘ಉತ್ತರಕಾಂಡ’ ನಾಳೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ಈ ಮಧ್ಯೆ, ಚಿತ್ರದಲ್ಲಿ ಧನಂಜಯ್​ಗೆ ರಮ್ಯಾ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಗಾಂಧಿನಗರದಿಂದ ಅಲೆಅಲೆಯಾಗಿ ಕೇಳಿಬರುತ್ತಿದೆ.

    ಇದನ್ನೂ ಓದಿ: ನ.6ಕ್ಕೆ ಬಿಡುಗಡೆಯಾಗಲಿದೆ ‘ವಿಜಯಾನಂದ’ ಚಿತ್ರದ ಮೊದಲ ಹಾಡು …

    ‘ಉತ್ತರಕಾಂಡ’ ಚಿತ್ರದಲ್ಲಿ ರಮ್ಯಾ ನಿಜಕ್ಕೂ ನಾಯಕಿಯಾ? ಗೊತ್ತಿಲ್ಲ. ಅದನ್ನು ಅವರಾಗಲೀ, ಚಿತ್ರತಂಡದವರಾಗಲೀ ಅಧಿಕೃತವಾಗಿ ಘೋಷಿಸಿಲ್ಲ. ನಿಜಾಂಶ ಏನಿದ್ದರೂ ನಾಳೆ ಭಾನುವಾರ ಗೊತ್ತಾಗಲಿದೆ. ಆದರೆ, ಸದ್ಯಕ್ಕೆ ಈ ಸುದ್ದಿ ಓಡಾಡುತ್ತಿರುವುದಕ್ಕೂ ಕಾರಣವಿದೆ. ಈ ಚಿತ್ರಕ್ಕೆ ರಮ್ಯಾ ಅವರೇ ನಾಯಕಿಯಾಗಿ ನಟಿಸಬಹುದು ಎಂಬುದಕ್ಕೆ ಮೂರ್ನಾಲ್ಕು ಥಿಯರಿಗಳಿವೆ.

    ಪ್ರಮುಖವಾಗಿ, ಇದಕ್ಕೂ ಮೊದಲು ರಮ್ಯಾ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂಬ ರಾಜ್​ ಬಿ. ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಹೊಸಬರ ಚಿತ್ರಗಳನ್ನು ನಿರ್ಮಿಸುವುದಕ್ಕೆ ಹುಟ್ಟುಹಾಕಿರುವ ಸಂಸ್ಥೆಯಾದ್ದರಿಂದ, ಆ ಚಿತ್ರದಲ್ಲಿ ಹೊಸಬರು ಇರುತ್ತಾರೆ, ತಾನು ಇನ್ನೊಂದು ಚಿತ್ರದ ಮೂಲಕ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ. ಎರಡನೆಯ ಕಾರಣವೆಂದರೆ, ಒಂದು ದೊಡ್ಡ ನಿರ್ಮಾಣ ಸಂಸ್ಥೆ ಮತ್ತು ದೊಡ್ಡ ಕ್ಯಾನ್ವಸ್​ನ ಚಿತ್ರದ ಮೂಲಕ ರೀಎಂಟ್ರಿ ಕೊಡಬೇಕು ಎಂಬುದು ರಮ್ಯಾ ಅವರ ಅಭಿಮತವಂತೆ. ‘ಉತ್ತರಕಾಂಡ’ ಅಂಥದ್ದೇ ವಿಭಾಗಕ್ಕೆ ಸೇರುವ ಒಂದು ಚಿತ್ರ.

    ಮೂರನೆಯದಾಗಿ, ಅವರ ಮತ್ತು ನಟ ಧನಂಜಯ್ ನಡುವಿನ ಒಳ್ಳೆಯ ಸ್ನೇಹ. ಆ ಸ್ನೇಹದಿಂದಲೇ ಇತ್ತೀಚೆಗೆ ‘ಹೆಡ್​ ಬುಷ್​’ ಚಿತ್ರವನ್ನು ನೋಡಿ ರಮ್ಯಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೆಲ್ಲದರಿಂದ ‘ಉತ್ತರಕಾಂಡ’ ಚಿತ್ರಕ್ಕೆ ರಮ್ಯಾ ಅವರೇ ನಾಯಕಿಯಾಗಿ ನಟಿಸುವ ಸಾಧ್ಯತೆ ಎಂಬ ಗುಸುಗುಸು ಕನ್ನಡ ಚಿತ್ರರಂಗದಲ್ಲ ಜೋರಾಗಿ ಕೇಳಿಬರುತ್ತಿದೆ.

    ಇದನ್ನೂ ಓದಿ: ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿಯನ್ನು ಭೇಟಿ ಮಾಡಿದ ಎಬಿಡಿ!

    ವಿಜಯ್ ಕಿರಗಂದೂರು ಅರ್ಪಿಸುತ್ತಿರುವ ‘ಉತ್ತರಕಾಂಡ’ ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯಡಿ ಕಾರ್ತಿಕ್ ಗೌಡ ಮತ್ತು ಯೋಗಿ.ಜಿ.ರಾಜ್ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು, ರೋಹಿತ್​ ಪದಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಧನಂಜಯ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

    ‘ಬ್ರಹ್ಮಾಸ್ತ್ರ 2’ಗೆ ನೋ ಎಂದ ಯಶ್​; ದೇವ್​ ಪಾತ್ರ ಬಿಟ್ಟ ಮೂರನೇ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts