More

    ಮಲಗಿದ್ದಲ್ಲೇ ಮಲ-ಮೂತ್ರ ವಿಸರ್ಜನೆ! ಹುಟ್ಟುಹಬ್ಬದಂದೇ ನಟಿ ಯಶಿಕಾ ಆನಂದ್​ ನೋವಿನ ಮಾತು

    ಚೆನ್ನೈ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ನಟಿ ಯಶಿಕಾ ಆನಂದ್​ ಅವರನ್ನು ಯಶಸ್ವಿ ಸರ್ಜರಿಯ ಬಳಿಕ​ ಆಗಸ್ಟ್​ 3ರಂದು ಐಸಿಯುನಿಂದ ಸಾಮಾನ್ಯ ವಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ. ಜುಲೈ 24ರ ನಸುಕಿನ ಜಾವ ಚೆನ್ನೈನ ಈಸ್ಟ್​ ಕೊಸ್ಟ್​ ರಸ್ತೆಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಟಿ ಯಶಿಕಾ ಗಂಭೀರವಾಗಿ ಗಾಯಗೊಂಡರೆ, ಅವರ ಆಪ್ತ ಸ್ನೇಹಿತೆ ವೆಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟರು. ಕಾರಿನಲ್ಲಿದ್ದ ಯಶಿಕಾ ಅವರ ಇಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗಳಿಂದ ಬಚಾವ್​ ಆಗಿದ್ದಾರೆ.

    ಇದೀಗ ಇನ್​ಸ್ಟಾಗ್ರಾಂ ಮೂಲಕ ಯಶಿಕಾ ಅವರು ತಮ್ಮ ಆರೋಗ್ಯ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಅವರು ಹೇಳುವ ಪ್ರಕಾರ ಪೆಲ್ವಿಕ್​ ಮೂಳೆಯಲ್ಲಿ ಅನೇಕ ಮುರಿತಗಳು ಸಂಭವಿಸಿರುವುದರಿಂದ ಮುಂದಿನ ಐದು ತಿಂಗಳು ಕಾಲ ಯಶಿಕಾ ನೆಡದಾಡುವಂತಿಲ್ಲ ಮತ್ತು ಏಳಲು ಆಗುವುದಿಲ್ಲ. ಘಟನೆಯ ಬಳಿಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಯಶಿಕಾ ಗಾಯಗೊಂಡಿದ್ದು, ಅಪಘಾತದಲ್ಲಿ ಆಕೆ ಕಳೆದುಕೊಂಡಿರುವುದಕ್ಕಿಂತಲೂ ದೈಹಿಕ ಗಾಯ ಏನೇನು ಅಲ್ಲವೆಂದು ಹೇಳಿದ್ದಾರೆ.

    ಕೂತಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಬೇಕಾದ ಸ್ಥಿತಿ ಎದುರಾಗಿದೆ. ಎಡಗಡೆ ಹಾಗೂ ಬಲಗಡೆ ಕೂಡ ತಿರುಗಲು ಸಾಧ್ಯವಾಗುತ್ತಿಲ್ಲ. ಅನೇಕ ದಿನಗಳವರೆಗೂ ದೇಹವನ್ನು ಬಾಗಿಸದೇ ಅಥವಾ ಜಗ್ಗಿಸದೇ ಜಡವಾಗಿ ಇರಬೇಕಾದ ಸ್ಥಿತಿ ನನಗೆ ಎದುರಾಗಿದೆ ಎಂದು ಯಶಿಕಾ ನೋವಿನಿಂದ ಹೇಳಿಕೊಂಡಿದ್ದಾರೆ.

    ನನ್ನ ಬೆನ್ನು ಸಂಪೂರ್ಣ ಗಾಯಗೊಂಡಿದೆ ಎಂದಿರುವ ಯಶಿಕಾ, ನಿಜಕ್ಕೂ ಇದು ನನಗೆ ಪುನರ್ಜನ್ಮ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಇದೇ ವೇಳೆ ಕುಡಿದು ಕಾರು ಚಲಾಯಿಸಿ ಅಪಘಾತ ಮಾಡಿಕೊಂಡಿದ್ದಾರೆ ಎಂದು ಟ್ರೋಲ್​ ಮಾಡಿದವರಿಗೆ ತಿರುಗೇಟು ನೀಡಿರುವ ಯಶಿಕಾ, ಟ್ರೋಲ್​ ಮಾಡುವವರ ಮನಸ್ಥಿತಿ ಕೆಳದರ್ಜೆಯದು. ನಾವು ಮದ್ಯ ಸೇವಿಸಿರಲಿಲ್ಲ ಎಂದು ಪೊಲೀಸರೇ ಖಚಿತಪಡಿಸಿದ್ದಾರೆ ಎಂದು ಯಶಿಕಾ ಹೇಳಿದ್ದಾರೆ. ಆದಾಗ್ಯೂ ಅನೇಕ ವರದಿಗಳು ಹೇಳುವ ಪ್ರಕಾರ ಮದ್ಯ ಸೇವಿಸಿ ಚಾಲನೆ ಮಾಡಿದ್ದಕ್ಕೆ ಆಕೆಯ ಲೈಸೆನ್ಸ್​ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎನ್ನಲಾಗಿದೆ.

    ನಿನ್ನೆಯಷ್ಟೇ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದ ಯಶಿಕಾ, ಸ್ನೇಹಿತೆ ಭವಾನಿ ಸಾವಿಗೆ ಸಂತಾಪ ಸೂಚಿಸಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ನಾನೀಗ ಏನನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ಜೀವಂತವಾಗಿರುವುದಕ್ಕೆ ನಾನು ಎಂದೆಂದಿಗೂ ತಪ್ಪಿತಸ್ಥನೆಂದು ಭಾವಿಸುತ್ತೇನೆ. ಭೀಕರ ಅಪಘಾತದಿಂದ ನನ್ನ ಉಳಿಸಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಬೇಕೋ ಅಥವಾ ಒಳ್ಳೆಯ ಸ್ನೇಹಿತೆಯನ್ನು ನನ್ನಿಂದ ದೂರ ಮಾಡಿದ್ದಕ್ಕೆ ದೂಷಿಸಬೇಕೋ ತಿಳಿಯುತ್ತಿಲ್ಲ. ಭವಾನಿಯನ್ನು ನಿಜವಾಗಿಯೂ ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಕ್ಷಮಿಸುತ್ತೀಯ ಎಂದು ತಿಳಿದಿದೆ. ಕ್ಷಮಿಸು ಭವಾನಿ, ನಾನು ನಿಮ್ಮ ಕುಟುಂಬವನ್ನು ದುಃಖಕರ ಪರಿಸ್ಥಿತಿಯಲ್ಲಿಟ್ಟಿದ್ದೇನೆ. ಪ್ರತಿಯೊಂದು ಕ್ಷಣವೂ ನಿನ್ನನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಜೀವನಪೂರ್ತಿ ನಾನು ತಪ್ಪಿತಸ್ಥಳಾಗಿ ಉಳಿಯುತ್ತೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲೆಂದು ಬಯಸುತ್ತೇನೆ. ನಿನ್ನನ್ನು ಮರಳಿ ಪಡೆಯಲು ಪ್ರಾರ್ಥಿಸುತ್ತೇನೆ. ಒಂದು ದಿನ ನಿಮ್ಮ ಕುಟುಂಬ ನನ್ನನ್ನು ಕ್ಷಮಿಸುತ್ತದೆ ಎಂದು ಭಾವಿಸಿದ್ದೇನೆ. ನಿನ್ನ ನೆನಪುಗಳೊಂದಿಗೆ ಸದಾ ಜೀವಿಸುತ್ತೇನೆಂದು ಯಶಿಕಾ, ಭವಾನಿ ಕುರಿತು ಬರೆದುಕೊಂಡಿದ್ದಾರೆ. ಇದೇ ವೇಳೆ ಅಭಿಮಾನಿಗಳಿಗೆ ಸಂದೇಶ ರವಾನಿಸಿರುವ ಯಶಿಕಾ, ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಹುಟ್ಟುಹಬ್ಬ ಆಚರಿಸಿದಂತೆ ಅಭಿಮಾನಿಗಳ ಬಳಿಯೂ ಕೇಳಿದ್ದಾರೆ. (ಏಜೆನ್ಸೀಸ್​)

    ಶುಭಾ, ಶಮಂತ್​ ಎಲಿಮಿನೇಶನ್​ನಿಂದ ಲ್ಯಾಗ್​ ಮಂಜುಗೆ ಬಂಪರ್​, ಅರವಿಂದ್​ ಕನಸಿಗೆ ತಣ್ಣೀರು!

    ಗಾಯಕನ ವಿರುದ್ಧ ಪತ್ನಿಯಿಂದ ಲೈಂಗಿಕ ದೌರ್ಜನ್ಯ ಕೇಸ್‌: 20 ಕೋಟಿ ರೂ. ಜತೆ ಇವೆಲ್ಲಾ ಬೇಡಿಕೆ…

    ಫಿನಾಲೆ ಮುಗಿದ್ರೂ ನಡೆಯಲಿದೆ ಬಿಗ್​ಬಾಸ್; ಕಲರ್ಸ್ ಕುಟುಂಬದ ಕಲಾವಿದರೇ ಸ್ಪರ್ಧಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts