More

    ಭಿನ್ನಾಭಿಪ್ರಾಯ ಬದಿಗಿಟ್ಟು ಬಿಜೆಪಿ ಜತೆ ಮೈತ್ರಿ ಮುಂದುವರಿಸುವುದಾಗಿ ಎಐಎಡಿಎಂಕೆ ಘೋಷಣೆ!

    ಚೆನ್ನೈ: ಭಿನ್ನಾಭಿಪ್ರಾಯಗಳ ನಡುವೆಯೇ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿಯನ್ನು ಮುಂದುವರಿಸುವುದಾಗಿ ತಮಿಳುನಾಡಿನ ಅತಿದೊಡ್ಡ ಪಕ್ಷ ಎಐಎಡಿಎಂಕೆ (ಆಲ್​ ಇಂಡಿಯಾ ಅಣ್ಣಾ ಡ್ರಾವಿಡ ಮುನ್ನೇತ್ರಾ ಕಳಗಂ) ಗುರುವಾರ ಘೋಷಿಸಿದೆ.

    ತಮಿಳುನಾಡಿನ ಎನ್​ಡಿಐ ಮೈತ್ರಿಕೂಟದಲ್ಲಿ ಎಐಎಡಿಎಂಕೆಯೇ ಮುಖ್ಯಸ್ಥ ಸ್ಥಾನದಲ್ಲಿರಲಿದೆ ಮತ್ತು ಬಿಜೆಪಿ ಮತ್ತು ಇನ್ನಿತರ ಪಕ್ಷಗಳು ನಮ್ಮ ಅಡಿಯಲ್ಲಿ ಬರಬೇಕು ಎಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಡಿ. ಜಯಕುಮಾರ್​ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಮದ್ವೆಯಾದ ಮರುದಿನವೇ ಬೆಂಗ್ಳೂರು ಟ್ರಾಫಿಕ್​ನಲ್ಲಿ ಪತ್ನಿ ಬಿಟ್ಟು ಪತಿ ಎಸ್ಕೇಪ್​! ಕಾರಣ ಕೇಳಿ ನವವಿವಾಹಿತೆ ಶಾಕ್​

    ತಮಿಳುನಾಡು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಸಿಆರ್​ಟಿ ನಿರ್ಮಲ್​ ಕುಮಾರ್​ ಸೇರಿದಂತೆ ಅನೇಕ ಬಿಜೆಪಿ ನಾಯಕರಿಗೆ ಎಐಎಡಿಎಂಕೆ ಜೊತೆ ಅಸಮಧಾನವಿದ್ದು, ಉಭಯ ಪಕ್ಷಗಳ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಎಐಎಡಿಎಂಕೆ, ಮೈತ್ರಿ ಧರ್ಮವನ್ನು ಉಲ್ಲಂಘಿಸಿದೆ ಎಂದು ಆಕ್ರೋಶ ಹೊರಹಾಕಿ ತೂತುಕುಡಿಯ ಕೆಲ ಬಿಜೆಪಿ ಕಾರ್ಯಕರ್ತರು ಎಐಎಡಿಎಂಕೆ ಮುಖ್ಯಸ್ಥ ಇ. ಪಳನಿಸ್ವಾಮಿ ಅವರ ಪ್ರತಿಕೃತಿಯನ್ನು ದಹಿಸಿತ್ತು.

    ಇತ್ತೀಚೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಎಐಎಡಿಎಂಕೆ ಪಕ್ಷದ ಐಕಾನ್​ ಮತ್ತು ಮಾಜಿ ಸಿಎಂ ಜೆ. ಜಯಲಲಿತಾರೊಂದಿಗೆ ತಮ್ಮನ್ನು ಹೋಲಿಕೆ ಮಾಡಿ, ಮಾತನಾಡಿದ್ದು ಎಐಎಡಿಎಂಕೆ ಪಕ್ಷಕ್ಕೆ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎಂದು ಆರೋಪವನ್ನು ಎಐಎಡಿಎಂಕೆ ಹೊತ್ತುಕೊಂಡಿದೆ. ಈ ಎಲ್ಲ ಕಾರಣದಿಂದ ಎರಡೂ ಪಕ್ಷಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಆದರೆ, ಇದು ಸಣ್ಣ ಸಮಸ್ಯೆಗಳಾಗಿದ್ದು, ಶೀಘ್ರದಲ್ಲೇ ಎಲ್ಲ ಬಗೆಹರಿಯಲಿದೆ ಎಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಡಿ. ಜಯಕುಮಾರ್​ ಅವರು ತಿಳಿಸಿದ್ದಾರೆ. ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾತನಾಡಿ, ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳು ಮೈತ್ರಿ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನದ ಹೈದರಾಬಾದ್​ನಲ್ಲಿ ಖ್ಯಾತ ಹಿಂದು ವೈದ್ಯನ ಬರ್ಬರ ಹತ್ಯೆ: ಕಾರು ಚಾಲಕ ಅರೆಸ್ಟ್​

    ತಮಿಳುನಾಡಿನಲ್ಲಿ ಕೇವಲ ನಾಲ್ಕು ಶಾಸಕರನ್ನು ಹೊಂದಿರುವ ಬಿಜೆಪಿ ತಾನು ಪ್ರಮುಖ ಪ್ರತಿಪಕ್ಷ ಎಂದು ಹೇಳಿಕೊಂಡ ಬಳಿಕ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತು. ಕಳೆದ ಲೋಕಸಭಾ ಚುನಾವಣೆಯಿಂದ ಎಐಎಡಿಎಂಕೆ ಮೂರು ಚುನಾವಣೆಗಳನ್ನು ತಮಿಳುನಾಡಿನಲ್ಲಿ ಸೋತಿದೆ. ಬಿಜೆಪಿ ಜೊತೆ ಮೈತ್ರಿಯಲ್ಲಿರುವಾಗಲೇ ಈ ಸೋಲು ಎದುರಾಗಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲೂ ಎಐಎಡಿಎಂಕೆ ಹೀನಾಯವಾಗಿ ಸೋತಿತು. (ಏಜೆನ್ಸೀಸ್​)

    VIDEO | ಊರಿಗೆಲ್ಲಾ ಊಟ ಹಾಕಿ ಶ್ವಾನಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿದ ಕುಟುಂಬ

    ಪಾಕಿಸ್ತಾನದ ಹೈದರಾಬಾದ್​ನಲ್ಲಿ ಖ್ಯಾತ ಹಿಂದು ವೈದ್ಯನ ಬರ್ಬರ ಹತ್ಯೆ: ಕಾರು ಚಾಲಕ ಅರೆಸ್ಟ್​

    ಸಿದ್ದರಾಮಯ್ಯ ಹೈವೆ ವೀಕ್ಷಣೆ ಬರುತ್ತಿಲ್ಲ, ಬರ್ತಿರೋದು ಜಾಲಿ ರೈಡ್​​ಗೆ; ಪ್ರತಾಪ್ ಸಿಂಹ ಟಾಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts