ಉತ್ತರಕನ್ನಡ: ಸಮುದ್ರದಲ್ಲಿನ ಅಲೆಗಳ ರಭಸಕ್ಕೆ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಪಲ್ಟಿಯಾಗಿವೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳದಿಂದ ಪಾತಿದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದ್ದು, ಹತ್ತಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಿಸಲಾಗಿದೆ.
ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು, ಅಲೆಯ ರಭಸದಿಂದಾಗಿ ವಾಪಸ್ ಬರಲಾಗದೆ ಅಪಾಯಕ್ಕೆ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಕೆಲವು ಪಾತಿದೋಣಿಗಳು ಪಲ್ಟಿಯಾಗಿ ನೀರಲ್ಲಿ ಮುಳುಗಿದ ಪ್ರಕರಣಗಳೂ ಕಂಡುಬಂದಿವೆ. ಈ ವೇಳೆ ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ಗಿಲ್ನೆಟ್ ದೋಣಿ ಮೂಲಕ ರಕ್ಷಣೆ ಮಾಡಲಾಗಿದೆ.
ಸಂಗೀತ ನಿರ್ದೇಶಕ ಡಾ.ಕಿರಣ್ ತೋಟಂಬೈಲ್ ಮೇಲೆ ರಾಡ್ನಿಂದ ಹಲ್ಲೆ, ತಲೆಗೆ ಗಾಯ
ಟೆನ್ಷನ್ ಬಿಡಿ, ಪರೀಕ್ಷೆ ಬರೆಯಿರಿ: ಎರಡೇ ಪ್ರಶ್ನೆಪತ್ರಿಕೆಗಳಲ್ಲಿ 6 ವಿಷಯಗಳು; ಉತ್ತರಕ್ಕೆ ಒಎಂಆರ್ ಶೀಟ್ ಬಳಕೆ