ಬೆಳಗಾವಿ: ಹೆಂಡತಿ ಜತೆ ಜಗಳವಾಗಿದ್ದಕ್ಕೆ ಬೇಸರಗೊಂಡು ಲಕ್ಷಾಂತರ ರೂಪಾಯಿ ಹಣದೊಂದಿಗೆ ಗೋವಾ ಕ್ಯಾಸಿನೋಗೆ ಹೊರಟರೂ ಈತನ ಗ್ರಹಚಾರ ಕೆಟ್ಟಿತ್ತು. ಗೋವಾಗೆ ಹೋಗಿ ನಿರಾಳವಾಗಬೇಕು ಎಂದುಕೊಂಡಿದ್ದವ ಮಾರ್ಗಮಧ್ಯೆಯೇ ತಲೆಕೆಡಿಸಿಕೊಳ್ಳುವಂತಾಗಿದೆ.
ಮುಂಬೈನ ಗುತ್ತಿಗೆದಾರ ಬಾದಲ್ ನರ್ಬಾಜೆ ಎಂಬಾತನೇ ಇಂಥದ್ದೊಂದು ಫಜೀತಿಗೆ ಒಳಗಾಗಿದ್ದು. ಈತ ಪತ್ನಿ ಜತೆ ಜಗಳವಾಗಿದ್ದಕ್ಕೆ ತೀವ್ರ ಬೇಸರಗೊಂಡು 26 ಲಕ್ಷ ರೂ. ತೆಗೆದುಕೊಂಡು ಗೋವಾ ಕ್ಯಾಸಿನೋಗೆ ಹೊರಟಿದ್ದ. ಆದರೆ ಮುಂಬೈನಿಂದ ಗೋವಾಗೆ ಹೊರಟಿದ್ದ ಈತ ಮಾರ್ಗಮಧ್ಯೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ವಂಚಕನನ್ನು ಅಕ್ರಮವಾಗಿ ಬಂಧಿಸಿ ಬೆದರಿಸಿ 15 ಲಕ್ಷ ರೂ. ವಸೂಲಿ; ಪಿಎಸ್ಐ ಸೇರಿ ನಾಲ್ವರು ಪೊಲೀಸರ ಅಮಾನತು
ಬೆಳಗಾವಿಯ ಕರ್ನಾಟಕ ಚೌಕ್ ಸಮೀಪದ ಚೆಕ್ಪೋಸ್ಟ್ನಲ್ಲಿ ಪೊಲೀಸರು ಚೆಕ್ ಮಾಡುವಾಗ ಕಾರಿನಲ್ಲಿ 26 ಲಕ್ಷ ನಗದು ಇರುವುದು ಗೊತ್ತಾಗಿದೆ. ಚುನಾವಣೆ ನೀತಿಸಂಹಿತೆ ಇರುವುದರಿಂದ ಹಣದ ಬಗ್ಗೆ ದಾಖಲೆ ಕೇಳಿದ್ದಾರೆ. ಆದರೆ ಯಾವುದೇ ದಾಖಲೆ ಜೊತೆಗಿರದ್ದರಿಂದ ಈತ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವಂತಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ
ಪ್ರಾಮಾಣಿಕ ಎಸ್ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!