ಹೈದರಾಬಾದ್: ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ದತ್ತು ಪುತ್ರಿ ಪ್ರತ್ಯುಷಾರ ಮದುವೆಗೆ ಭಾರಿ ಸಿದ್ಧತೆ ನಡೆದಿದೆ. ಡಿ. 28ರಂದು ಪ್ರತ್ಯುಷಾರ ಮದುವೆ ಬಹಳ ವಿಜೃಂಭಣೆಯಿಂದ ಕರೊನಾ ನಿಯಮ ಅನುಸಾರದಂತೆಯೇ ನಡೆಯಲಿದೆ.
ರಂಗಾರೆಡ್ಡಿ ಜಿಲ್ಲೆಯ ಕಾಶಂಪೇಟ್ ಮಂಡಲದ ಅಲ್ವಾಲ್ ಪಟಿಗಡ್ಡ ಗ್ರಾಮದ ಮಾತಾ ದೇವಸ್ಥಾನದಲ್ಲಿ ನಡೆಯಲಿದ್ದು, ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಸಮಾರಂಭ ಜರುಗಲಿದೆ. ಮದುವೆ ಕಾರ್ಯ ಭರದಿಂದ ಸಾಗಿದ್ದು, ಇದರ ಉಸ್ತುವಾರಿಯನ್ನು ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ.
ಇದನ್ನೂ ಓದಿ: ಮಹಿಳಾ ಸಚಿವೆಯ ಆನ್ಲೈನ್ ಭಾಷಣದ ವೇಳೆ ನೋಡಬಾರದ್ದನ್ನು ನೋಡಿ ಸಿಕ್ಕಿಬಿದ್ದ ಸಂಸದ!
ಚರಣ್ ರೆಡ್ಡಿ ಮತ್ತು ಪ್ರತ್ಯುಷಾ ನಿಶ್ಚಿತಾರ್ಥ ಅಕ್ಟೋಬರ್ನಲ್ಲಿ ಹೈದರಾಬಾದ್ನ ವಿದ್ಯಾನಗರದಲ್ಲಿ ನೆರವೇರಿತ್ತು. ಸಚಿವೆ ಸತ್ಯವತಿ ರಾಥೋಡ್, ಕಮಿಷನರ್ ದಿವ್ಯ ದೇವರಾಜನ್ ಮತ್ತು ಐಎಎಸ್ ಅಧಿಕಾರಿ ರಘುನಂದನ್ ರಾವ್ ಸೇರಿದಂತೆ ಅನೇಕ ಗಣ್ಯರು ನಿಶ್ಚತಾರ್ಥ ವ್ಯವಸ್ಥೆಯನ್ನು ನೋಡಿಕೊಂಡಿದ್ದರು.
ಪ್ರತ್ಯುಷಾ ಮದುವೆ ಆಗಮಿಸುವಂತೆ ಸಿಎಂ ಕೆಸಿಆರ್ಗೆ ಅಧಿಕಾರಿಗಳು ಆಹ್ವಾನ ನೀಡಿದ್ದಾರೆ. ಅಲ್ಲದೆ, ಪ್ರತ್ಯುಷಾಗೆ ನಿಮ್ಸ್ನಲ್ಲಿ ಕೆಲಸ ನೀಡುವ ಭರವಸೆಯನ್ನು ನೀಡಿದ್ದಾರಂತೆ.
ರಂಗಾರೆಡ್ಡಿ ಜಿಲ್ಲೆಯಲ್ಲಿ ತಂದೆ ಹಾಗೂ ಮಲತಾಯಿಯಿಂದ ಚಿತ್ರಹಿಂಸೆಗೆ ಒಳಗಾಗಿದ್ದ ಪ್ರತ್ಯುಷಾಳನ್ನು ಐದು ವರ್ಷಗಳ ಹಿಂದೆ ಕೆಸಿಆರ್ ದತ್ತು ಸ್ವೀಕರಿಸಿದ್ದರು. ಸಿಎಂ ಆದೇಶದ ಮೇರೆಗೆ ಆಕೆಯ ಜವಾಬ್ದಾರಿಯನ್ನು ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಹಿಸಿಕೊಂಡಿತ್ತು.
ಇದನ್ನೂ ಓದಿ: ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!
ಅಂದಹಾಗೆ ಪ್ರತ್ಯುಷಾ ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿದ್ದು, ಹೈದರಾಬಾದ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಕೆಸಿಆರ್ ತನ್ನ ಮದುವೆಗೆ ಖಂಡಿತವಾಗಿ ಬರುತ್ತಾರೆ ಎಂದು ಪ್ರತ್ಯುಷಾ ಹೇಳಿದ್ದರು. (ಏಜೆನ್ಸೀಸ್)
ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?
2ನೇ ವಯಸ್ಸಲ್ಲೇ ಬಾಲ್ಯ ವಿವಾಹವಾಗಿದ್ದ ಯುವತಿಗೆ ಕೊನೆಗೂ ಸಿಕ್ತು ಮುಕ್ತಿ: ಕನಸು ನನಸು ಮಾಡಿಕೊಳ್ಳುವತ್ತ ಹೆಜ್ಜೆ!