More

    ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆ ವಿರುದ್ಧ ಎಂಎಲ್‌ಸಿ ಗರಂ: ಅಧಿಕಾರಿಗೆ ಒಂದು ವಾರ ಡೆಡ್​​ಲೈನ್​​

    ಚಿತ್ರದುರ್ಗ: ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ವಿಧಾನಪರಿಷತ್​​​ ಸದಸ್ಯ ಕೆ.ಎಸ್.ನವೀನ್ ಸೋಮವಾರ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಲ್ಲಿಯ ಅವ್ಯವಸ್ಥೆ ವಿರುದ್ಧ ಗರಂ ಆದರ ಅವರು,ಕನಿಷ್ಠ ಶೌಚಗೃಹ ವ್ಯವಸ್ಥೆ ಇಲ್ಲದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಪ್ರಸ್ತುತ 64 ರೋಗಿಗಳಿಗೆ ಆರು ನೂರಕ್ಕೂ ಹೆಚ್ಚು ಬಾರಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ರೋಗಿಗಳಿಗೆ ಕೊಡಬೇಕಿರುವ ಎರಡು ಅತಿ ಮುಖ್ಯಔಷಧಗಳು ಪೂರೈಕೆ ಆಗುತ್ತಿಲ್ಲ. ಈ ಔಷಧಗಳನ್ನು ಮೂರು ದಿನದೊಳಗೆ ಸರಿಪಡಿಸಬೇಕು ಎಂದು ಸೂಚಿಸಿದರು.

    ಇಲ್ಲಿ ಅವ್ಯವಸ್ಥೆಗಳನ್ನು ವಾರದೊಳಗೆ ಸರಿಪಡಿಸಿ,ಕೇಂದ್ರ ನಿರ್ವಹಣೆಯ ಹೊರಗುತ್ತಿಗೆ ಪಡೆದಿರುವ ಏಜನ್ಸಿ ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಕರೆಯ ಬೇಕೆಂದು ಜಿಲ್ಲಾಸ್ಪತ್ರೆ ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ ಅವರಿಗೆ ಸೂಚಿಸಿದರು. ಈ ವೇಳೆ ಅನೇಕ ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡರು.

    ಭಾರತ ಸೇರಿ 16 ರಾಷ್ಟ್ರಗಳಿಗೆ ಸೌದಿ ನಿರ್ಬಂಧ: ಕಾರಣ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts