ಚಿಕ್ಕೋಡಿ: ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೆಕ್ಪೋಸ್ಟ್ನಲ್ಲಿ ಮಳೆ ಸಂಬಂಧಿತ ಅವಘಡ ಸಂಭವಿಸಿದ್ದು, ಸೇನಾ ಸಿಬ್ಬಂದಿ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ಇರುವ ಚೆಕ್ಪೋಸ್ಟ್ನಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ: ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?
ನಿಪ್ಪಾಣಿ ಮೂರಗುಡ ಮಧ್ಯ ಈ ಚೆಕ್ಪೋಸ್ಟ್ ಇದ್ದು, ಇಂದು ಸುರಿದ ಭಾರಿ ಗಾಳಿಮಳೆಗೆ ಚೆಕ್ಪೋಸ್ಟ್ನ ಛಾವಣಿ ಕಿತ್ತು ಹಾರಿ ಸಿಬ್ಬಂದಿ ಮೇಲೆ ಬಿದ್ದಿದ್ದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ಸಿಬ್ಬಂದಿ ಹಾಗೂ ತಾಲೂಕು ಆಡಳಿತದ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಗೆಲುವಿಗಾಗಿ ಗ್ಯಾಸ್ ಸಿಲಿಂಡರ್ ಮೊರೆಹೋದ ಡಿ.ಕೆ.ಶಿವಕುಮಾರ್; ಮೋದಿ ತಂತ್ರವನ್ನೇ ಅನುಸರಿಸಿದ ಕೆಪಿಸಿಸಿ!
ಗಾಯಾಳುಗಳ ಪೈಕಿ ಒಬ್ಬ ಬೂದಿಹಾಳ ಗ್ರಾಮದ ವಾಟರ್ಮ್ಯಾನ್ ಮಾರುತಿ ಪಾಟೀಲ ಎಂಬುದು ತಿಳಿದುಬಂದಿದೆ. ಇಬ್ಬರೂ ಗಾಯಾಳುಗಳನ್ನು ನಿಪ್ಪಾಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಹನ್ನೊಂದರ ಈ ಹುಡುಗಿ ಐನ್ಸ್ಟೀನ್-ಸ್ಟೀಫನ್ ಹಾಕಿಂಗ್ಗಿಂತಲೂ ಬುದ್ಧಿವಂತೆ!
ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?