More

    ಸಿದ್ದಗಂಗಾ ಶ್ರೀಗಳ ಮೇಲೆ ಮಿನಿ ಸಿನಿ ಸಿರೀಸ್! ಶ್ರೀಗಳ ಪಾತ್ರದಲ್ಲಿ ಬಿಗ್ ಬಿ?

    ಬೆಂಗಳೂರು: ಕನ್ನಡಿಗರಿಗೆ ನಡೆದಾಡುವ ದೇವರು ಎಂದ ತಕ್ಷಣ ನೆನಪಾಗುವುದು ತುಮಕೂರಿನ ಸಿದ್ದಗಂಗಾ ಶ್ರೀಗಳ ಹೆಸರು. ಅವರು ಮಾಡಿದ ಸಾಮಾಜಿಕ ಕೆಲಸಗಳ ಬಗ್ಗೆ ಈ ರಾಜ್ಯದಲ್ಲಿರುವ ಎಲ್ಲರಿಗೂ ತಿಳಿದೆ ಇದೆ. ಸಿದ್ದಗಂಗಾ ಶ್ರೀಗಳು ಮತ್ತು ನಟ ಪುನೀತ್ ರಾಜ್​ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಜನರಿಗೆ ಎಷ್ಟು ತಿಳಿಸಿದರೂ ಅದು ತುಂಬಾನೆ ಕಡಿಮೆಯಾಗುತ್ತೆ. ಹಾಗಾಗಿ, ಜನ ಅವರನ್ನು ನೆನಪಿಟ್ಟುಕೊಳ್ಳಲು ಸಿನಿರಂಗದ ವತಿಯಿಂದ ಹಲವು ಪ್ರಯತ್ನಗಳು ನಡೆಯುತ್ತಿವೆ. ಇದೀಗ, ಸಿದ್ದಗಂಗಾ ಶ್ರೀಗಳನ್ನು ಕುರಿತು ಒಂದು ಮಿನಿ ಸಿನಿ ಸೀರಿಸ್ ಸಿದ್ಧವಾಗುತ್ತಿದೆ.
    ಹೌದು, ಸಿದ್ಧಗಂಗಾ ಶ್ರೀಗಳ ವ್ಯಕ್ತಿತ್ವ ಎಲ್ಲರಿಗೂ ಜೀವನ ಹೇಗೆ ನಡೆಸಬೇಕು ಎನ್ನಲು ಒಂದೊಳ್ಳೆಯ ಉದಾಹರಣೆಯಾಗಿದೆ. ಇನ್ನು, ಅವರನ್ನು ಕುರಿತು ಮಾಡಲಾಗುತ್ತಿರುವ ಮಿನಿ ಸಿನಿ ಸೀರಿಸ್​ನಲ್ಲಿ ಶ್ರೀಗಳ ಪಾತ್ರದಲ್ಲಿ ನಟ ಅಮಿತಾಭ್ ಬಚ್ಚನ್ ನಟಿಸಬೇಕು ಎಂಬುದು ಈ ಚಿತ್ರತಂಡದ ಆಶಯವಾಗಿದೆ. ಇದೇ ಕಾರಣಕ್ಕೆ, ಬಾಲಿವುಡ್ ಬಿಗ್​ಬಿ ಅವರ ಕಾಲ್​ಶೀಟ್​ಗೆ ಸಂಪರ್ಕಿಸಲಾಗಿದೆ. ನಟ ಒಪ್ಪುವ ಎಲ್ಲಾ ಸಾಧ್ಯತೆಗಳು ಇದ್ದಾವೆ ಎನ್ನಲಾಗಿದೆ. ಬಿಗ್​ಬಿ ಒಪ್ಪಿದರೆ ಈ ಮೂಲಕ ಅವರು ಪೂರ್ಣಪ್ರಮಾಣದಲ್ಲಿ ಒಂದು ಕನ್ನಡದ ಸಿನಿ ಸಿರೀಸ್​ನಲ್ಲಿ ನಟಿಸಿದಂತೆ ಆಗುತ್ತೆ.
    ಅಂದಹಾಗೆ, ಈ ಮೊದಲು ‘ಅಮೃತಧಾರೆ’ ಎಂಬ ಸಿನಿಮಾದಲ್ಲಿ ನಟ ಅಮಿತಾಭ್ ನಟಿಸಿದರೂ ಅದು ಕೇವಲ ಒಂದು ಅತಿಥಿ ಪಾತ್ರದಲ್ಲಾಗಿತ್ತು. ಹಾಗೆಯೇ, ಇದಾದ ಬಳಿಕ ಬಿಗ್​ಬಿ ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಶ್ರೀಗಳ 115 ಜಯಂತೋತ್ಸವದ ಪ್ರಯುಕ್ತ ಅವರ ಜೀವನ ಚರಿತ್ರೆಯನ್ನು ಕುರಿತು ಒಂದು ಸಿನಿ ಸೀರಿಸ್ ಸಿದ್ಧವಾಗುತ್ತಿದೆ. ಜತೆಗೆ, ದೊಡ್ಡ ಮೊತ್ತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್​ ಹಾಗೂ ಸಂಸ್ಕೃತ  ಭಾಷೆಗಳಲ್ಲಿ ಈ ಸೀರಿಸ್ ಸಿದ್ಧವಾಗುತ್ತಿದ್ದು, ಇದರ ಸಾರಥ್ಯ ಡಾ. ಹಂಸಲೇಖ ಅವರ ನಿರ್ವಹಿಸಿಕೊಂಡಿದ್ದಾರೆ.
    ಈ ಸಿರೀಸ್​ನಲ್ಲಿ ಒಟ್ಟು 52 ಎಪಿಸೋಡ್​​ಗಳು ಇರಲಿದ್ದು, ಏಳಕ್ಕೂ ಹೆಚ್ಚು ತಂಡಗಳಲ್ಲಿ ಹಾಗೂ 300 ಅಧಿಕ ತಂತ್ರಜ್ಞರು ಇದಕ್ಕೆ ಕೆಲಸ ಮಾಡಲಿದ್ದಾರೆ. ಈ ಕುರಿತು ಮಾತಾಡಿದ ಹಂಸಲೇಖ ಅವರು, ”ಅಮಿತಾಭ್ ಬಚ್ಚನ್ ಅವರನ್ನು ಸಿದ್ದಗಂಗಾ ಶ್ರೀಗಳ ಪಾತ್ರವನ್ನ ಮಾಡಲು ಈಗಾಗಲೇ ಅಪ್ರೋಚ್ ಮಾಡಲಾಗಿದೆ. ಅವರು ಸಿನಿಮಾದ ಕಥೆಯನ್ನೂ ಕೇಳಿದ್ದಾರೆ. ಆದರೆ, ಸದ್ಯ ನಟ ಅಮಿತಾಭ್ ಅವರ ಆರೋಗ್ಯದಲ್ಲಿ ಏರುಪೇರಾಗಿರೋ ಕಾರಣ ಗ್ರೀನ್ ಸಿಗ್ನಲ್​ಗಾಗಿ ನಾವು ಕಾಯುತ್ತಿದ್ದೇವೆ”, ಎಂದು ತಿಳಿಸಿದ್ದಾರೆ.
    ಹಲವು ಮಾಹಿತಿಗಳ ಪ್ರಕಾರ, ಈ ಮಿನಿ ಸಿನಿ ಸಿರೀಸ್​ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಅವರ ಮಠದಲ್ಲಿ ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಜೊತೆಗೆ ರಾಜ್ಯದ ಹಲವು ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ 115 ಕ್ಕೂ ಗಾಯಕರು ಹಂಸಲೇಖ ಅವರ ಸಾರಥ್ಯದಲ್ಲಿ 6 ಹಾಡುಗಳನ್ನ ಹಾಡಲಿದ್ದಾರಂತೆ

    ರಣಬೀರ್ ಪತ್ನಿ ಪಾತ್ರದಲ್ಲಿ ರಶ್ಮಿಕಾ! ಕುತೂಹಲ ಕೆರಳಿಸಿದ ಮುಂದಿನ ಚಿತ್ರ…

    6 ತಿಂಗಳ ಬಳಿಕ ಮತ್ತೆ ಸಿನಿಮಾ ಶೂಟಿಂಗ್​ಗೆ ಮರಳಿದ ನಟ ಸಾಯಿ ಧರಮ್ ತೇಜ್! ವಿಡಿಯೋ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts