ಲಖನೌ: ಆತ ಇನ್ನೂ ಯುವಕ. ಚಂದದ ಹುಡುಗಿಯನ್ನ ಹುಡುಕಿದ್ದ ಕುಟುಂಬ ಇದೇ ತಿಂಗಳು ಮದುವೆಯನ್ನೂ ನಿಶ್ಚಯಿಸಿತ್ತು. ಇನ್ನೇನು ಮದುವೆಗೆ ಮೂರೇ ದಿನ ಬಾಕಿಯಿತ್ತು. ಆಗಲೇ ಯುವಕನಿಗೆ ಗಂಡಾಂತರ ಎದುರಾಗಿದ್ದು ಮರ್ಮಾಂಗವೇ ಇಲ್ಲದಂತಾಗಿದೆ.
ಇದನ್ನೂ ಓದಿ: ರಹಸ್ಯ ಮಾಹಿತಿ ಮೇರೆಗೆ ವ್ಯಕ್ತಿಯ ಬ್ಲೂಟೂತ್ ಸ್ಪೀಕರ್ ಚೆಕ್ ಮಾಡಿದ ಅಧಿಕಾರಿಗಳಿಗೆ ಸಿಕ್ಕಿದ್ದೇನು?
ಉತ್ತರ ಪ್ರದೇಶದ ಕೊಟ್ವಾಲಿ ನಗರದ ಇಡ್ಗಾ ಪ್ರದೇಶದ ಸಮೀರ್ ತನ್ನ ಸ್ನೇಹಿತ ಪರ್ವೇಜ್ ಬಳಿ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಈ ವಿಚಾರವಾಗಿ ಆಗಾಗ ಜಗಳ ಆಗುತ್ತಿತ್ತಂತೆ. ಈ ಮಧ್ಯೆ ಸಮೀರ್ನ ಮದುವೆ ನಿಕ್ಕಿಯಾಗಿದೆ. ಇನ್ನೇನು ಮದುವೆಗೆ ಮೂರು ದಿನಗಳಿವೆ ಎನ್ನುವಾಗ ಪರ್ವೇಜ್ ತನ್ನ ಇಬ್ಬರು ಸ್ನೇಹಿತರನ್ನು ಸಮೀರ್ ಬಳಿ ಕಳುಹಿಸಿಕೊಟ್ಟಿದ್ದಾನೆ. ದುಡ್ಡಿಲ್ಲ ಎಂದ ಸಮೀರ್ನನ್ನು ಆ ಯುವಕರು ಕಾಡೊಂದಕ್ಕೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ದುಡ್ಡಿಗಾಗೇ ಸತ್ತಳು; ಸತ್ತ ಮೇಲೆ ಪ್ರಯಾಣಿಸಿದ್ದು ಐದು ದೇಶಕ್ಕೆ! ಅಂತೂ ಬಯಲಾಯಿತು ಭೂತದ ರಹಸ್ಯ
ಕಾಡೊಳಗೆ ಸಮೀರ್ನನ್ನು ಕರೆದೊಯ್ದ ಯುವಕರು ಆತನನ್ನು ಕಟ್ಟಿ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಸಮೀರ್ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸಮೀರ್ ತನ್ನ ಫೋನ್ನಿಂದ ಮನೆಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದ ಕುಟುಂಬಸ್ಥರು ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಮೀರ್ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್)
ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!
ಅಣ್ಣನ ಹೆಂಡತಿ ಜತೆ ತಮ್ಮನ ರೊಮ್ಯಾನ್ಸ್! ಮೈದುನನಿಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಅತ್ತಿಗೆ ಮಾಡಿದ್ದೇನು ಗೊತ್ತಾ?