ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಎಂದರೆ ಉರಿದು ಬೀಳುತ್ತಿದ್ದ ಸ್ವಯಂಘೋಷಿತ ಬಾಲಿವುಡ್ ಪಂಡಿತ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ, ಇದೀಗ ಸಲ್ಮಾನ್ ಖಾನ್ ಅವರ ಕ್ಷಮೆ ಕೇಳಿದ್ದಾರೆ. ತಮ್ಮ ಅರೆಸ್ಟ್ ಹಿಂದೆ ಸಲ್ಮಾನ್ ಖಾನ್ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆ; ಅಪ್ಪು ಮನೆಗೆ ಭೇಟಿ ನೀಡಿ ಸಚಿವರಿಂದ ಆಹ್ವಾನ
ಕೆಲವು ತಿಂಗಳ ಹಿಂದೆ ಕೆಆರ್ಕೆ ಅವರನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದರು. ತನ್ನನ್ನು ಬಂಧಿಸಿರುವ ಹಿಂದೆ ಸಲ್ಮಾನ್ ಖಾನ್ ಕೈವಾಡವಿದೆ ಎಂದು ಕೆಆರ್ಕೆ ಆರೋಪಿಸಿದ್ದರು. ಈಗ ಕೆಆರ್ಕೆ ಉಲ್ಟಾ ಹೊಡೆದಿದ್ದು, ತಮ್ಮ ಬಂಧನಕ್ಕೂ ಸಲ್ಮಾನ್ ಖಾನ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೆಆರ್ಕೆ, ‘ನನ್ನ ಬಂಧನದ ಹಿಂದೆ ಸಲ್ಮಾನ್ ಅವರ ಕೈವಾಡವಿದೆ ಎಂದು ನಾನು ತಿಳಿದುಕೊಂಡಿದ್ದೆ. ಆದರೆ, ಇದರೆ ಹಿಂದೆ ಬೇರೆ ಯಾರೋ ಇದ್ದಾರೆ ಎಂಬುದು ಗೊತ್ತಾಗಿದೆ. ಸಲ್ಮಾನ್ ಅವರ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ. ಅವರ ಮನಸ್ಸು ನೋಯಿಸಿದ್ದರೆ ನಾನು ಕ್ಷಮೆ ಕೋರುತ್ತೇನೆ. ಇನ್ನು ಮುಂದೆ ಅವರ ಚಿತ್ರಗಳ ವಿಮರ್ಶೆ ಮಾಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಸಲ್ಮಾನ್ ಅಭಿನಯದ ‘ರಾಧೇ’ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಿದ ಕೆಆರ್ಕೆ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಅವರ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮೊದಲಿಗೆ, ಇನ್ನು ಮುಂದೆ ಸಲ್ಮಾನ್ ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದ್ದ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ, ಆ ನಂತರ ಉಲ್ಟಾ ಹೊಡೆದಿದ್ದರು. ಸಲ್ಮಾನ್ ಖಾನ್ ಬಂದು ಕಾಲು ಹಿಡಿದುಕೊಂಡರೂ, ಅವರ ಚಿತ್ರಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದರು.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿದೆ ಮಂಸೋರೆ ನಿರ್ದೇಶನದ ‘19.20.21’ …
ಆ ನಂತರ ಈ ವರ್ಷ ಕೆಆರ್ಕೆ ಅವರನ್ನು ಮುಂಬೈನ ಪೊಲೀಸರು ಕೆಲವು ಕೇಸ್ಗಳಲ್ಲಿ ಬಂಧಿಸಿದ್ದರು. ಇದರ ಹಿಂದೆ ಸಲ್ಮಾನ್ ಇದ್ದಾರೆ ಎಂದು ಕೆಆರ್ಕೆ ಹಲ್ಲು ಮಸೆದಿದ್ದರು. ಈಗ ಸಲ್ಮಾನ್ ಕೈವಾಡವಿಲ್ಲ ಎಂದು ಕೆಆರ್ಕೆ ಕ್ಷಮೆ ಯಾಚಿಸಿದ್ದಾರೆ.
ಕಾಂತಾರ ಸಿನಿಮಾ ನೋಡಿದ್ರಾ ಎಂಬ ಪ್ರಶ್ನೆಗೆ ಸಮಯ ಸಿಕ್ಕಿಲ್ಲ ಎಂದು ಉತ್ತರ ಕೊಟ್ಟ ರಶ್ಮಿಕಾ!