ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನ ಕಲಕುತ್ತಲೇ ಇದೆ. ಅಪ್ಪು ಇನ್ನಿಲ್ಲ ಎಂಬ ಕಹಿ ಸತ್ಯವನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಅಪ್ಪು ಲೈಫ್ ಸ್ಟೈಲ್ ಚೆನ್ನಾಗಿಯೇ ಇತ್ತು. ಆದರೂ ದಿಢೀರ್ ಸಾವು ಹೇಗಾಯ್ತು? ಈ ಕುರಿತು ಸಿಬಿಐ ತನಿಖೆ ನಡೆಸಬೇಕು, ಡಾ.ರಾಜ್ ಕುಟುಂಬದ ವೈದ್ಯ ಡಾ. ರಮಣ ರಾವ್ ಕ್ಲಿನಿಕ್ ವಿರುದ್ಧ ತನಿಖೆ ನಡೆಸಬೇಕು ಎಂಬ ಆಗ್ರಹ ಈಗಾಗಲೇ ಕೇಳಿ ಬಂದಿದೆ. ಪುನೀತ್ ಅವರ ಸಾವಿನ ಕುರಿತು ಅನುಮಾನ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. 4 ದಿನದ ಹಿಂದೆಯೇ ಡಾ.ರಾಜ್ ಕುಟುಂಬದ ವೈದ್ಯ ಡಾ. ರಮಣ ರಾವ್ ಕ್ಲಿನಿಕ್ ವಿರುದ್ಧ ತನಿಖೆ ನಡೆಸುವಂತೆ ಸದಾಶಿವನಗರ ಪೊಲೀಸ್ ಠಾಣೆಗೆ ಕುರುಬರಹಳ್ಳಿಯ ಅರುಣ್ ಪರಮೇಶ್ವರ್ ಎಂಬುವರು ದೂರು ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು, ಇದೀಗ ಇದೇ ಪೊಲೀಸ್ ಠಾಣೆಗೆ ಕನ್ನಡ ಜನಪರ ಚಿಂತಕ ಡಾ. ಆರ್. ಪ್ರಸಾದ್ ಎಂಬುವರು ದೂರು ನೀಡಿದ್ದು, ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್ ಅವರಿಗೆ ಇಸಿಜಿ ಮಾಡಿದಾಗ ಹೃದಯಾಘಾತ ಆಗುವ ಸೂಚನೆ ಕಂಡರೂ ವೈದ್ಯರು ನಿರ್ಲಕ್ಷಿಸಿದ್ದಾರೆ. ಸಮೀಪದಲ್ಲೇ ಇರುವ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಹೃದಯಘಟಕಕ್ಕೆ ಕಳಿಸಬಹುದಿತ್ತು. ದೂರದ ವಿಕ್ರಂ ಆಸ್ಪತ್ರೆಗೆ ಕಳಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸ್ಲೋ ಪಾಯಿಸನ್ ಆಗಿರುವ ಸಾಧ್ಯತೆ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಅ.29ರ ಬೆಳಗ್ಗೆ 11ರ ನಂತರ ರಮಣರಾವ್ ಅವರ ಕ್ಲಿನಿಕ್ಗೆ ಪುನೀತ್ ಅವರು ಭೇಟಿ ಕೊಟ್ಟಾಗ ಅವರಿಗೆ ಹೃದಯಾಘಾತ ಆಗುವ ಮುನ್ಸೂಚನೆ ಇದ್ದರೂ ವೈದ್ಯ ರಮಣರಾವ್ ಅವರು ಹತ್ತಿರದ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಪ್ರತ್ಯೇಕ ಹೃದಯ ಆರೈಕೆ ಘಟಕಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿ ಅಲ್ಲಿನ ಸ್ಪೆಷಲ್ ಕಾರ್ಡಿಯಾಲಜಿ ವಿಭಾಗಕ್ಕೆ ಕಳುಹಿಸಬಹುದಿತ್ತು. ಆದರೆ, ಇಲ್ಲಿಗೆ ಕಳುಹಿಸದೆ ಕನ್ಸಲ್ಟೆಂಟ್ ಡಾಕ್ಟರ್ಗಳಿರುವ ಹೃದಯ ಸಂಬಂಧಿ ಪ್ರತ್ಯೇಕ ವಿಭಾಗ ಇರದ ವಿಕ್ರಂ ಆಸ್ಪತ್ರೆಗೆ ಏಕೆ ಕಳುಹಿಸಿದರು. ಹೃದಯ ಸಂಬಂಧಿ ತುರ್ತು ವಿಚಾರ ಬಂದಾಗ ಹತ್ತಿರದ ಆಸ್ಪತ್ರೆಗೆ ಕಳುಹಿಸುವ ವೈದ್ಯಕೀಯ ಪ್ರಜ್ಞೆಯನ್ನ ಪ್ರದರ್ಶಿಸಬೇಕಿದ್ದ ಡಾ.ರಮಣರಾವ್ ನಿರ್ಲಕ್ಷಿಸಿ ಅಪ್ಪು ಸಾವಿಗೆ ಕಾರಣರಾಗಿದ್ದಾರೆ ಎಂದು ಕನ್ನಡ ಜನಪರ ಚಿಂತಕ ಡಾ. ಆರ್. ಪ್ರಸಾದ್ ದೂರಿನಲ್ಲಿ ವಿವರಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಅಸಹಜ ಸಾವಿಗೆ ಕಾರಣರಾಗಿರುವ ಡಾ. ರಮಣರಾವ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಪುನೀತ್ ಸಾವಿಗೂ ಮುನ್ನ 2 ದಿನ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಸೇವಿಸಿದ್ದ ಊಟ-ನೀರಿನಿಂದ ಆಗಿರಬಹುದಾದ ಸ್ಲೋ ಪಾಯಿಸನ್ ಬಗೆಗಿನ ಸತ್ಯಾಸತ್ಯತೆಗಳನ್ನೂ ತಿಳಿಸುವಂತೆ ನಾಡಿನ ಜನತೆ ಪರವಾಗಿ ದೂರು ಕೊಡುತ್ತಿದ್ದೇನೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷಿಸಬೇಕಾಗಿ ತಮ್ಮಲ್ಲಿ ವಿನಂತಿ. ನಾಡಿಗೆ ಬೇಕಾಗಿದ್ದ ಒಬ್ಬ ಹೃದಯಸ್ಪರ್ಶಿ ವ್ಯಕ್ತಿಯ ಸಾವು ರಹಸ್ಯವಾಗಿ ಉಳಿಯಬಾರದು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಡಾ. ಆರ್. ಪ್ರಸಾದ್ ಆಗ್ರಹಿಸಿದ್ದಾರೆ.
ಹತ್ತಿರದಲ್ಲಿರುವ ಎಂ.ಎಸ್. ರಾಮಯ್ಯಗೆ ಅಪ್ಪು ಅವರನ್ನ ಕಳಿಸದೆ ವಿಕ್ರಂ ಆಸ್ಪತ್ರೆಗೆ ರಮಶ್ರೀ ಆಸ್ಪತ್ರೆ ವೈದ್ಯರು ಕಳಿಸಿದ್ದಾರೆ. ಹೃದಯಾಘಾತವಾಗುವ ಮುನ್ಸೂಚನೆ ಕಂಡರೂ ವೈದ್ಯ ರಮಣರಾವ್ ವೈಜ್ಞಾನಿಕ ರೀತಿಯಲ್ಲಿ ಜೊತೆಯಾಗಿ ಎಂ.ಎಸ್.ರಾಮಯ್ಯ ಹೃದಯ ಘಟಕಕ್ಕೆ ಕರೆದೊಯ್ಯದೆ ಹೃದಯಕ್ಕೆ ತುರ್ತು ಸಂದರ್ಭದಲ್ಲಿ ಪ್ರಣಹಾನಿ ಸಂಭವಿಸಲು ಕಾರಣರಾಗಿ ಕರ್ತವ್ಯ ಲೋಪವೆಸಗಿದ್ದಾರೆ. ಆ ಮೂಲಕ ಪುನೀತ್ ರಾಜ್ಕುಮಾರ್ ಅವರ ಅಸಹಜ ಸಾವಿಗೆ ಡಾ. ರಮಣರಾವ್ ಕಾರಣರಾಗಿದ್ದಾರೆ ಎಂದು ಆರೋಪಿಸಿರುವ ಡಾ.ಆರ್. ಪ್ರಸಾದ್, ಆ ಕ್ಷಣ ರಮಣರಾವ್ ಅವರು ವೈದ್ಯಕೀಯ ಪ್ರಜ್ಞೆ ಪ್ರದರ್ಶಿಸಿದ್ದರೆ ಅಪ್ಪು ಸಾವನ್ನ ತಡೆಯಬಹುದಿತ್ತು ಎಂದಿದ್ದಾರೆ.
ಪುನೀತ್ ಆತ್ಮದ ಜತೆ ಮಾತನಾಡಿದ್ದಾಗಿ ವಿಡಿಯೋ ಅಪ್ಲೋಡ್ ಮಾಡಿದ ವ್ಯಕ್ತಿಗೆ ಅಭಿಮಾನಿಗಳಿಂದ ಛೀಮಾರಿ
ಅಪ್ಪು ಸಾವು ನ್ಯಾಯವೇ? ದೇವಿಗೆ ಅಭಿಮಾನಿ ಬರೆದ ಈ ಪತ್ರ ಓದುತ್ತಿದ್ದರೆ ಕಣ್ಣೀರಿನ ಜತೆಗೆ ಸಿಟ್ಟು ಬರುತ್ತೆ…
ಇಂದು 11ನೇ ದಿನದ ಪುಣ್ಯತಿಥಿ: ನೋವು ತುಂಬಿದ ಮನದಲ್ಲೇ ಪರೀಕ್ಷೆ ಬರೆಯಲು ಹೊರಟ ಪುನೀತ್ರ ಕಿರಿ ಮಗಳು
ಪುನೀತ್ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ