More

    BBK8: ನಿರೂಪಕ ಸುದೀಪ್​ಗೆ ಧನ್ಯವಾದ ತಿಳಿಸಿದ ಬಿಗ್​ಬಾಸ್​ ವೀಕ್ಷಕರು..!

    ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಬಿಗ್​ಬಾಸ್​ ಸೀಸನ್​ 8 ಮುಂಚೂಣಿಯಲ್ಲಿದೆ. ಕರೊನಾ ಲಾಕ್​ಡೌನ್​ನಿಂದ 75 ದಿನಗಳಿಗೆ ಮೊಟಕುಗೊಂಡಿದ್ದ ಬಿಬಿಕೆ-8 ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸಿ ಮೂರು ವಾರಗಳನ್ನು ಪೂರೈಸಿದ್ದು, ಇನ್ನೇನು ಅಂತಿಮ ಹಂತಕ್ಕೆ ಬಂದಿದೆ.

    ಶೋ ಪ್ರಮುಖ ಕೇಂದ್ರ ಬಿಂದುವೇ ನಿರೂಪಕ ಕಿಚ್ಚ ಸುದೀಪ್​ ವಾರಾಂತ್ಯದಲ್ಲಿ ಎರಡು ದಿನ ಕಾಣಿಸಿಕೊಳ್ಳುವ ಸುದೀಪ್​ ಬಿಗ್​ಬಾಸ್​ ಟಿಆರ್​ಪಿಗೆ ಬೂಸ್ಟ್​ ನೀಡುತ್ತಾರೆ. ಇನ್ನು ಸ್ಪರ್ಧಿಗಳಿಗೆ ನೀಡುವ ಟಾಸ್ಕ್​, ಕಿತ್ತಾಟಗಳು ಮತ್ತು ವಿವಾದಗಳು ಕಾರ್ಯಕ್ರಮದ ಮೇಲೆ ವೀಕ್ಷಕರ ಗಮನ ಸೆಳೆಯುತ್ತದೆ. ಇಡೀ ವಾರ ಬಿಗ್​ ಮನೆಯಲ್ಲಿ ಕಿತ್ತಾಟ, ವಿವಾದಗಳಿಂದ ಹೊತ್ತಿಕೊಂಡು ಮನಸ್ತಾಪವೆಂಬ ಕಾವನ್ನು ವಾರಂತ್ಯದಲ್ಲಿ ಸುದೀಪ್​ ಅವರು ಬಂದು ಬಗೆಹರಿಸಿ, ತಣ್ಣನೆ ಮಾಡಿ ಹೋಗುತ್ತಿದ್ದರು.

    ಸುದೀಪ್​ ಅವರ ವಾರದ ಪಂಚಾಯಿತಿಗಾಗಿಯೇ ಕಾದು ಕುಳಿತುಕೊಳ್ಳುವ ವೀಕ್ಷಕರಿದ್ದಾರೆ. ಅದೇ ರೀತಿ ಕೊನೆಯ ವಾರದ ಪಂಚಾಯಿತಿಯಲ್ಲಿ ಸುದೀಪ್​ ಅವರ ತೀರ್ಮಾನಗಳನ್ನು ನೋಡಿ ಬಿಗ್​ಬಾಸ್​ ವೀಕ್ಷಕರು ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಕಳೆದ ವಾರದ ಎಪಿಸೋಡ್​ನಲ್ಲಿ ಸುದೀಪ್​ ಅವರು ಜಗಳದ ಬಗ್ಗೆ ಮಾತನಾಡಿರಲಿಲ್ಲ. ಈ ವೇಳೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಆದರೆ, ನಿನ್ನೆ ಎಪಿಸೋಡ್​ನಲ್ಲಿ ಸುದೀಪ್​ ವೀಕ್ಷಕರ ಮನ ಗೆದ್ದಿದ್ದಾರೆ.

    ನಿನ್ನೆಯ ಎಪಿಸೋಡ್​ನಲ್ಲಿ ಸುದೀಪ್​ ಅವರು ಚಕ್ರವರ್ತಿ ಚಂದ್ರಚೂಡ್​, ಅರವಿಂದ್​ ಕೆ.ಪಿ ಮತ್ತು ದಿವ್ಯಾ ಉರುಡುಗ ಅವರಿಗೆ ಕ್ಲಾಸ್​ ತೆಗೆದುಕೊಂಡರು. ಸುದೀಪ್​ ಅವರ ತೆಗಳಿಕೆಗೆ ಚಂದ್ರಚೂಡ್​ ಅರ್ಹರು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ಚಂದ್ರಚೂಡ್​ ಒಬ್ಬರೇ ಸ್ಪರ್ಧಿಗಳ ಬಗ್ಗೆ ಕೆಟ್ಟ ಪದಗಳನ್ನು ಬಳಸುತ್ತಾರೆ ಮತ್ತು ವೈಯಕ್ತಿಕವಾಗಿ ದಾಳಿ ಮಾಡುತ್ತಾರೆಂದು ಆರೋಪಿಸಿದ್ದಾರೆ.

    ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಬಗ್ಗೆ ಮಾತನಾಡುತ್ತಾ, ಸುದೀಪ್ ತಮ್ಮ ಆಟದಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದ್ದರಿಂದ ಇಬ್ಬರಿಗೂ ವಾಸ್ತವದ ಬಗ್ಗೆ ತಿಳಿಸಿಕೊಟ್ಟರು. ಏನೇ ಇರಲಿ ವೀಕೆಂಡ್​ನಲ್ಲಿ ಪ್ರಸಾಂತ್​ ಸಂಬರಗಿ ಅವರಿಗೆ ಸುದೀಪ್​ ನ್ಯಾಯ ಒದಗಿಸಿ, ಮನೆಯನ್ನು ಮತ್ತೆ ಹತೋಟಿಗೆ ತಂದರು. (ಏಜೆನ್ಸೀಸ್​)

    ರಜಿನಿ ಮಕ್ಕಳ್​ ಮಂದ್ರಂ ಪಕ್ಷ ವಿಸರ್ಜನೆ: ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಅಂದ್ರು ರಜಿನಿಕಾಂತ್

    59ನೇ ವಸಂತಕ್ಕೆ ಕಾಲಿಟ್ಟ ಕರುನಾಡ ಚಕ್ರವರ್ತಿ: ಸರಳವಾಗಿ ಬರ್ತಡೇ ಆಚರಿಸಿಕೊಂಡ ಶಿವಣ್ಣ

    ಬಾಹ್ಯಾಕಾಶ ಪ್ರವಾಸ ಸಕ್ಸಸ್: ತೊಂಬತ್ತೇ ನಿಮಿಷದಲ್ಲಿ ಅಂತರಿಕ್ಷಯಾನ; ಸ್ಪೇಸ್ ರೇಸ್ ಗೆದ್ದ ಬ್ರಾನ್ಸನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts