ಮುಂಬೈ: ಐಪಿಎಲ್ನ 17ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿದ ಒಟ್ಟು 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್ ಗೆದ್ದು, ಉಳಿದೆಲ್ಲಾ ಪಂದ್ಯಗಳನ್ನು ಸೋಲುವ ಮೂಲಕ ಈ ಲೀಗ್ನಿಂದ ಹೊರಗುಳಿದಿದೆ. ಇದು ಎಂಐ ತಂಡದ ಅಭಿಮಾನಿಗಳಿಗೆ ಅತೀವ ಬೇಸರ ತಂದಿದೆ. ಐದು ಬಾರಿ ಚಾಂಪಿಯನ್ ಪಟ್ಟ ಪಡೆದ ಮುಂಬೈ ಇಂಡಿಯನ್ಸ್, ಈ ಸೀಸನ್ನಿಂದ ಈ ರೀತಿ ಹೊರಗುಳಿದಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಸದ್ಯ ಈ ವಿಚಾರ ನೆಟ್ಟಿಗರಲ್ಲಿ ತೀವ್ರ ಅಸಮಾಧಾನ ತಂದಿದೆ.
ಇದನ್ನೂ ಓದಿ: ವಿರಾಟ್ ಸಿಡಿಲಬ್ಬರದ ಬ್ಯಾಟಿಂಗ್ಗೆ ರೆಕಾರ್ಡ್ಗಳು ಉಡೀಸ್; ಐಪಿಎಲ್ನಲ್ಲಿ ಐತಿಹಾಸಿಕ ದಾಖಲೆ ಬರೆದ ಕಿಂಗ್ ಕೊಹ್ಲಿ
ಸತತ ಸೋಲುಗಳಿಂದ ಭಾರೀ ಮುಖಭಂಗ ಎದುರಿಸುತ್ತಿರುವ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡ ಮೊದಲ ದಿನದಿಂದಲೂ ತಂಡದಲ್ಲಿ ಯಾವುದು ಸರಿಯಿಲ್ಲ. ಈ ಹಿಂದೆ ಐದು ಬಾರಿ ಚಾಂಪಿಯನ್ಸ್ ಪಟ್ಟವನ್ನು ತಂದುಕೊಟ್ಟ ಹಿರಿಮೆ ಹೊಂದಿದ್ದ ರೋಹಿತ್ ಶರ್ಮಾರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ ಮುಂಬೈ ಫ್ರಾಂಚೈಸಿ, ಆ ಸ್ಥಾನವನ್ನು ಹಾರ್ದಿಕ್ಗೆ ಹಸ್ತಾಂತರಿಸಿತು. ಅಂದೇ ಇಡೀ ತಂಡದಲ್ಲಿ ಒಡಕು ಮೂಡಿದ್ದು ಕಾಣಿಸಿದ್ದು.
ಸತತವಾಗಿ ಹೀನಾಯ ಸೋಲು ಕಂಡ ತಂಡವನ್ನು ಗೆಲುವಿನ ಹಾದಿಗೆ ತರಲು ಕ್ಯಾಪ್ಟನ್ ಹಾರ್ದಿಕ್ ಶತಾಯಗತಾಯ ಪ್ರಯತ್ನ ಮಾಡಿದರು. ಆದರೆ, ಇದ್ಯಾವುದು ಫಲಿಸಲಿಲ್ಲ. ಕಳೆದ ಸೀಸನ್ಗಳಲ್ಲಿ ಹಿಟ್ ಮ್ಯಾನ್ ಕ್ಯಾಪ್ಟನ್ಸಿಯಲ್ಲಿ ತಂಡ ಎದುರಾಳಿಗೆ ಭಾರೀ ಪೈಪೋಟಿ ಕೊಡುವ ಮೂಲಕ ಲೀಗ್ನ ಟಾಪ್ ನಾಲ್ಕರೊಳಗೆ ಇರುತ್ತಿತ್ತು. ಆದ್ರೆ, ಈ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ಮೂಲಕ ಎಂಐ ಅಂಕಪಟ್ಟಿಯಲ್ಲಿ 9 ಸ್ಥಾನ ಅಲಂಕರಿಸುವುದರ ಜತೆಗೆ ಲೀಗ್ನಿಂದಲೇ ಎಲಿಮಿನೇಟ್ ಆಗಿ ಹೊರಗುಳಿದಿದೆ. ಟೀಮ್ನ ನೂತನ ನಾಯಕರಾಗಿ ನೇಮಕವಾದಾಗಿನಿಂದಲೂ ಪಾಂಡ್ಯಗೆ ಭಾರೀ ಹಿನ್ನಡೆಯಾಗಿದೆ.
ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲೂ ಜಯ: ಹರ್ಮಾನ್ಪ್ರೀತ್ ಕೌರ್ ಪಡೆ ಸರಣಿ ಕ್ವೀನ್ಸ್ವೀಪ್
ಇದೆಲ್ಲವೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಭಾರೀ ಅಸಮಾಧಾನ ಮೂಡಿಸಿದ್ದು, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೇಲಿರುವ ಸಿಟ್ಟು ಕಡಿಮೆಯಾಗುವಂತೆ ಮಾಡುತ್ತಿಲ್ಲ. ತಮ್ಮ ನೆಚ್ಚಿನ ತಂಡ ಈ ಸೀಸನ್ನಲ್ಲಿ ಇಂತಹ ಕಳಪೆ ಪ್ರದರ್ಶನ ನೀಡಲು ಹಾರ್ದಿಕ್ ನಾಯಕತ್ವವೇ ಕಾರಣ ಎಂದು ದೂರಿರುವ ಫ್ಯಾನ್ಸ್, ಅಂದೇ ರೋಹಿತ್ ಶರ್ಮಾರಿಗೆ ಕ್ಯಾಪ್ಟನ್ ಸ್ಥಾನ ಕೊಟ್ಟು, ತಾವು ಆಲ್ರೌಂಡರ್ ಆಟಗಾರನಾಗಿ ಆಡಿದ್ದರೆ, ಬಹುಶಃ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಧೋನಿ ಸಹ ಪಾಠ ಕಲಿಸಲು ಸಾಧ್ಯವಿಲ್ಲ… ಶಾಕಿಂಗ್ ಹೇಳಿಕೆ ನೀಡಿದ ಹಾರ್ದಿಕ್ ಪಾಂಡ್ಯ!
5 ರೂ. ಪಾರ್ಲೆ-ಜಿ ಬಿಸ್ಕತ್ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!