ಚೆನ್ನೈ: ‘ನಾಗಮಂಡಲ’ ಖ್ಯಾತಿಯ ವಿಜಯಲಕ್ಷ್ಮೀ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ. ಅದರ ಜತೆಗೆ ಹಲವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಕಳೆದ ವರ್ಷ ನಟ ರವಿಪ್ರಕಾಶ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆಸ್ಪತ್ರೆಯಲ್ಲಿದ್ದುಕೊಂಡೇ ಪ್ರತಿಭಟಿಸಿದ್ದರು. ಇತ್ತೀಚೆಗಷ್ಟೇ, ರಾಜಕಾರಣಿ ಸೀಮಾನ್ ತಮಗೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ಅವರ ಮೇಲೆ ಆರೋಪ ಮಾಡಿದ್ದರು.
ಇದನ್ನೂ ಓದಿ: ಟಾಲಿವುಡ್ ಸ್ಪೆಷಲ್: ಹೊಸ ವರ್ಷಕ್ಕೆ ಹೊಸ ಚಿತ್ರಗಳ ಬಿಡುಗಡೆ
ಈ ಬಾರಿ ಅವರ ಮೇಲೆ ಆರೋಪ ಕೇಳಿ ಬಂದಿದೆ. ಆರೋಪ ಮಾಡಿರುವುದು ಒಬ್ಬ ಲಾಡ್ಜ್ ಓನರ್. ತಿರುವನ್ಮಿಯುರ್ ಪೊಲೀಸ್ ಸ್ಟೇಶನ್ನಲ್ಲಿ ವಿಜಯಲಕ್ಷ್ಮೀ ವಿರುದ್ಧ ಅವರು ಒಂದು ದೂರು ದಾಖಲಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನೆಂದರೆ, ಈ ವರ್ಷದ ಆರಂಭದಲ್ಲಿ ಬೆಂಗಳೂರು ಬಿಟ್ಟ ವಿಜಯಲಕ್ಷ್ಮೀ, ಚೆನ್ನೈನ ತಿರುವನ್ಮಯುರ್ನ ಲಾಡ್ಜ್ವೊಂದರಲ್ಲಿ ರೂಮ್ ಮಾಡಿಕೊಂಡು ಉಳಿದುಕೊಂಡಿದ್ದಾರೆ. ಕಳೆದ ಎಂಟು ತಿಂಗಳುಗಳಿಂದ ಲಾಡ್ಜ್ನಲ್ಲಿ ಬೀಡುಬಿಟ್ಟಿರುವ ವಿಜಯಲಕ್ಷ್ಮೀ ನಯಾಪೈಸೆ ಕೊಟ್ಟಿಲ್ಲ ಎಂಬುದು ಆ ಲಾಡ್ಜ್ ಓನರ್ನ ಆರೋಪ.
ಇದನ್ನೂ ಓದಿ: ರಾಧೆ ಶ್ಯಾಮ್ ಮೋಷನ್ ಪೋಸ್ಟರ್ ರಿಲೀಸ್
ಅದೇ ಕಾರಣಕ್ಕೆ ಅವರು ತಿರುವನ್ಮಿಯುರ್ ಪೊಲೀಸ್ ಸ್ಟೇಶನ್ಗೆ ಹೋಗಿ, ವಿಜಯಲಕ್ಷ್ಮೀ ತಮಗೆ ಕಳೆದ ಎಂಟು ತಿಂಗಳ ಬಿಲ್ ಪಾವತಿಸಿಲ್ಲ ಎಂದು ದೂರು ನೀಡಿದ್ದಾರೆ. ಎಂಟು ತಿಂಗಳಗಳಿಂದ ಮೂರು ಲಕ್ಷ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಆ ಹಣವನ್ನು ಕೊಡಿಸುವಂತೆ ಅವರು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು, ಸದ್ಯದಲ್ಲೇ ವಿಜಯಲಕ್ಷ್ಮೀ ಅವರನ್ನು ಕರೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.