ಹೈದರಾಬಾದ್: ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ತನ್ನ ಮರ್ಮಾಂಗ ಕತ್ತರಿಸಿಕೊಂಡು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಪಾಲಕರು ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ದೀಕ್ಷಿತ್ ರೆಡ್ಡಿ (21) ಮೃತ ವಿದ್ಯಾರ್ಥಿ. ಈತ ಸಿಕಂದರಬಾದ್ನಲ್ಲಿರುವ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿದ್ದ. ಭಾನುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದರಿಂದ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಯತ್ನಿಸಿದ್ದ
ಮೃತ ದೀಕ್ಷಿತ್, ವಾರಗಂಲ್ ಜಿಲ್ಲೆಯ ದೇವರಪ್ಪುಳ ಗ್ರಾಮದವನು. ಸೊಮಿರೆಡ್ಡಿ ಮತ್ತು ಕರುಣಾ ದಂಪತಿಯ ಪುತ್ರ. ಸುಮಾರು 20 ವರ್ಷಗಳ ಹಿಂದೆಯೇ ವಾರಂಗಲ್ನಿಂದ ಹೈದರಾಬಾದ್ ಉಪನಗರ ಪಾಪಿರೆಡ್ಡಿಗೆ ಬಂದು ನೆಲೆಸಿದ್ದರು. ದೀಕ್ಷಿತ್ಗೆ ಓರ್ವ ಸಹೋದರಿ ಸಹ ಇದ್ದಾಳೆ. ಕೆಲವು ದಿನಗಳಿಂದ ದೀಕ್ಷಿತ ಮಾನಸಿಕ ರೋಗದಿಂದ ಬಳಲುತ್ತಿದ್ದ. ಯಾವಾಗಲೂ ಸಪ್ಪೆಯಾಗಿರುತ್ತಿದ್ದ. ಹೀಗಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ. ಈ ಹಿಂದೆಯೂ ಒಮ್ಮೆ ನಿದ್ರೆ ಮಾತ್ರೆಗಳನ್ನು ನುಂಗಿ ಸಾವಿಗೆ ಶರಣಾಗಲು ಯತ್ನಿಸಿದ್ದ. ಆದರೆ, ಅಪಾಯದಿಂದ ಪಾರಾಗಿದ್ದ.
ಈ ಬಾರಿ ನಡೆಯಿತು ದುರಂತ
ಆತ್ಮಹತ್ಯೆಗೆ ಯತ್ನಿಸಿದ ದಿನದಿಂದ ದೀಕ್ಷಿತ್ ಮೇಲೆ ಪಾಲಕರು ವಿಶೇಷ ಗಮನ ಹರಿಸಿದ್ದರು. ವೈದ್ಯರ ಮೇಲ್ವಿಚಾರಣೆಯೊಂದಿಗೆ ದೀಕ್ಷಿತ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಿರಿಯ ವಯಸ್ಸಿನಲ್ಲೇ ಮಾತ್ರೆಗಳನ್ನು ಸೇವಿಸಬೇಕಲ್ಲ ಎಂಬ ನೋವಿನಲ್ಲೂ ದೀಕ್ಷಿತ್, ಖಿನ್ನತೆಗೆ ಜಾರಿದ್ದರು. ಆದರೆ, ಈ ಬಾರಿ ಪಾಲಕರು ಭಾನುವಾರ ಹೊರಗಡೆ ಹೋಗಿ, ಸಂಜೆ 5 ಗಂಟೆಗೆ ಮನೆಗೆ ಮರಳಿದರು. ಈ ವೇಳೆ ಎಷ್ಟೇ ಬಾಗಿಲು ಬಡಿದರು ದೀಕ್ಷಿತ್ ಬಾಗಿಲ್ ತೆರೆಯಲೇ ಇಲ್ಲ. ಬಳಿಕ ಕಿಟಕಿಯಿಂದ ನೋಡಿದಾಗ ದೀಕ್ಷಿತ್, ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಪಾಲಕರು ಆಘಾತದಿಂದ ಕುಸಿದುಬಿದ್ದರು.
ಇದನ್ನೂ ಓದಿ: ಜಗದಲ್ಲಿ ಸಿಂಹಪಾಲು, ಜನಸಂಖ್ಯೆಯ ಸವಾಲು: ಪ್ರಪಂಚದ ಪ್ರತಿ ನೂರು ಜನರಲ್ಲಿ 17 ಭಾರತೀಯರು
ತೀವ್ರ ಮಾನಸಿಕವಾಗಿ ಕುಂದಿದ್ದ ದೀಕ್ಷಿತ್ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡು ಸಾವಿಗೆ ಶರಣಾಗಿದ್ದು, ಎಂಬಿಬಿಎಸ್ ಓದುತ್ತಿದ್ದ ಮಗನನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್)
ಬದಲಾಯಿತು ಪಾಕ್ ಮಹಿಳೆಯ ಜೀವನ ಶೈಲಿ: ಮಾಂಸಾಹಾರಿ ಸೀಮಾ ಈಗ ಸಸ್ಯಾಹಾರಿ, ನಿತ್ಯವೂ ದೇವರ ಸೇವೆ!
ಮದ್ವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ದಾರುಣ ಸಾವು: ಮುಗಿಲು ಮುಟ್ಟಿದ ಗಂಡ ಆಕ್ರಂದನ