ಹರಿಯಾಣ: ಪ್ರಾಮಾಣಿಕ ಎಸ್ಐ ಎಂದು ಈಕೆಗೆ ಗಣರಾಜ್ಯೋತ್ಸವದಂದು ಪ್ರಶಸ್ತಿ ನೀಡಲಾಗಿತ್ತು. ಆದರೆ ಆಕೆಯೇ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾಳೆ. ಹರಿಯಾಣದ ಭವಾನಿ ಖೇರ ಪೊಲೀಸ್ ಠಾಣೆಯ ಎಸ್ಐ ಮುನ್ನಿದೇವಿ ಬಂಧಿತ ಆರೋಪಿ.
ಮಹಿಳೆಯೊಬ್ಬರ ಪ್ರಕರಣದಲ್ಲಿ ತನಿಖಾಧಿಕಾರಿ ಆಗಿದ್ದ ಮುನ್ನಿದೇವಿ, 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಳು. ಹೀಗಾಗಿ ಈ ಮಹಿಳೆ ಎಸಿಬಿಗೆ ದೂರು ನೀಡಿದ್ದು, ಅವರು ವಿಶೇಷ ತಂಡ ರಚಿಸಿ ರೆಡ್ಹ್ಯಾಂಡೆಡ್ ಆಗಿ ಹಿಡಿಯಲು ಜಾಲ ಹೆಣೆದಿದ್ದರು.
ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಷನ್ ಬ್ಯೂರೋ ಎಂಬ ಎನ್ಜಿಒ ಈ ಎಸ್ಐ ರೆಡ್ಹ್ಯಾಂಡೆಡ್ ಆಗಿ ಸಿಕ್ಕಿರುವ ವಿಡಿಯೋ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಇದೇ ಲೇಡಿ ಎಸ್ಐಗೆ ಉತ್ತಮ ಹಾಗೂ ಪ್ರಾಮಾಣಿಕ ಕರ್ತವ್ಯ ಎಂದು ಗಣರಾಜ್ಯೋತ್ಸವದಂದು ಗೌರವಿಸಲಾಗಿತ್ತು ಎಂಬ ಮಾಹಿತಿಯನ್ನೂ ಈ ವಿಡಿಯೋ ಜತೆ ಹಂಚಿಕೊಳ್ಳಲಾಗಿದೆ.
ಪ್ಯಾನ್-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?