ಬೆಂಗಳೂರು: ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಯುವಕ-ಯುವತಿಗೆ ಬುದ್ಧಿವಾದ ಹೇಳಲು ಹೋದ ಸಬ್ ಇನ್ಸ್ಪೆಕ್ಟರ್ ಮೇಲೆಯೇ ಖತರ್ನಾಕ್ ಜೋಡಿ ಕಾರು ಹರಿಸಲು ಯತ್ನಿಸಿ, ಪರಾರಿಯಾದ ಘಟನೆ ನಗರದ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಜ.20ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾರ್ಕ್ ಬಳಿ ಮಟ ಮಟ ಮಧ್ಯಾಹ್ನವೇ ಯುವಕ-ಯುವತಿ ಕಾರಿನ ಒಳಗಡೆ ಕಾಮಕೇಳಿ ಆರಂಭಿಸಿದ್ದರು. ಈ ವೇಳೆ ಪಾರ್ಕಿನಲ್ಲಿ ಸಾಕಷ್ಟು ಜನರಿದ್ದರು. ತಮ್ಮ ಅಶ್ಲೀಲ ವರ್ತನೆ ಅದಲ್ಲಿದ್ದವರಿಗೆ ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೇ ಜೋಡಿ ಮೈಮರೆತಿದ್ದರು.
ಜೋಡಿ ಮೈಮರೆತಿರುವುದನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಮಹೇಶ್ ಅವರು ಗಮನಿಸಿದ್ದು, ಇಬ್ಬರಿಗೂ ಬುದ್ಧಿವಾದ ಹೇಳಲೆಂದು ಕಾರಿನ ಬಳಿ ಹೋಗಿದ್ದಾರೆ. ಮೊದಲು ಕಾರಿನ ನಂಬರ್ ಅನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಹೇಶ್ರನ್ನು ನೋಡಿ ಜೋಡಿ, ಭಯಬಿದ್ದು ತಮ್ಮ ಅಸ್ತವ್ಯಸ್ತಗೊಂಡಿದ್ದ ತಮ್ಮ ಬಟ್ಟೆಗಳನ್ನು ಸರಿಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಪರಾರಿಯಾಗುವ ಸಮಯದಲ್ಲಿ ಎಸ್ಐ ಮಹೇಶ್ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಮಹೇಶ್ ಅವರು ಕಾರಿನ ಬಾನೆಟ್ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ, ಕಾರು ಚಲಾಯಿಸಿದ್ದಾನೆ. ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಮತ್ತೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಎಸ್ಐ ಕೆಳಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಎಸ್ಐ ಮಹೇಶ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ಮುಂದೆ ಸುಮ್ಮನಿರಲ್ಲ… ಪರ್ಸನಲ್ ಫೋಟೋಗಳನ್ನು ಹರಿಬಿಟ್ಟು ಪವಿತ್ರಾಗೆ ವಿಜಯಲಕ್ಷ್ಮೀ ಖಡಕ್ ಎಚ್ಚರಿಕೆ!