ಬೆಂಗಳೂರು: ಕನ್ನಡ ಚಿತ್ರರಂಗ ಧ್ರುವತಾರೆ ಪುನೀತ್ ರಾಜ್ಕುಮಾರ್ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಸಾವು ಇಡೀ ರಾಜ್ಯಕ್ಕೆ ಬಹು ದೊಡ್ಡ ಆಘಾತ ನೀಡಿದೆ. 46ನೇ ವಯಸ್ಸಿನಲ್ಲಿ ಅಪ್ಪು ಅಕಾಲಿಕವಾಗಿ ಮರಣ ಹೊಂದಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಇದರ ನಡುವೆ ಅಪ್ಪು ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಫ್ಯಾಮಿಲಿ ಡಾಕ್ಟರ್ ಮೇಲೆ ಅನುಮಾನ ವ್ಯಕ್ತಪಡಿಸಿರುವ ಅಭಿಮಾನಿಗಳು ದೂರು ಕೂಡ ಸಲ್ಲಿಸಿದ್ದಾರೆ. ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ನಟ ಶಿವರಾಜ್ಕುಮಾರ್ ದಿಗ್ವಿಜಯ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ್ದು, ಏನೇ ನಡೆದಿದ್ರೂ ಅದು ಪುನೀತ್ಗೆ ಮಾತ್ರ ಗೊತ್ತಿರುತ್ತದೆ. ಆದ್ರೆ ಆತನೇ ಇಂದು ನಮ್ಮ ನಡುವೆ ಇಲ್ಲ ಎಂದು ಶಿವಣ್ಣ ಭಾವುಕರಾದರು.
ಸಾವಿನ ಮೇಲೆ ವ್ಯಕ್ತವಾಗಿರುವ ಅನುಮಾನದ ಬಗ್ಗೆ ಏನು ಹೇಳು ಬೇಕು ತಿಳಿಯುತ್ತಿಲ್ಲ. ನಾವಂತೂ ಆ ಕ್ಷಣದಲ್ಲಿ ಆ ಸ್ಥಳದಲ್ಲಿ ಇರಲಿಲ್ಲ. ಘಟನಾ ಸ್ಥಳದಲ್ಲಿ ಇದ್ದಾಗ ಏನಾದರೂ ಹೇಳಬಹುದು. ಆದರೆ, ಸ್ಥಳದಲ್ಲಿ ಏನು ನಡೆಯಿತು ಎಂಬುದನ್ನು ತಿಳಿಯದೇ ಏನೇ ಹೇಳಿದರು ಅದು ತಪ್ಪು ಅಭಿಪ್ರಾಯ ಆಗುತ್ತದೆ. ಅಲ್ಲಿ ಏನಾಗಿದೆ ನನಗೆ ಗೊತ್ತಿಲ್ಲ. ಆದರೆ, ನನ್ನ ತಮ್ಮನಿಗೆ ಕೊನೆಯದಾಗಿ ಒಂದು ಅವಕಾಶ ಸಿಗಲಿಲ್ಲವಲ್ಲ ಎಂಬ ನೋವಾಗಿದೆ ಎಂದರು.
ಹಾಗಂತೆ..ಹೀಗಂತೆ ಎಂಬ ಅಂತೆ ಕಂತೆಗಳಿಗೆ ಬೆಲೆ ಕೊಟ್ಟರೆ ಕಷ್ಟವಾಗುತ್ತದೆ. ಯಾರು ಏನೇ ಮಾಡಿದ್ದರೂ ಅದು ಪುನೀತ್ಗೆ ಮಾತ್ರ ತಿಳಿದಿರುತ್ತದೆ. ಆದರೆ, ಆತ ಈಗ ನಮ್ಮ ನಡುವೆ ಇಲ್ಲ. ಅಂದು ಅಶ್ವಿನಿ ಕೂಡ ಗೊಂದಲಕ್ಕೆ ಒಳಗಾಗಿದ್ದರು. ಏನು ಮಾಡಬೇಕೆಂಬ ತೊಳಲಾಟದಲ್ಲಿ ಸಿಲುಕಿದ್ದರು. ಅಲ್ಲಿ ಏನು ನಡೆದಿದೆ ಎಂಬುದನ್ನು ವೈದ್ಯರು ಹೇಳಬೇಕಷ್ಟೇ. ಅವರು ಹೇಳಿದ್ದು ಸರಿನಾ? ತಪ್ಪಾ? ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಆ ಸ್ಥಳದಲ್ಲಿ ನಾವ್ಯಾರು ಇರಲಿಲ್ಲ. ಅಲ್ಲಿರದೇ ಏನೇನೂ ಮಾತನಾಡಿದರೆ ತಪ್ಪಾಗುತ್ತದೆ. ಏನೇ ಮಾಡಿದ್ದರೂ ಅದು ಅವರ ಮನಸಾಕ್ಷಿಗೆ ಗೊತ್ತಾಗುತ್ತದೆ ಎಂದು ಶಿವಣ್ಣ ಸ್ಪಷ್ಟನೆ ನೀಡಿದರು. (ದಿಗ್ವಿಜಯ ನ್ಯೂಸ್)
ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್ ಕುಮಾರ್ ಪ್ರತಿಕ್ರಿಯೆ
ಹ್ಯಾಟ್ರಿಕ್ನತ್ತ ಜಿನ್ಪಿಂಗ್; ಸಿಪಿಸಿ ಸಮಾವೇಶದಲ್ಲಿ ನಿರ್ಣಯ, ಬಲ ಹೆಚ್ಚಿಸಿಕೊಂಡ ಚೀನಾ ಅಧ್ಯಕ್ಷ