More

    ಜನಮಾನಸದಲ್ಲಿ ಉಳಿದ ಮೇರು ಅಭಿನೇತ್ರಿ ಜ್ಯೂಲಿ ಲಕ್ಷ್ಮೀ

    ಚಿಕ್ಕಮಗಳೂರು: ಪಂಚ ಭಾಷಾ ತಾರೆಯಾಗಿ ಸುದೀರ್ಘ ಕಾಲ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಮೇರು ಅಭಿನೇತ್ರಿ ಜ್ಯೂಲಿ ಲಕ್ಷ್ಮೀ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ ಬಣ್ಣಿಸಿದರು.

    ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಚಿಕ್ಕಮಗಳೂರು ಲಯನ್ಸ್ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟಿ ಜ್ಯೂಲಿ ಲಕ್ಷ್ಮೀ ಅಭಿನಯದ ಚಿತ್ರಗೀತೆಗಳ `ಚಂದನದ ಗೊಂಬೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಲಕ್ಷ್ಮೀ ತನ್ನ ೧೭ನೇ ವರ್ಷಕ್ಕೆ ವಿವಾಹವಾಗಿ ಅನೇಕ ಏಳುಬೀಳುಗಳ ನಡುವೆ ೭೦-೮೦ರ ದಶಕದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಅನೇಕ ಪ್ರತಿಭಾವಂತ ನಟರ ಜೊತೆಗೆ ನಟಿಸಿ ತಮ್ಮ ಛಾಪು ಮೂಡಿಸಿದವರು. ಪ್ರತಿಭೆಯೊಂದಿದ್ದರೆ ಯಾರ ಸಹಾಯವೂ ಇಲ್ಲದೆ ಸಾಧನೆ ಮಾಡಬಹುದು ಎನುವುದನ್ನು ಈ ಮೂಲಕ ಸಾಬೀತುಪಡಿಸಿದ್ದರು ಎಂದರು.
    ಇದೀಗ ಟಿ.ವಿ. ಕಾರ್ಯಕ್ರಮಗಳಲ್ಲಿ ಕೂಡ ಗುರುತಿಸಿಕೊಂಡಿರುವ ನಟಿ ಲಕ್ಷ್ಮೀ ಅವರು ತಮ್ಮ ತರ್ಕಬದ್ಧ ವಿಶ್ಲೇಷಣೆಗಳಿಂದ ಗಮನ ಸೆಳೆಯುತ್ತಿದ್ದಾರೆ. ಹಿಂದೊಮ್ಮೆ ನಟ ರವಿಚಂದ್ರನ್ ಅವರ ಸಾಹೇಬ ಚಲನಚಿತ್ರ ಚಿತ್ರೀಕರಣದ ವೇಳೆ ನಟಿ ಲಕ್ಷ್ಮೀ ಅವರು ಎಐಟಿ ಕಾಲೇಜಿಗೆ ಭೇಟಿ ನೀಡಿದ್ದರು ಎಂದು ಸ್ಮರಿಸಿದರು.
    ಅಧ್ಲಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಲಕ್ಷ್ಮೀ ಓರ್ವ ಪ್ರತಿಭಾವಂತ ನಟಿ. ಸಿನಿಮಾ ರಂಗದ ಅಭಿನಯ ಕ್ಷೇತ್ರದಲ್ಲಿ ಅನೇಕರು ಬಂದು ಹೋಗಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ಜನರು ನೆನಪಿಟ್ಟುಕೊಳ್ಳುತ್ತಾರೆ. ಅಂಥವರಲ್ಲಿ ಲಕ್ಷ್ಮೀ ಕೂಡ ಒಬ್ಬರಾಗಿದ್ದಾರೆ ಎಂದರಯ.
    ಗಾಯಕರಾದ ಎಂ.ಎಸ್.ಸುಧೀರ್, ರಾಯನಾಯಕ್, ದರ್ಶನ್, ಚೇತನ್‌ರಾಮ್, ಚೈತನ್ಯ. ಸುರೇಂದ್ರನಾಯ್ಕ್, ಕವಿತ ನಿಯತ್, ಪೂಜ್ಯ ಎಂ., ಪಂಚಮಿ, ಪ್ರಣಮ್ಯ, ಶ್ವೇತ ಭಾರದ್ವಾಜ್ ಹಾಗೂ ಪೃಥ್ವಿಶ್ರೀ ಅವರು ಲಕ್ಷ್ಮೀ ಅಭಿನಯದ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದರು. ಲಯನ್ಸ್ ಸಂಸ್ಥೆ ಸದಸ್ಯೆ ಶೋಭಾ ಗೋಪಿಕೃಷ್ಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts