More

    ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಕಲ್ಲು ಎಸೆದ ವ್ಯಕ್ತಿ ಪೊಲೀಸ್​ ವಶಕ್ಕೆ!

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ಕಲ್ಲು ಎಸೆದಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ.

    ಸತ್ಯಮೂರ್ತಿ ಎಂಬಾತ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಇಂದು ಬೆಳಗ್ಗೆ 8 ಗಂಟೆಗೆ ಕಲ್ಲು ಎಸೆದಿದ್ದಾನೆ. ಈ ವಿಚಾರ ಸರಸ್ವತಿಪುರಂ ಠಾಣಾ ಪೊಲೀಸರಿಗೆ ತಿಳಿಯುತ್ತಿದ್ದಂತೆ ಎಫ್ಐಆರ್ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್​ನ ಮೊದಲ ಮುಖಾಮುಖಿಯಲ್ಲೇ ಇಂಡೋ-ಪಾಕ್ ಆಟಗಾರರ​ ನಡುವೆ ನಡೆದಿತ್ತು ಮಾತಿನ ಚಕಮಕಿ!

    ಸತ್ಯಮೂರ್ತಿಯ ಅವಾಂತರ ಇದೇ ಮೊದಲೇನಲ್ಲ ಎಂಬುದು ಪೊಲೀಸ್​ ವಿಚಾರಣೆ ವೇಳೆ ತಿಳಿದುಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರವನ್ನು ಸತ್ಯಮೂರ್ತಿ ಒಡೆದು ಹಾಕಿದ್ದ. ಅಲ್ಲದೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಫೋಟೋಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿದ್ದ.

    ಈ ಹಿಂದೆಯೂ ಈತನನ್ನು ವಶಕ್ಕೆ ಪಡೆಯಲಾಗಿತ್ತು. ಈತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಸರಸ್ವತಿಪುರಂ ಠಾಣಾ ಪೊಲೀಸರು ಘಟನೆ ಸಂಬಂಧ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

    Success Story; ಮಾತೃಭಾಷೆಯನ್ನೇ ಅಸ್ತ್ರವನ್ನಾಗಿಸಿ ಸ್ಪರ್ಧಾ ಪರೀಕ್ಷೆ ಬರೆದ ವಿಜಯಪುರದ ಯಲಗೂರೇಶ್​ ನಾಯಕ

    ಇಸ್ರೇಲ್​​​​​ನಲ್ಲಿ ನಾಲ್ಕು ಹಗಲು, ಮೂರು ರಾತ್ರಿ…ಅಮೆರಿಕದಿಂದ ಬಂದ 18 ವರ್ಷದ ನಟಾಲಿ, ಮತ್ತವರ ತಾಯಿ ಜುಡಿತ್ ಎಲ್ಲಿದ್ದಾರೆ?

    VIDEO | ಹೆಚ್ಚಾಯ್ತು ರೀಲ್ಸ್​ ಹುಚ್ಚಾಟ: ರಾಮ್ ಕಿ ಪೈಡಿ ಘಾಟ್‌ನಲ್ಲಿ ಮಹಿಳೆಯ ಡ್ಯಾನ್ಸ್​​ ವಿಡಿಯೋ ವೈರಲ್; ಪೊಲೀಸರು ಹೇಳಿದ್ದಿಷ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts