More

    ಅರ್ನಬ್​ ಗೋಸ್ವಾಮಿ ಬಗ್ಗೆ ಚಿತ್ರ ಮಾಡ್ತಾರಂತೆ ವರ್ಮಾ!

    ಕಳೆದ ಕೆಲವು ದಿನಗಳಿಂದ ತಮ್ಮ ಹೊಸ ಚಿತ್ರಗಳ ಪೋಸ್ಟರ್​, ಟೀಸರ್​ ಬಿಡುಗಡೆ ಮಾಡುವುದರಲ್ಲಿ ಬ್ಯುಸಿಯಾಗಿದ್ದ ಹಿರಿಯ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಇದೀಗ ಪತ್ರಕರ್ತ ಅರ್ನಬ್​ ಗೋಸ್ವಾಮಿ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಅರ್ನಬ್​ ವಿರುದ್ಧ ಸತತವಾಗಿ ಟ್ವೀಟ್​ಗಳನ್ನು ಮಾಡುತ್ತಿದ್ದಾರೆ.

    ಇಷ್ಟಕ್ಕೂ ವರ್ಮಾಗ್ಯಾಕ್​ ಅರ್ನಬ್​ ಮೇಲೆ ಸಿಟ್ಟು? ಅರ್ನಬ್​ ಏನಾದರೂ ವರ್ಮಾ ಅವರ ಕಾಲೆಳೆದರಾ? ಅಥವಾ ಅವರ ಚಿತ್ರಗಳ ಬಗ್ಗೆ ಏಬಾದರೂ ಕೆಟ್ಟದಾಗಿ ಮಾತನಾಡಿದರಾ? ಎಂಬ ಪ್ರಶ್ನೆಗಳು ಬರಬಹುದು. ಹಾಗೇನಾದರೂ ಹಾಗಿದ್ದರೆ, ವರ್ಮಾ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ? ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದ ವರ್ಮಾ ಇನ್ನಷ್ಟು ಸುದ್ದಿಯಲ್ಲಿರುತ್ತಿದ್ದರು.

    ಇದನ್ನೂ ಓದಿ: ಸ್ವಾತಂತ್ರ ದಿನಾಚರಣೆ ನಿಮಿತ್ತ ಬರಲಿದೆ ‘ಡಿಯರ್ ಸತ್ಯ’ ಟೀಸರ್…

    ಅರ್ನಬ್​ ಇತ್ತೀಚೆಗೆ ಬಾಲಿವುಡ್​ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರಂತೆ. ಅವರ ಮಾತುಗಳನ್ನು ಕೇಳಿ ಕೆರಳಿರುವ ವರ್ಮಾ, ಅನರ್ಬ್​ ವಿರುದ್ಧ ಹರಿಹಾಯ್ದಿರುವುದಷ್ಟೇ ಅಲ್ಲ, ಮಿಕ್ಕ ಸೆಲೆಬ್ರಿಟಿಗಳು ಯಾಕೆ ಬಾಯಿಮುಚ್ಚಿಕೊಂಡು ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಈ ಕುರಿತು ಸರಣಿ ಟ್ವೀಟ್​ಗಳನ್ನು ಮಾಡಿರುವ ಅವರು, ‘ಬಾಲಿವುಡ್​ ಬಗ್ಗೆ ಅರ್ನಬ್​ ಅಷ್ಟು ಕೆಟ್ಟದಾಗಿ ಮಾತನಾಡುವುದು ಕೇಳಿ ಬಹಳ ಶಾಕ್​ ಆಯಿತು. ಇದನ್ನು ಅವರ ಅತ್ಯಂತ ಕೆಟ್ಟ ಉದ್ಯಮ ಎಂದು ಕರೆಯುತ್ತಿದ್ದಾರೆ. ಇಲ್ಲಿ ರೇಪಿಸ್ಟ್​ಗಳು ಮತ್ತು ಗ್ಯಾಂಗ್​ಸ್ಟರ್​ಗಳೇ ಹೆಚ್ಚಿದ್ದಾರೆ ಎನ್ನುವ ತರಹ ಮಾತನಾಡುತ್ತಿದ್ದಾರೆ’ ಎಂದು ಬೇಸರ ಹೊರಹಾಕಿದ್ದಾರೆ ವರ್ಮಾ.

    ‘ಸುಶಾಂತ್​ ಸಾವಿನ ಬಗ್ಗೆ ಅರ್ನಬ್​ ಮಾತನಾಡಿದ್ದು ನಿಜಕ್ಕೂ ವಿಚತ್ರ ಎಂದನಿಸಿತು. ಅವರ ಪ್ರಕಾರ, ದಿವ್ಯಾ ಭಾರತಿ, ಜಿಯಾ ಖಾನ್​, ಶ್ರೀದೇವಿ ಮತ್ತು ಸುಶಾಂತ್​ ಸಾವಿಗೆ ಕಾರಣ ಬಾಲಿವುಡ್​ ಅಂತೆ. 25 ವರ್ಷಗಳ ಅಂತರದಲ್ಲಿ ಈ ನಾಲ್ಕು ಸಾವುಗಳು ಸಂಭವಿಸಿವೆ. ಈ ನಾಲ್ಕೂ ಕೇಸುಗಳಲ್ಲಿ ಏನೇನೋ ಆಗಿವೆ ಮತ್ತು ಇದರ ಹಿಂದೆ ಯಾರ್ಯಾರೋ ಇದ್ದಾರೆ. ಅದನ್ನೆಲ್ಲಾ ಬಿಟ್ಟು, ಇದಕ್ಕೆಲ್ಲಾ ಕಾರಣ ಬಾಲಿವುಡ್​ ಎನ್ನುವಂತಹ ಬಾಲಿಷ ಮಾತುಗಳನ್ನು ಅರ್ನಬ್​ ಆಡುತ್ತಿದ್ದಾರೆ’ ಎಂದು ವರ್ಮಾ ಹೇಳಿದ್ದಾರೆ.

    ಇದನ್ನೂ ಓದಿ: ಮೂರು ಭಾಷೆಗಳಲ್ಲಿ ತ್ರಿಕೋನ ಬಿಡುಗಡೆ; ವರಮಹಾಲಕ್ಷ್ಮೀ ಹಬ್ಬಕ್ಕೆ ಬಂತು ಮೋಷನ್​ ಪೋಸ್ಟರ್

    ಈ ವಿಚಾರವಾಗಿ ಕರಣ್​ ಜೋಹರ್​, ಮಹೇಶ್​ ಭಟ್​, ಶಾರೂಖ್​ ಖಾನ್​, ಆದಿತ್ಯ ಚೋಪ್ರಾ, ಸಲ್ಮಾನ್​ ಖಾನ್​ ಮುಂತಾದವರನ್ನು ಪ್ರಶ್ನಿಸಿರುವ ಅವರು, ‘ನೀವೆಲ್ಲಾ ಅವರಿಗೆ ಯಾಕೆ ಅಷ್ಟು ಹೆದರುತ್ತೀರಾ ಎಂಬುದು ಅರ್ಥವಾಗುತ್ತಿಲ್ಲ. ನಿಮ್ಮ ದೊಡ್ಡ ಕ್ಯಾಬಿನ್​ನ ಮೂಲೆಯಲ್ಲಿ ಬಚ್ಚಿಟ್ಟುಕೊಳ್ಳುವ ಬದಲು, ಒಟ್ಟಾಗಿ ಬಂದು ಈ ರೀತಿಯ ಆರೋಪಗಳಿಗೆ ಉತ್ತರ ಕೊಡಿ. ಅರ್ನಬ್​ ಇಷ್ಟೆಲ್ಲಾ ಮಾತಾಡುತ್ತಿರುದು, ನಮ್ಮಲ್ಲಿ ಒಗ್ಗಟಿಲ್ಲ ಮತ್ತು ಈ ಬಗ್ಗೆ ಪ್ರಶ್ನಿಸುವ ನರ ಇಲ್ಲ ಎಂಬ ಕಾರಣಕ್ಕಾಗಿ. ಈಗಲಾದರೂ ಎದ್ದು ಬನ್ನಿ’ ಎಂದು ಅವರು ಕರೆ ನೀಡಿದ್ದಾರೆ.

    ಅರ್ನಬ್​ ಬಗ್ಗೆ ಚಿತ್ರ ಮಾಡುವುದಾಗಿ ಘೋಷಿಸಿರುವ ವರ್ಮಾ, ‘ನೀವೆಲ್ಲಾ ಏನು ಮಾಡುತ್ತೀರೋ ಗೊತ್ತಿಲ್ಲ. ನಾನಂತೂ ಅರ್ನಬ್​ ಬಗ್ಗೆ ಸಿನಿಮಾ ಮಾಡಿ, ಆತ ಎಂತಹ ವ್ಯಕ್ತಿ ಎಂದು ತೋರಿಸುತ್ತೇನೆ. ಆತನನ್ನು ಬೆತ್ತಲು ಮಾಡುತ್ತೇನೆ’ ಎಂದು ವರ್ಮಾ ಶಪಥ ಮಾಡಿದ್ದಾರೆ.

    ದೇಹ ಮನೇಲಿದೆ; ಮನಸ್ಸು ಮಾತ್ರ ಆಸ್ಪತ್ರೆಯಲ್ಲಿದೆ … ‘ಬಿಗ್​​ ಬಿ’ ಹೀಗೆ ಹೇಳಿದ್ದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts