ಲಖನೌ: ಮನುಷ್ಯನಿಗೆ ಮಾನಸಿಕ ನೆಮ್ಮದಿ ತುಂಬಾ ಮುಖ್ಯ. ಮಾನಸಿಕ ನೆಮ್ಮದಿ ಇಲ್ಲವಾದರೆ ಬದುಕುವುದು ಕಷ್ಟ ಸಾಧ್ಯ. ತನ್ನ ಸಂಬಂಧಿಯೊಬ್ಬರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ: ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್ ಬಾಸ್ ನೋಡಿದ ರೋಗಿ; ಕಾರಣವೇನು ಗೊತ್ತಾ?
ರಾಜ್ಯದ ಪ್ರತಾಪ್ಗಢ ಸನಿಹದ ಹಳ್ಳಿಯೊಂದರ ಮೂಲದ ಐಟಿಐ ವಿದ್ಯಾರ್ಥಿ ಧಿರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಧಿರೇಂದ್ರ ಪ್ರತಾಪಗಢದಲ್ಲಿ ಐಟಿಐ ಓದುತ್ತಿದ್ದ. ಈ ವಾರಾಂತ್ಯಕ್ಕೆ ಆತ ತನ್ನ ಊರಿಗೆ ಬಂದಿದ್ದಾನೆ. ಆದರೆ ಈತನಿಗೆ ಸೋದರ ಮಾವ ಭೀಷಂ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ. ಅದರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದ ಆತ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣವನ್ನು ಡೆತ್ ನೋಟ್ನಲ್ಲಿ ಬರೆದಿಟ್ಟು ಹೋಗಿದ್ದಾನೆ.
ಇದನ್ನೂ ಓದಿ: ಬಟ್ಟೆ ಬದಲಿಸುವಾಗ ನಿರ್ಮಾಪಕರು ವ್ಯಾನಿಟಿ ವ್ಯಾನ್ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ
ಅಪ್ಪಾ… ನಾನು ಹೇಡಿಯಲ್ಲ. ಆದರೆ ನನ್ನನ್ನು ಕ್ಷಮಿಸಿಬಿಡಿ. ನನಗೆ ಅವರು ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ನನ್ನ ರೀತಿ ಯಾರೂ ಮಾಡಿಕೊಳ್ಳಬೇಡಿ. ಸ್ಸಾರಿ ಅಮ್ಮ….
ಇದು ಮೃತ ಧಿರೇಂದ್ರ ಬರೆದಿರುವ ಡೆತ್ ನೋಟ್ನ ಸಾರಾಂಶ. ಯಾವ ವಿಚಾರದಲ್ಲಿ ಆತನ ಮಾವ ಮಾನಸಿಕ ಹಿಂಸೆ ಕೊಡುತ್ತಿದ್ದರು ಎನ್ನುವ ವಿಚಾರ ಇನ್ನೂ ತಿಳಿದುಬಂದಿಲ್ಲ. ಪೊಲೀಸ್ ತನಿಖೆಯ ನಂತರ ಇನ್ನಷ್ಟು ವಿಚಾರಗಳು ಹೊರಬರಬೇಕಿದೆ. (ಏಜೆನ್ಸೀಸ್)
ಲಾಕ್ಡೌನ್ ಬಗ್ಗೆ 8-10 ದಿನದಲ್ಲಿ ನಿರ್ಧಾರ; ಎಲ್ಲದಕ್ಕೂ ಸಿದ್ಧರಾಗಿರಿ
ಪಾಕಿಸ್ತಾನದಲ್ಲಿ ತಳ್ಳದೆ ಬಸ್ ಕೂಡ ಮುಂದೋಗಲ್ಲ; ಭಯಂಕರ ಟ್ರೋಲ್ ಆಗುತ್ತಿದೆ ಈ ವಿಚಾರ