More

    ಬಕೆಟ್ ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ; ಆಕೆಯನ್ನು ರಕ್ಷಿಸಲು ಧಾವಿಸಿದ ಪತಿ ಪ್ರಾಣಾಪಾಯದಿಂದ ಪಾರು..

    ಬೆಳಗಾವಿ: ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ಹೆಂಡತಿ ಸಾವಿಗೀಡಾಗಿದ್ದು, ಆಕೆಯನ್ನು ರಕ್ಷಿಸಲು ಧುಮುಕಿದ ಪತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ.

    ಹಬೀಬಾ ಇಮ್ತಿಯಾಜ್ ಮೋಮಿನ್ (28) ಮೃತಪಟ್ಟಿದ್ದು, ಪತಿ ಇಮ್ತಿಯಾಜ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಬ್ಬರು ಬಟ್ಟೆ ತೊಳೆಯಲೆಂದು ಘಟಪ್ರಭಾ ಎಡದಂಡೆ ಕಾಲುವೆ ಬಳಿಗೆ ಹೋಗಿದ್ದರು. ಬಟ್ಟೆ ಒಗೆಯುತ್ತಿದ್ದಾಗ ಕೈಜಾರಿದ ಬಕೆಟನ್ನು ಹಿಡಿಯಲು ಹೋದ ಹೆಂಡತಿ ಕಾಲು ಜಾರಿ ನೀರುಪಾಲಾಗಿದ್ದಳು.

    ಇದನ್ನೂ ಓದಿ: ಐದು ದಿನ ಶವಗಳ ಜತೆಗಿದ್ದ ಎರಡೂವರೆ ವರ್ಷದ ಮಗುವಿಗೆ ಇಂದು ರಕ್ತಪರೀಕ್ಷೆ!; ಒಂದೇ ಕುಟುಂಬದ ಐವರ ಸಾವಿನ ಪ್ರಕರಣ

    ಹೆಂಡತಿ ನೀರಿಗೆ ಬಿದ್ದಿದ್ದನ್ನು ನೋಡಿ ಪತಿ ಕೂಡ ನೀರಿಗೆ ಧುಮುಕಿದ್ದಾನೆ. ಆದರೆ ನೀರಿನ ಹರಿವು ರಭಸದಲ್ಲಿ ಇದ್ದಿದ್ದರಿಂದ ಪತ್ನಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆಕೆಯ ಶವ ಸುಮಾರು 500 ಮೀಟರ್​ ದೂರದಲ್ಲಿ ಸಿಕ್ಕಿದೆ. ಪತ್ನಿಯನ್ನು ರಕ್ಷಿಸಲು ಹೋಗಿ ಅಪಾಯಕ್ಕೆ ಸಿಲುಕಿದ ಪತಿಯನ್ನು ಸ್ಥಳೀಯರು ಪಾರು ಮಾಡಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಿನ್ನೆಯಷ್ಟೇ ವಿದೇಶದಿಂದ ಬಂದಿದ್ರು, ಇಂದು ಸುಟ್ಟು ಕರಕಲಾದ್ರು; ಸಿಲಿಂಡರ್ ಸ್ಫೋಟಕ್ಕೆ ಅಮ್ಮ-ಮಗಳು ಬಲಿ

    ಗಂಡ-ಹೆಂಡಿರಂತೆ ಇದ್ದ ಇಬ್ಬರು ‘ವಿವಾಹಿತರು’ ಮನೆಯಲ್ಲೇ ಹೆಣವಾದರು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆಯೋ ಆತ್ಮಹತ್ಯೆಯೋ?!

    ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್​; ಇತ್ತ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಸಸ್ಪೆಂಡ್..​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts