More

    ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್​ ಕುಮಾರ್​ ಪ್ರತಿಕ್ರಿಯೆ

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್ ಇನ್ನಿಲ್ಲ ಎಂಬ ಕಹಿಸತ್ಯವನ್ನ ಒಪ್ಪಿಕೊಳ್ಳೋಕೆ ಕುಟುಂಬಸ್ಥರು ಮಾತ್ರವಲ್ಲ, ಅಸಂಖ್ಯಾತ ಅಭಿಮಾನಿಗಳಿಗೂ ಸಾಧ್ಯವಾಗುತ್ತಿಲ್ಲ. ಇಂತಹ ವಿಷಾದನೀಯ ಪರಿಸ್ಥಿತಿಯಲ್ಲೂ ಶಿವರಾಜ್​ಕುಮಾರ್​ ಅವರು ಅಪ್ಪು ಪ್ರೀತಿಸುತ್ತಿದ್ದ ಹುಡುಗಿ- ಅವರೊಂದಿಗೇ ಅಪ್ಪು ಮದುವೆ ಆಗಿದ್ದರ ಕುರಿತು ಮಾತನಾಡಿದ್ದಾರೆ. ಪುನೀತ್​ ಅಗಲಿಕೆ ನೋವನ್ನು ತಡೆಯುವ ಶಕ್ತಿಯನ್ನ ಅವರ ಪತ್ನಿ ಅಶ್ವಿನಿಗೆ ದೇವರು ಕೊಡಲಿ ಎಂದು ಶಿವಣ್ಣ ಬೇಡಿಕೊಂಡಿದ್ದಾರೆ.

    ನಮಗೆಲ್ಲಾ ಗೊತ್ತಿರುವಂತೆ ಪುನೀತ್​ ರಾಜ್​ಕುಮಾರ್​ ಮತ್ತು ಅಶ್ವಿನಿ ಅವರದ್ದು ಲವ್​ ಕಮ್​ ಅರೇಂಜ್ಡ್​ ಮದುವೆ. ಅಪ್ಪು ಲವ್​ ಬಗ್ಗೆ ಡಾ.ರಾಜ್​ಕುಮಾರ್​ ಬಳಿ ಹೇಳಿದ್ದೇ ಶಿವರಾಜ್​ಕುಮಾರ್​. ಅಪ್ಪು ಅಗಲಿಕೆಯ ನೋವಿನಲ್ಲೇ ಇರುವ ಶಿವಣ್ಣರನ್ನ ‘ದಿಗ್ವಿಜಯ ನ್ಯೂಸ್’ ಸಂಪರ್ಕಿಸಿತ್ತು. ಆ ವೇಳೆ ಮಾತನಾಡಿದ ಶಿವಣ್ಣ, ಅಪ್ಪು ಜತೆಗಿನ ಒಡನಾಟ, ಅಪ್ಪು ಕನಸು, ಅಪ್ಪು ಬಾಲ್ಯ… ಹೀಗೆ ಸಾಕಷ್ಟು ವಿಷಯದ ಬಗ್ಗೆ ಭಾರವಾದ ಮನಸ್ಸಿನಲ್ಲೇ ನೆನಪಿಸಿಕೊಂಡರು. ”ಅಶ್ವಿನಿ ಮತ್ತು ಪುನೀತ್​ ಇಬ್ಬರೂ ಪ್ರೀತಿ ಮಾಡಿ, ತುಂಬಾ ಇಷ್ಟಪಟ್ಟು ಮದುವೆ ಆಗಿದ್ದರು. ಅವರಿಬ್ಬರೂ ಎಲ್ಲೇ ಹೋದರೂ ಒಂದು ಶಿಸ್ತು ಇತ್ತು. ಅಪ್ಪು ಇಲ್ಲದ ದುಃಖವನ್ನ ನಾವು ಹೇಳೋಕೆ ಆಗಲ್ಲ. ಅಪ್ಪು ತನ್ನ ಪ್ರೀತಿ ಬಗ್ಗೆ ಮೊದಲು ಅಮ್ಮನಿಗೆ ಹೇಳಿಕೊಂಡಿದ್ದ. ‘ಅಪ್ಪಾಜಿ ಅತ್ರ ನೀನೇ ಮಾತಾಡು ಕಂದ’ ಎಂದು ಅಮ್ಮ ನನಗೆ ಹೇಳಿದ್ರು. ‘ನೀನಾಯ್ತು- ನಿಮ್ಮ ಅಣ್ಣ ಆಯ್ತು’ ಎಂದು ಅಮ್ಮ ಅಪ್ಪುಗೂ ಹೇಳಿದ್ರು. ನಾನು ಅಪ್ಪಾಜಿ ಅತ್ರ ಹೋಗಿ ಅಪ್ಪು ಲವ್​ ಮಾಡುತ್ತಿದ್ದಾನೆ. ಅವರನ್ನೇ ಮದ್ವೆ ಆಗ್ತಾನಂತೆ ಎಂದು ಹೇಳಿದೆ. ಅದಕ್ಕೆ ಅಪ್ಪಾಜಿ ನಗುತ್ತಾ, ‘ಆಗಲಿ ಬಿಡು. ಅವರೂ ಚೆನ್ನಾಗಿರಬೇಕಲ್ವಾ?’ ಅಂತ ಅಪ್ಪು ಮತ್ತು ನನ್ನನ್ನು ತಬ್ಬಿಕೊಂಡು ಹೇಳಿದ್ರು. ‘ನೀನೇ ಬಂದು ಹೇಳಬೇಕಿತ್ತಲ್ವಾ ಕಂದಾ…’ ಎಂದು ಅಪ್ಪಾಜಿ ಅಪ್ಪುನನ್ನು ಕೇಳಿದ್ರು. ‘ಓಹೋ.. ಅಣ್ಣನೂ ನಿನಗೆ ತಂದೆ ತರ ಅಲ್ವಾ? ಅದಕ್ಕೆ ಅವನಿಗೇ ಹೇಳಿಬಿಟ್ಟ?’ ಅಂತ ಅಪ್ಪಾಜಿ ನಕ್ಕರು. AK-47 ಮೂವಿ ಪ್ರದರ್ಶನ ಟೈಂನಲ್ಲಿ ಕಾವೇರಿ ಥಿಯೇಟರ್​ಗೆ ಅಶ್ವಿನಿಯನ್ನ ಅಪ್ಪು ಕರೆದುಕೊಂಡು ಬಂದಿದ್ದ. ಅಲ್ಲಿ ನಾವೆಲ್ಲ ಮೀಟ್​ ಮಾಡಿದ್ವಿ. ಅವನು ಚಿಕ್ಕವನಲ್ವಾ? ನನ್ನ ತಮ್ಮ ಲವ್​ ಮಾಡ್ತಿದ್ದಾನೆ ಅಂತಷ್ಟೇ ಗೊತ್ತಿತ್ತು. ಅಶ್ವಿನಿ ಅವರ ಕುಟುಂಬಸ್ಥರು ಒಳ್ಳೆಯವರು. ಅಪ್ಪು ಇಲ್ಲದೆ ಅಶ್ವಿನಿಗೆ ತುಂಬಾ ನೋವಾಗ್ತಿದೆ. ಅಪ್ಪುಗೆ ದೇವರು ಒಂದು ಅವಕಾಶ ಕೊಡಬೇಕಿತ್ತು” ಎನ್ನುತ್ತಲೇ ಭಾವುಕರಾದರು.

    ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್​ ಕುಮಾರ್​ ಪ್ರತಿಕ್ರಿಯೆ

    ”ಪುನೀತ್​ರ ಬದುಕಿನ ಕೊನೇ ಕ್ಷಣವನ್ನ ಕಣ್ಣಾರೆ ಕಂಡ, ಪತ್ನಿ ಅಶ್ವಿನಿಗೆ ಅಪ್ಪು ನಿಧನ ತೀವ್ರ ಆಘಾತ ನೀಡಿದೆ. ಆ ಕ್ಷಣ ಅಶ್ವಿನಿ ಅವರಿಗೆ ಮೈಂಡ್​ ಬ್ಲಾಕ್​ ಆಗಿತ್ತು. ಆಗ ಏನು ಮಾಡೋದು ಎಂದು ಅಶ್ವಿನಿ ಅವರಿಗೂ ತೋಚಿರಲಿಲ್ಲ. ಅಂಥ ಸಮಯದಲ್ಲೂ ಅಶ್ವಿನಿ ಅವರು ಬಾಡಿಗಾರ್ಡ್​ಗೆ ಫೋನ್​ ಮಾಡಿ ಬರಲು ಹೇಳಿದ್ದರಯ. ರಾಘು(ರಾಘವೇಂದ್ರ ರಾಜ್​ಕುಮಾರ್) ಅವರ ಪತ್ನಿಗೂ ಕರೆ ಮಾಡಿ ವಿಷ್ಯ ಹೇಳಿದ್ದಾರೆ. ನಾನು ಆಗ ಅಲ್ಲಿ ಇರಲಿಲ್ಲ. ಆ ಸುದ್ದಿ ಕೇಳಿ ಅಶ್ವಿನಿಗೆ ಕಾಲ್ ಮಾಡಿದೆ. ಆ ದಿನ ನನಗೆ ಕೈಕಾಲು ಆಡಲಿಲ್ಲ. ಕಂಪ್ಲೀಟ್ ಆಗಿ ಬ್ಲಾಂಕ್ ಆಗಿದ್ದೆ. ನನ್ನ ತಮ್ಮನಿಗೆ ದೇವರು ಒಂದು ಅವಕಾಶ ಕೊಡಲಿಲ್ಲ. ಪುನೀತ್​ಗೆ ಆ ದಿನ ಆರೀತಿ ಆದಾಗ ನನಗೆ ಕೈಕಾಲು ಆಡಲೇ ಇಲ್ಲ” ಎಂದು ನೋವಿನಲ್ಲೇ ಹೇಳಿದ ಶಿವಣ್ಣ, ”ಅಶ್ವಿನಿ ಅವರಿಗೆ ಈಗ ತುಂಬಾ ಕಷ್ಟವಾಗುತ್ತೆ. ನಾವೆಲ್ಲ ಜತೆಯಲ್ಲಿ ಇದ್ದರೂ ಅಪ್ಪು ಇಲ್ಲದೆ ಅಶ್ವಿನಿ ಅವರಿಗೆ ಕಷ್ಟ ಆಗುತ್ತೆ. ಅಪ್ಪು ಮಾಡುತ್ತಿದ್ದ ಸಮಾಜಸೇವೆಯನ್ನ ನಾನು ಮುಂದುವರಿಸಿವೆ. ಅಪ್ಪುವಿನ ಕೆಲಸಗಳನ್ನು ಅಶ್ವಿನಿ ಮತ್ತು ಅವರ ಮಕ್ಕಳು ಮಾಡಬೇಕು. ಅವರೊಂದಿಗೆ ನಾನಿರುವೆ” ಎಂದರು.

    ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್​ ಕುಮಾರ್​ ಪ್ರತಿಕ್ರಿಯೆ

    ”ಅಪ್ಪು ಯಾವಾಗಲೂ ಮಕ್ಕಳ ಜತೆ ಮಕ್ಕಳಾಗಿಯೇ ಇರುತ್ತಿದ್ದ. ಅಪ್ಪು ಮತ್ತು ನನ್ನ ಹಿರಿಯ ಮಗಳಿಗೂ ವಯಸ್ಸಿನ ಅಂತರ 11 ವರ್ಷ ಮಾತ್ರ. ಮಕ್ಕಳಂದ್ರೆ ಅಪ್ಪುಗೆ ತುಂಬಾ ಪ್ರೀತಿ. ನನಗೂ ಅಪ್ಪುಗೂ 13 ವರ್ಷ ವಯಸ್ಸಿನ ಅಂತರವಿದೆ. ನಾನು ಹೀರೋ ಆಗಿ ಆ್ಯಕ್ಟ್​ ಮಾಡುವಾಗ ಅಪ್ಪುಗೆ 11 ವರ್ಷ. ಗೀತಾ ಮತ್ತು ನನ್ನ ಮದುವೆ ಆದಾಗ ಅಪ್ಪು ಇನ್ನೂ ಚಿಕ್ಕವ. ನಮಗೆ ಆತ ಮಗನಂತೆಯೇ. ಅಪ್ಪುವಿನಲ್ಲಿ ಒಳ್ಳೇತನ, ಪ್ರೀತಿ, ನಿಷ್ಠೆ.. ಎಲ್ಲವೂ ಇತ್ತು. ಸಿನಿಮಾದಲ್ಲಿ ಯಾರಾದ್ರೂ ಅಪ್ಪುನ ಬೈದ್ರೆ ಕೋಪ ಬರ್ತಿತ್ತು. ಅವನಿಗೆ ಹಳ್ಳಿಯ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ನಾವಿಬ್ಬರೂ ಸೇರಿ ಸಿನಿಮಾ ಮಾಡೋಣ ಎಂದು ಅಪ್ಪು ಹೇಳುತ್ತಿದ್ದ. ಆ ವಿಧಿ ಅದಕ್ಕೆ ಅವಕಾಶವೇ ಕೊಡಲಿಲ್ಲ” ಎಂದು ಶಿವಣ್ಣ ಕಣ್ಣೀರು ಹಾಕಿದರು.

    ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್​ ಕುಮಾರ್​ ಪ್ರತಿಕ್ರಿಯೆ

    ರಜನಿಕಾಂತ್​ ಮಾಡಿದ ಆ ಒಂದು ಟ್ವೀಟ್​ಗೆ ಅಪ್ಪು ಅಭಿಮಾನಿಗಳು ಗರಂ!

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಅಪ್ಪು ಸಾವು ನ್ಯಾಯವೇ? ದೇವಿಗೆ ಅಭಿಮಾನಿ ಬರೆದ ಈ ಪತ್ರ ಓದುತ್ತಿದ್ದರೆ ಕಣ್ಣೀರಿನ ಜತೆಗೆ ಸಿಟ್ಟು ಬರುತ್ತೆ…

    ಪುನೀತ್​ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts