ನವದೆಹಲಿ: ಭಾರತ ಸರ್ಕಾರದಿಂದ ಭಾನುವಾರ “ಪರ್ಸನ್ ನಾನ್ ಗ್ರೇಟಾ” ಎಂದು ಘೋಷಿಸಲಾದ ಪಾಕಿಸ್ತಾನ ಮೂಲದ ಇಬ್ಬರು ಗೂಢಾಚಾರಿಗಳನ್ನು ಮಂಗಳವಾರ ಮುಂಜಾನೆ ಪಂಜಾಬಿನ ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ದಬ್ಬಲಾಯಿತು.
ಇದನ್ನೂ ಓದಿ: ತಾಯಿಯನ್ನೇ ಹತ್ಯೆಗೈದ ಮಗನಿಂದ ತಂದೆ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಕೊಪ್ಪಳ ಜನತೆ
ಪಾಕ್ ಐಎಸ್ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ನಿರ್ವಾಹಕರಾಗಿರುವ ಅಬಿದ್ ಹುಸೇನ್ ಮತ್ತು ಮುಹಮ್ಮದ್ ತಾಹೀರ್ ನವದೆಹಲಿಯಲ್ಲಿರುವ ಇಂಡಿಯನ್ ಆರ್ಮಿ ಸಂಸ್ಥೆಗಳ ಬಗ್ಗೆ ದಾಖಲೆ ಕಲೆಹಾಕುವ ಸಂದರ್ಭದಲ್ಲಿ ಭಾರತೀಯ ಗುಪ್ತಚರ ಏಜೆನ್ಸಿ ಗೂಢಾಚಾರಿಗಳನ್ನು ಖುದ್ದಾಗಿ ಸೆರೆಹಿಡಿದಿದ್ದರು. ಅವರನ್ನು ಇಂದು ಮುಂಜಾನೆ ಹೊರದಬ್ಬಲಾಗಿದೆ.
ರಾಜತಾಂತ್ರಿಕ ನಿಯೋಗಕ್ಕೆ ಸಂಬಂಧಿಸಿದಂತೆ ಗೂಢಾಚಾರಿಗಳ ಸ್ಥಾನಮಾನ ಹೊಂದಾಣಿಕೆ ಆಗದಿದ್ದರಿಂದ ಸರ್ಕಾರ ಅವರನ್ನು ಪರ್ಸನ್ ನಾನ್ ಗ್ರೇಟಾ ಎಂದು ಘೋಷಿಸಿ, 24 ಗಂಟೆಗಳನ್ನು ದೇಶ ಬಿಡುವಂತೆ ಭಾನುವಾರ ಖಡಕ್ ಸಂದೇಶ ರವಾನಿಸಿತ್ತು. ಅಲ್ಲದೆ, ಪಾಕಿಸ್ತಾನಿ ಪ್ರಜೆ ಜಾವೀದ್ ಸೇರಿದಂತೆ ಇಬ್ಬರು ಗೂಢಾಚಾರಿಗಳ ವಿರುದ್ಧ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಮತ್ತೆ ನೆರೆ ಬಂದ್ರೆ ದೇವರೇ ಗತಿ!
ವಿಚಾರಣೆ ವೇಳೆ ಗೂಢಾಚಾರಿಗಳಿಂದ ಕೆಲವು ವರ್ಗೀಕೃತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಗುಪ್ತಚರ ಎಜೆನ್ಸಿ ನಿರ್ದೇಶನದಂತೆ ಭಾರತೀಯ ಸೇನಾ ಪಡೆಗಳ ಮಾಹಿತಿಯನ್ನು ಕಲೆಹಾಕುತ್ತಿದ್ದೆವು. ಅದಕ್ಕಾಗಿ ಇಂಡಿಯನ್ ರೈಲ್ವೇ ಸಿಬ್ಬಂದಿಯನ್ನು ಗುರಿಯಾಗಿಸಿ ಮಾಹಿತಿಗಳನ್ನು ಕಲೆಹಾಕುಲು ಪ್ರಯತ್ನಿಸಿದೆವು ಎಂದು ಅವರೇ ಬಾಯ್ಬಿಟ್ಟಿದ್ದಾರೆ.
ರೈಲ್ವೆಯಲ್ಲಿ ಇಂಡಿಯನ್ ಆರ್ಮಿಯ ಪ್ರಯಾಣದ ಬಗ್ಗೆ ತಿಳಿಯಲು ರೈಲ್ವೆ ಉದ್ಯೋಗಿಗೆ ಅಬಿದ್ ಹುಸೇನ್ ಹಣದ ಆಮಿಷವೊಡ್ಡಿದ್ದ ಎಂದು ತಿಳಿದುಬಂದಿದೆ. ನನ್ನ ಹೆಸರು ಗೌತಮ್, ನನ್ನ ಸಹೋದರ ಓರ್ವ ಪತ್ರಕರ್ತ ನಾವು ಇಂಡಿಯನ್ ರೈಲ್ವೆ ಬಗ್ಗೆ ಒಂದು ಸ್ಟೋರಿ ತಯಾರು ಮಾಡುತ್ತಿದ್ದೇವೆ. ಈ ಬಗ್ಗೆ ಮಾಹಿತಿ ನೀಡಿದರೆ ಹಣವನ್ನು ನೀಡುತ್ತೇವೆ ಎಂದು ಆಮಿಷವೊಡ್ಡಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ನಿಶ್ವಿಕಾ ಜತೆ ಲಾಕ್ಡೌನ್ ಮಾತುಕಥೆ
ಪರ್ಸನ್ ನಾನ್ ಗ್ರೇಟಾ ಎಂದರೇನು?
ವಿದೇಶಿ ವ್ಯಕ್ತಿಯೊಬ್ಬ ಒಂದು ನಿರ್ಧಿಷ್ಟ ದೇಶದಲ್ಲಿ ಉಳಿದಿದ್ದು, ಆತನ ನಡೆ ಅನುಮಾನಾಸ್ಪದವಾಗಿದ್ದರೆ ಹಾಗೂ ರಾಜತಾಂತ್ರಿಕ ನಿಯೋಗದ ಸದಸ್ಯತ್ವದ ಸ್ಥಾನಮಾನ ಇಲ್ಲದಿದ್ದರೆ ಅಂತವರನ್ನು ದೇಶದಿಂದ ಹೊರದಬ್ಬುವುದು ಎಂದರ್ಥ.(ಏಜೆನ್ಸೀಸ್)
ಕರೊನಾ ತವರು ಚೀನಾದಲ್ಲಿ ಉದ್ಯೋಗಿಗಳಿಗೆ ಜೀವಂತ ಹುಳು ತಿನ್ನುವ ಶಿಕ್ಷೆ: ಕಾರಣ ಕೇಳಿದ್ರೆ ಬೆರಗಾಗ್ತೀರಾ!