ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ಕಲ್ಲು ಎಸೆದಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಸತ್ಯಮೂರ್ತಿ ಎಂಬಾತ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಇಂದು ಬೆಳಗ್ಗೆ 8 ಗಂಟೆಗೆ ಕಲ್ಲು ಎಸೆದಿದ್ದಾನೆ. ಈ ವಿಚಾರ ಸರಸ್ವತಿಪುರಂ ಠಾಣಾ ಪೊಲೀಸರಿಗೆ ತಿಳಿಯುತ್ತಿದ್ದಂತೆ ಎಫ್ಐಆರ್ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ನ ಮೊದಲ ಮುಖಾಮುಖಿಯಲ್ಲೇ ಇಂಡೋ-ಪಾಕ್ ಆಟಗಾರರ ನಡುವೆ ನಡೆದಿತ್ತು ಮಾತಿನ ಚಕಮಕಿ!
This is my 🪪 ID card. pic.twitter.com/tidkEKohvN
— SHIVAMURTHY M (@SHIVAMU4435782) October 4, 2023
ಸತ್ಯಮೂರ್ತಿಯ ಅವಾಂತರ ಇದೇ ಮೊದಲೇನಲ್ಲ ಎಂಬುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರವನ್ನು ಸತ್ಯಮೂರ್ತಿ ಒಡೆದು ಹಾಕಿದ್ದ. ಅಲ್ಲದೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಫೋಟೋಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿದ್ದ.
ROWDY. RAJENDRA
dc Mysoreರೌಡಿ ರಾಜೇಂದ್ರ
ಮೈಸೂರಿನ ಜಿಲ್ಲಾಧಿಕಾರಿ pic.twitter.com/VPgmoDeFb6— SHIVAMURTHY M (@SHIVAMU4435782) October 5, 2023
ಈ ಹಿಂದೆಯೂ ಈತನನ್ನು ವಶಕ್ಕೆ ಪಡೆಯಲಾಗಿತ್ತು. ಈತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಸರಸ್ವತಿಪುರಂ ಠಾಣಾ ಪೊಲೀಸರು ಘಟನೆ ಸಂಬಂಧ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
Success Story; ಮಾತೃಭಾಷೆಯನ್ನೇ ಅಸ್ತ್ರವನ್ನಾಗಿಸಿ ಸ್ಪರ್ಧಾ ಪರೀಕ್ಷೆ ಬರೆದ ವಿಜಯಪುರದ ಯಲಗೂರೇಶ್ ನಾಯಕ