ನವದೆಹಲಿ: ಈಗಾಗಲೆ ಏಕದಿನ ಮತ್ತು ಟಿ20 ವಿಶ್ವಕಪ್ಗಳನ್ನು ಜಯಿಸಿರುವ ಭಾರತ ತಂಡ, ಟೆಸ್ಟ್ ವಿಶ್ವಕಪ್ ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲೂ ಗೆದ್ದು ಮೂರೂ ಪ್ರಕಾರದಲ್ಲಿ ವಿಶ್ವಕಪ್ ಜಯಿಸಿದ ಮೊದಲ ತಂಡವೆನಿಸುವ ಹುರುಪಿನಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವುದಕ್ಕೆ ಮುನ್ನ ಭಾರತ ತಂಡಕ್ಕೆ 1983ರ ಏಕದಿನ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೆಲ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ತಾಳ್ಮೆ ಪ್ರದಶಿರ್ಸಬೇಕು. ಅತಿಯಾದ ಆಕ್ರಮಣಕಾರಿಯಾಗಬಾರದು. ಪಂದ್ಯವನ್ನು ಅವಧಿಯಿಂದ ಅವಧಿಗೆ ತಕ್ಕಂತೆ ಆಡಬೇಕು. ಯಾಕೆಂದರೆ ಇಂಗ್ಲೆಂಡ್ನಲ್ಲಿ ಪ್ರತಿ ನಿಮಿಷಕ್ಕೂ ವಾತಾವರಣ ಬದಲಾಗುತ್ತದೆ ಎಂದು ಕಪಿಲ್ ದೇವ, ವಿರಾಟ್ ಕೊಹ್ಲಿ ಬಳಗಕ್ಕೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯ ಕನ್ನಡ ಕಾಮೆಂಟರಿಯಲ್ಲೂ ನೇರಪ್ರಸಾರ
ಭಾರತ ಬಲಿಷ್ಠವಾದ ಬ್ಯಾಟಿಂಗ್ ವಿಭಾಗ ಹೊಂದಿದೆ. ಆದರೆ ಇಂಗ್ಲೆಂಡ್ ವಾತಾವರಣವನ್ನು ಸಮರ್ಥವಾಗಿ ನಿಭಾಯಿಸುವುದು ಪ್ರಮುಖವಾಗಿದೆ. ಇತ್ತೀಚೆಗೆ ಬ್ಯಾಟ್ಸ್ಮನ್ಗಳ ಪರಿಶ್ರಮಕ್ಕೆ ಬೌಲರ್ಗಳು ಸಮರ್ಥವಾಗಿ ನಿಲ್ಲುತ್ತಿದ್ದಾರೆ. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳ ಆಟವೇ ನಿರ್ಣಾಯಕವಾದುದು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ಗೂ ಕೆಲ ಅಮೂಲ್ಯ ಸಲಹೆಗಳನ್ನು ನೀಡಿರುವ 62 ವರ್ಷದ ಕಪಿಲ್ ದೇವ್, ಪಂತ್ ಈಗ ಪಕ್ವ ಕ್ರಿಕೆಟಿಗರಂತೆ ಕಾಣಿಸುತ್ತಿದ್ದಾರೆ. ಆದರೆ ಇಂಗ್ಲೆಂಡ್ನಲ್ಲಿ ಅವರು ಕ್ರೀಸ್ನಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅಗತ್ಯವಿದೆ. ಪ್ರತಿ ಎಸೆತವನ್ನೂ ಹೊಡೆಯಲು ಹೋಗಬಾರದು. ಇದೇ ಮಾತನ್ನು ಹಿಂದೆ ರೋಹಿತ್ ಶರ್ಮಗೂ ಹೇಳುತ್ತಿದ್ದೆ. ಅವರೂ ಎಲ್ಲ ಎಸೆತಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಪ್ರಯತ್ನಿಸಿ ಔಟಾಗುತ್ತಿದ್ದರು ಎಂದು ಹೇಳಿದ್ದಾರೆ.
ಹಾಟ್ ಫೋಟೋಗಳ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ ವಿಂಡೀಸ್ ಕ್ರಿಕೆಟಿಗನ ಪತ್ನಿ…
ಪೈಲ್ವಾನ್ಗಳಿಗೆ ನೀಡುವ ಆಹಾರವೇ ಬೇಕೆಂದ ಸುಶೀಲ್, ಪೊಲೀಸ್ ಕಸ್ಟಡಿಯಲ್ಲೇ ಬರ್ತ್ಡೇ!