ಕೇರಳ: ಜನರೆಲ್ಲ ಒಂದುಗೂಡಿ ಕೊಡಲು ಶುರುಮಾಡಿದರೆ ಖಂಡಿತ ಏನು ಬೇಕಾದರೂ ಆಗಲು ಸಾಧ್ಯವಿದೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ. ಇಲ್ಲೊಂದು ಕಡೆ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಹಣದ ಮುಗ್ಗಟ್ಟಿದೆ ಎಂದು ಕರೆಕೊಟ್ಟಿದ್ದ ಕ್ರೌಡ್ಫಂಡಿಂಗ್ಗೆ ಅದ್ಭುತ ಜನಸ್ಪಂದನೆ ಸಿಕ್ಕಿದ್ದು, ಏಳೇ ದಿನಗಳಲ್ಲಿ 18 ಕೋಟಿ ರೂಪಾಯಿ ಸಂಗ್ರಹಗೊಂಡಿದೆ.
ಕೇರಳದ ಕಣ್ಣೂರಿನ ಮಹಮದ್ ಎಂಬ 18 ತಿಂಗಳ ಮಗು ಮಸ್ಕ್ಯುಲರ್ ಅಟ್ರೊಫಿ ಎಂಬ ಅಪರೂಪದ ಕಾಯಿಲೆಯಿಂದ ಬಳುತ್ತಿದ್ದಾನೆ. ಸ್ನಾಯುವನ್ನು ಕರಗಿಸುವಂಥ ಈ ವಿಚಿತ್ರರೋಗದಿಂದ ಬಳಲುತ್ತಿದ್ದ ಈ ಮಗುವನ್ನು ಕೋಜಿಕೋಡ್ನ ಎಂಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಚಿಕಿತ್ಸೆಗೆ ಜೋಲ್ಗೆನ್ಸ್ಮಾ ಎಂಬ ಔಷಧವನ್ನು ಕೊಡಬೇಕಿದೆ. ಇದು ಜಗತ್ತಿನಲ್ಲೇ ದುಬಾರಿ ಎಂಬ ಔಷಧಗಳ ಪೈಕಿ ಒಂದಾಗಿದ್ದು, ಅದನ್ನು ಖರೀದಿಸುವಷ್ಟು ಈ ಕುಟುಂಬ ಶಕ್ತವಿಲ್ಲ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಅದರಲ್ಲೂ ಈ ಮಗುವಿನ 15 ವರ್ಷಗಳ ಅಕ್ಕ ಅಫ್ರಾ ಕೂಡ ಇದೇ ಕಾಯಿಲೆಯಿಂದ ಬಳಲುತ್ತಿದ್ದು, ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಈಕೆಗೆ ಚಿಕಿತ್ಸೆ ಕೊಡಿಸುವುದು ವಿಳಂಬವಾದ ಕಾರಣ ಇವಳು ಪಾರ್ಶ್ವವಾಯುವಿಗೆ ಒಳಗಾಗಿದ್ದು, ಸೊಂಟದ ಕೆಳಗಿನ ಭಾಗ ನಿಯಂತ್ರಣ ಕಳೆದುಕೊಂಡಿದ್ದು, ವೀಲ್ಚೇರ್ನಲ್ಲೇ ಇರುವಂತಾಗಿದೆ. ಇನ್ನು ಮಹಮದ್ಗೆ ಇನ್ನು ಆರು ತಿಂಗಳೊಳಗೆ ಚಿಕಿತ್ಸೆ ಕೊಡಿಸಿದರೆ ಮಾತ್ರ ಅವನ ಕಾಯಿಲೆಯನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದರು.
ಇದನ್ನೂ ಓದಿ: ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!
ಅಮೆರಿಕದಿಂದ ಈ ದುಬಾರಿ ಔಷಧವನ್ನು ತರಿಸಿ ಚಿಕಿತ್ಸೆ ಕೊಡಿಸುವ ಸಲುವಾಗಿ ಸ್ಥಳೀಯ ಶಾಸಕ ಎಂ.ವಿಜಿನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಅವರು ಅಫ್ರಾ ಕೈಯಲ್ಲಿ ವಿನಂತಿ ಮಾಡಿಕೊಳ್ಳುವಂತೆ ಹೇಳಿ ವಿಡಿಯೋ ಮಾಡಿಸಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಮಾತ್ರವಲ್ಲ, ಈ ಬಗ್ಗೆ ಬಹಳಷ್ಟು ಮಾಧ್ಯಮಗಳಲ್ಲೂ ಸುದ್ದಿ ಪ್ರಕಟಗೊಂಡಿತ್ತು. ಒಟ್ಟಾರೆಯಾಗಿ ಇವೆಲ್ಲ ಎಷ್ಟರಮಟ್ಟಿಗೆ ಪರಿಣಾಮ ಬೀರಿತೆಂದರೆ, ಸೋಮವಾರ ಈ ಕುಟುಂಬ ಸದಸ್ಯರು, ಅಗತ್ಯಕ್ಕೂ ಮೀರಿದಷ್ಟು ಹಣ ಸಂಗ್ರಹವಾಗಿದ್ದು, ಇನ್ನು ಯಾರೂ ಇದಕ್ಕಾಗಿ ಹಣ ಕೊಡುವುದು ಬೇಡ ಎಂದು ವಿನಂತಿಸಿಕೊಳ್ಳುವಂತಾಗಿತ್ತು. ಸದ್ಯ ಅಗತ್ಯವಿರುವ ದುಬಾರಿ ಔಷಧವನ್ನು ಅಮೆರಿಕದಿಂದ ತರಿಸಿಕೊಳ್ಳುವ ಸಂಬಂಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ಸರ್ಕಾರವನ್ನು ಕೋರಿಕೊಂಡಿದೆ. (ಏಜೆನ್ಸೀಸ್)
ಕೋವಿಡ್ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್ ಡೆತ್!
ಇತ್ತೀಚೆಗೆ ಕೋವಿಡ್ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?
ಎಂಎಲ್ಎ ಮಗಳ ಮದ್ವೇಲಿ ಕೋವಿಡ್ ನಿಯಮ ಉಲ್ಲಂಘನೆ; ಶಾಸಕರ ಬದಲಿಗೆ ಪುತ್ರನ ಮೇಲೆ ಕೇಸ್ ದಾಖಲು!
ವಿಚ್ಛೇದನ ಘೋಷಿಸಿದ ಮಾರನೇ ದಿನವೇ ಕಿರಣ್ ರಾವ್ ಕೈಹಿಡಿದುಕೊಂಡು ಆಮೀರ್ ಖಾನ್ ಹೇಳಿದ್ದೇನು?