More

    ತೂತುಬಿದ್ದ ಗುಡಿಸಲು, ಸೆಕ್ಯುರಿಟಿ ಕೆಲಸ: ಕಷ್ಟದ ಹಾದಿ ಮೆಟ್ಟಿನಿಂತು ಪ್ರಾಧ್ಯಾಪಕನಾದ ಯುವಕನ ಯಶೋಗಾಥೆ!

    ಕಾಸರಗೋಡು/ರಾಂಚಿ: ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬ ಮಾತಿಗೆ ಕೇರಳ ಮೂಲದ 28 ವರ್ಷದ ರಂಜಿತ್​ ರಾಮಚಂದ್ರನ್ ಅವರು ತಾಜಾ ಉದಾಹರಣೆಯಾಗಿದ್ದಾರೆ.

    ತಮ್ಮ ಬಹುದಿನಗಳ ಕನಸನ್ನು ಇತ್ತೀಚೆಗಷ್ಟೇ ನನಸು ಮಾಡಿಕೊಂಡ ರಂಜಿತ್​,​ ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್​ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ. ಸಹನೆಯೊಂದಿಗೆ ಸಾಧಿಸುವ ಹಂಬಲವಿದ್ದರೆ, ಯಶಸ್ಸು ಕಂಡಿತ ಎನ್ನುವುದಕ್ಕೆ ಉದಾಹರಣೆ ಆಗಿರುವ ರಂಜಿತ್​ ಅವರ ಯಶೋಗಾಥೆ ಎಲ್ಲರಿಗು ಸ್ಫೂರ್ತಿ ನೀಡುತ್ತದೆ.

    ಬಡ ಕುಟುಂಬದಲ್ಲಿ ಹುಟ್ಟಿದ ರಂಜಿತ್​ ಅವರ ಮೂಲ ಕೇರಳದ ಕಾಸರಗೋಡು ಜಿಲ್ಲೆ. ಇವರ ತಾಯಿ ನರೇಗಾ ಕೆಲಸವನ್ನು ನಂಬಿದ್ದಾರೆ. ಸಣ್ಣ ಗುಡಿಸಲು, ತೂತು ಬಿದ್ದ ಛಾವಣಿ ಮತ್ತು ಇಕ್ಕಾಟದ ಕೋಣೆಯಲ್ಲೇ ರಂಜಿತ್​ ಕುಟುಂಬದ ವಾಸ. ಇವರು ಮನೆಯ ಹಿರಿಯ ಮಗ.

    ಇದನ್ನೂ ಓದಿರಿ: ಬಣ್ಣ ಬಣ್ಣದ ಕಾಗೆ ಹಾರಿಸಬೇಡಿ, ಇಂಥದ್ದನ್ನೆಲ್ಲ ತುಂಬಾ ನೋಡಿದ್ದೇವೆ: ಯೋಗೇಶ್ವರ್​ ವಿರುದ್ಧ ಪ್ರತಾಪ್‌ ಸಿಂಹ ಗರಂ

    ರಂಜಿತ್​ ಅವರು ರಾಜ್ಯದಲ್ಲಿ ಮರಾಠಿ ಮಾತನಾಡುವ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರೆಂದಿಗೂ ತಮ್ಮ ಈ ಸ್ಥಾನಕ್ಕೆ ಬರಲು ಮೀಸಲಾಯಿಯನ್ನು ಬಳಸಿಕೊಳ್ಳಲೇ ಇಲ್ಲ. ತನ್ನ ವಿದ್ಯಾಭ್ಯಾಸದೊಂದಿಗೆ ಮನೆಯವರಿಗೆ ಸಹಾಯ ಮಾಡಲು ನಿರ್ಧರಿಸಿದ ರಂಜಿತ್​, ಬಿಎಸ್​ಎನ್​ಎಲ್​ ಟೆಲಿಫೋನ್​ ಎಕ್ಸ್​ಚೇಂಜ್​ ಆಫೀಸ್​ನಲ್ಲಿ ರಾತ್ರಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸಕ್ಕೆ ಸೇರಿದರು. ಆವಾಗ ತಿಂಗಳಿಗೆ 4000 ಸಾವಿರ ರೂ. ಸಂಬಳ.

    ಅಂದಿನಿಂದ ಟೆಲಿಫೋನ್​ ಎಕ್ಸ್​ಚೇಂಜ್​ ಆಫೀಸ್​ ರಂಜಿತ್​ ಅವರಿಗೆ ತಾತ್ಕಾಲಿಕ ಮನೆಯಾಯಿತು. ಶಾಲೆ ಹಾಗೂ ಕಾಲೇಜಿನಿಂದ ನೇರವಾಗಿ ಇಲ್ಲಿಗೆ ಬರುತ್ತಿದ್ದರು. ಕೇವಲ ಊಟ ಮಾಡಲು ಮಾತ್ರ ಮನೆಗೆ ಹೋಗುತ್ತಿದ್ದರು. ತಮ್ಮ ನಿರಂತರ ಪರಿಶ್ರಮದಿಂದಾಗಿ ಹೈಸ್ಕೂಲ್​, ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ರಂಜಿತ್​, ಪಿಎಚ್​ಡಿ ಮಾಡಲು ಐಐಟಿ ಮದ್ರಾಸ್​ಗೆ ತೆರಳಿದರು. ಆದಾಗ್ಯು ದುಡ್ಡಿನ ಸಮಸ್ಯೆ ಅವರಿಗೆ ಕಾಡುತ್ತಲೇ ಇತ್ತು. ಹೀಗಾಗಿ ಐಐಟಿ ತೊರೆಯಲು ಬಯಸಿದರು.

    ಆದರೆ, ಐಐಟಿ ಕ್ಯಾಂಪಸ್​ನಲ್ಲಿ ನೆಲೆಸಿದ್ದ ಡಾ. ಸುಬಾಶ್​ ಸಸಿಧರನ್​ ಮತ್ತು ಅವರ ಪತ್ನಿ ವೈದೇಹಿ, ರಂಜಿತ್​ ನೆರವಿಗೆ ಧಾವಿಸಿದರು. ನನ್ನ ಮಾರ್ಗದರ್ಶಕರಾದ ಪ್ರೋಫೆಸರ್​ ಸುಬಾಶ್ ಅವರು ನನ್ನನ್ನು ಮನವೊಲಿಸಿ ಮತ್ತು ಹುರಿದುಂಬಿಸಿ ಐಐಟಿ ಬಿಡದಂತೆ ತಡೆದರು ಎಂದು ರಂಜಿತ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿರಿ: ಯುಗಾದಿ ಆಚರಿಸುವ ಖುಷಿಯಲ್ಲಿ ತವರಿಗೆ ಹೊರಟ ಕುಟುಂಬಕ್ಕೆ ಕಾದಿತ್ತು ಭೀಕರ ಸಾವು: ಮಗ ಅನಾಥ!

    ಉತ್ತಮ ಮಾರ್ಗದರ್ಶಕರ ಸಹಾಯದಿಂದ ತಮ್ಮ ಕನಸಿನ ಬೆನ್ನತ್ತಿ ಹೊರಟ ರಂಜಿತ್​ ಕೊನೆಗೂ 2016ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್​ಡಿ ಪಡೆದರು. ಇದಾದ ಬಳಿಕ ಬೆಂಗಳೂರಿನ ಕ್ರೈಸ್ಟ್​ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಪಕ ವೃತ್ತಿಗೆ ಸೇರಿಕೊಂಡರು. ಇದರ ಬೆನ್ನಲ್ಲೇ ಇದೀಗ ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್​ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.

    ಪ್ರತಿಷ್ಠಿತ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿರುವುದು ಸಾಧನೆಯೇ ಸರಿ. ಅದರಲ್ಲೂ ರಂಜಿತ್​ ಅವರ ಜೀವನ ಪಯಣ ನಿಜಕ್ಕೂ ಮಾದರಿಯಾಗಿದೆ. ಇದೀಗ ತಮ್ಮ ಫೇಸ್​ಬುಕ್​ನಲ್ಲಿ ತನ್ನ ಮನೆಯ ಚಿತ್ರವನ್ನು ಪೋಸ್ಟ್​ ಮಾಡಿ ನಾನು ಇಲ್ಲಿ ಹುಟ್ಟಿ ಇಂದು ಐಐಎಂ ಸಹಾಯಕ ಪ್ರಾಧ್ಯಪಕನಾಗಿದ್ದೇನೆಂದು ಬರೆದುಕೊಂಡಿದ್ದಾರೆ. ರಂಜಿತ್​ ಅವರ ಪೋಸ್ಟ್​ಗೆ ಮೆಚ್ಚುಗೆಗಳ ಸುರಿಮಳೆಯಾಗುತ್ತಿದೆ. ರಂಜಿತ್​ ಅವರ ಪಯಣ ಎಲ್ಲರಿಗೂ ದಾರಿದೀಪವಾಗಲಿ ಎಂದು ಎಲ್ಲರು ಬಯಸಿದ್ದಾರೆ. (ಏಜೆನ್ಸೀಸ್​)

    ಸುಪ್ರೀಂ ಕೋರ್ಟ್​ನಲ್ಲಿ ಕರೊನಾ ಅಲೆ! ನ್ಯಾಯಾಧೀಶರಿಗೆ ವರ್ಕ್​ ಫ್ರಂ ಹೋಂ!

    ತಟ್ಟೆ- ಲೋಟ ಬಡಿಯುತ್ತ ಬೀದಿಗಿಳಿದ ಮಕ್ಕಳು: ಪಾಲಕರು ಪೊಲೀಸ್​ ಠಾಣೆಯಲ್ಲಿ; ಕಂಗೆಟ್ಟ ಮಕ್ಕಳು ರಸ್ತೆಯಲ್ಲಿ!

    ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts