ಬೆಂಗಳೂರು: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾಗಿರುವ ಐಪಿಎಲ್ ಆರಂಭಗೊಂಡು 52 ಪಂದ್ಯಗಳು ಮುಕ್ತಯಗೊಂಡರೂ ಯಾವ ತಂಡಗಳು ಇದುವರೆಗೆ ಅಧಿಕೃತವಾಗಿ ಫ್ಲೇಆಫ್ ಪ್ರವೇಶಿಸಿಲ್ಲ. ಐಪಿಎಲ್ನ ದ್ವಿತಿಯಾರ್ಧದಲ್ಲಿ ಪುಟಿದೆದ್ದಿರುವ ಆರ್ಸಿಬಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಹಲವು ತಂಡಗಳ ಫ್ಲೇಆಫ್ ಹಾದಿಗೆ ಸವಾಲಾಗಿ ನಿಂತಿದೆ.
ಮುಂದಿನ ಮೂರು ಪಂದ್ಯಗಳಲ್ಲಿ ಆರ್ಸಿಬಿ ಭರ್ಜರಿ ಪ್ರದರ್ಶನ ನೀಡಿ ಗೆದ್ದರೆ ಪ್ಲೇಆಫ್ ಆಸೆ ಜೀವಂತವಾಗಿರಲಿದೆ. ಆದರೆ, ಆರ್ಸಿಬಿ ಪ್ಲೇಆಫ್ ಪ್ರವೇಶಿಸಬೇಕೆಂದರೆ ಉಳಿದ ತಂಡಗಳ ಸೋಲು-ಗೆಲುವು ಮಹತ್ವದ ಪಾತ್ರ ವಹಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿರುವ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: ಮೋದಿ-ನಿತೀಶ್ ಟೀಕಿಸುತ್ತ ಮಹಿಳೆಯ ಜತೆ ಅಸಭ್ಯ ನೃತ್ಯ; ಆರ್ಜೆಡಿ ನಾಯಕನ ವಿಡಿಯೋ ವೈರಲ್
ವೆಂಟಿಲೇಟರ್ನಿಂದ ಹೊರಬಂದರೂ ಆರ್ಸಿಬಿ ಇನ್ನೂ ಐಸಿಯುನಲ್ಲಿದೆ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ನೋಡಿ ನಿಜವಾಗಿಯೂ ಖುಷಿಯಾಯಿತು. ಆದರೆ, ನಾವು ಇಲ್ಲಿ ಬೌಲರ್ಗಳ ಬಗ್ಗೆ ಮಾತನಾಡಬೇಕಾಗಿದೆ. ಒಂದು ಕಾಲದಲ್ಲಿ ಬ್ಯಾಟ್ಸ್ಮನ್ಗಳಿಗೆ ಸರಿಯಾದ ಸಹಕಾರ ನೀಡುತ್ತಿರಲಿಲ್ಲ. ಆದರೆ, ಇದೀಗ ಬೌಲರ್ಗಳು ಬ್ಯಾಟ್ಸ್ಮನ್ಗಳಿಗೆ ಸಹಕಾರ ನೀಡುತ್ತಿದ್ದು, ಇದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಆರಂಭದಿಂದಲೂ ಅವರು ವಿಭಿನ್ನವಾಗಿ ಆಟವಾಡುತ್ತ ಬಂದಿದ್ದಾರೆ. ಆದರೆ, ಸಿಕ್ಸರ್ನೊಂದಿಗೆ ಆಟವನ್ನು ಪ್ರಾರಂಭಿಸಿರುವುದನ್ನು ನಾನು ಎಂದಿಗೂ ನೋಡಿಲ್ಲ. ಆದರೆ,. ಆರ್ಸಿಬಿ ವೆಂಟಿಲೇಟರ್ನಿಂದ ಹೊರ ಬಂದಿದ್ದು, ಇನ್ನೂ ಐಸಿಯುನಲ್ಲಿದೆ ಎಂಬ ಅಂಶವನ್ನು ಯಾರು ಮರೆಯಬಾರದೆಂದು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.