ಚೆನ್ನೈ: ರೈಲು ಹಳಿ ದಾಟುವಾಗ, ರಸ್ತೆಯಲ್ಲಿ ನಡೆದು ಹೋಗುವಾಗ ಮತ್ತು ಡ್ರೈವಿಂಗ್ ಮಾಡುವಾಗ ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಬಳಕೆ ಮಾಡಬಾರದು. ಫೋನಿನಲ್ಲಿ ಮಗ್ನರಾಗಿ ಅಪಘಾತದಲ್ಲಿ ಪ್ರಾಣವನ್ನೇ ಕಳೆದುಕೊಂಡ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದ್ದರೂ ಕೆಲ ಜನರು ಈಗಲೂ ಅದೇ ತಪ್ಪು ಮಾಡುತ್ತಿರುವುದು ನೋಡುತ್ತಿದ್ದೇವೆ. ಆದರೆ, ಈ ರೀತಿ ಮಾಡುವುದು ನಮ್ಮ ಜೀವಕ್ಕೆ ಒಳ್ಳೆಯದಲ್ಲ ಎಂಬುದನ್ನು ನೆನಪಿನಲ್ಲಿಡಿಬೇಕು. ಇಲ್ಲೊಂದು ಯುವತಿ ಇದೇ ಕಾರಣಕ್ಕೆ ತನ್ನ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾಳೆ.
ಹೌದು, ರೈಲ್ವೆ ಕ್ರಾಸಿಂಗ್ ದಾಟುವಾಗ ರೈಲು ಡಿಕ್ಕಿಯಾಗಿ ಮಲಯಾಳಿ ವಿದ್ಯಾರ್ಥಿನಿ ಒಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನ ಇರುಂಬುಲಿಯೂರ್ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ನಿಖಿತಾ ಕೆ. ಸಿಬಿ (19) ಎಂದು ಗುರುತಿಸಲಾಗಿದೆ. ಈಕೆ ಕೇರಳದ ಕೊಲ್ಲಂ ಜಿಲ್ಲೆಯ ಪುತ್ತೋರ್ ನಿವಾಸಿ.
ಇದನ್ನೂ ಓದಿ: ಬಳಕೆದಾರರಿಗೆ ಬಲ: ಸಾಮಾಜಿಕ ಮಾಧ್ಯಮ ಕುಂದುಕೊರತೆ; ಮೇಲ್ಮನವಿ ಸಮಿತಿ ಕಾರ್ಯಾರಂಭ
ನಿಖಿತಾ ತಮಿಳುನಾಡಿನ ತಾಂಬರಂನಲ್ಲಿರುವ ಎಂಸಿಸಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ಮನೋವಿಜ್ಞಾನ ವಿದ್ಯಾರ್ಥಿನಿಯಾಗಿದ್ದಳು. ಇರುಂಬುಲಿಯೂರ್ನಲ್ಲಿ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಳು. ಇರುಂಬುಲಿಯೂರ್ನ ಹಳೆ ರೈಲ್ವೆ ಗೇಟ್ ದಾಟುವಾಗ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾಳೆ.
ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ ನಿಖಿತಾ ರೈಲ್ವೆ ಕ್ರಾಸಿಂಗ್ ಮಾಡುವಾಗ ತನ್ನ ಫೋನ್ನಲ್ಲಿ ಬಿಜಿಯಾಗಿದ್ದರಿಂದ ರೈಲನ್ನು ಗಮನಿಸಲಿಲ್ಲ ಎಂದು ತಿಳಿದುಬಂದಿದೆ. ಚೆನ್ನೈ-ಗುರುವಾಯೂರು ಎಕ್ಸ್ಪ್ರೆಸ್ ರೈಲು ನಿಖಿತಾಗೆ ಡಿಕ್ಕಿ ಹೊಡೆದುಕೊಂಡಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
ಆನ್ಲೈನ್ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ
ವಿಸ್ಮಯಕಾರಿ ಆನಿಮೆ!; ಮಕ್ಕಳ ನೆಚ್ಚಿನ ವರ್ಣರಂಜಿತ ಪ್ರಪಂಚ