ಮುಂಬೈ: ಭಾರತದಲ್ಲಿ 5ಜಿ ಅನುಷ್ಠಾನದ ಬಗ್ಗೆ ಬಾಲಿವುಡ್ನ ಖ್ಯಾತ ನಟಿ ಮತ್ತು ‘ಪ್ರೇಮಲೋಕ’ದ ಚೆಲುವೆ ಹೈಕೋರ್ಟ್ನಲ್ಲಿ ಕೇಸ್ ಹಾಕಿದ್ದು ಗೊತ್ತೇ ಇದೆ. ಇಂದು ದೆಹಲಿ ಹೈಕೋರ್ಟ್ನಲ್ಲಿ ಈ ವಿಚಾರಣೆ ನಡೆದಿದ್ದು, ಅರ್ಜಿ ದೋಷಪೂರಿತವಾಗಿದ್ದು, ಪ್ರಚಾರಕ್ಕಾಗಿ ಈ ರೀತಿ ಕೇಸ್ ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಸಾಹಸ ಕಲಾವಿದರ ಬೆನ್ನಿಗೆ ನಿಂತ ಸಲ್ಮಾನ್ ಖಾನ್ ಮತ್ತು ನೆಟ್ಫ್ಲಿಕ್ಸ್ ಇಂಡಿಯಾ
ಜಗತ್ತಿನಾದ್ಯಂತ ಫೋನ್ ಕಂಪೆನಿಗಳು, 5ಜಿ ನೆಟ್ವರ್ಕ್ ಅನುಷ್ಠಾನಗೊಳಿಸುವುದಕ್ಕೆ ಪ್ರಯತ್ನ ನಡೆಸುತ್ತಿವೆ. ಭಾರತ ಸಹ ಈ 5ಜಿ ರೇಸ್ನಿಂದ ಹಿಂದೆ ಬಿದ್ದಿಲ್ಲ. ಆದರೆ, ಇದರಿಂದ ಮುಂದಿನ ತಲೆಮಾರಿನ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಎದುರಾಗುವ ಸಾಧ್ಯತೆ ಮುನ್ನ ಈ ತಂತ್ರಜ್ನಾನ ಸುರಕ್ಷಿತ ಮತ್ತು ಇದರಿಂದ ಮನುಷ್ಯರು ಮತ್ತು ಪ್ರಾಣಿ-ಪಕ್ಷಿಗಳಿಗೆ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಪ್ರಮಾಣೀಕರಿಸಬೇಕಿರುವುದರಿಂದ ಕೇಸ್ ದಾಖಲಿಸಿದ್ದಾಗಿ ಜೂಹಿ ಹೇಳಿದ್ದರು. ಈ ನಿಟ್ಟಿನಲ್ಲಿ ನ್ಯಾಯಾಲಯವು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಬೇಕು ಎಂದು ಅವರು ಕೋರಿದ್ದರು.
ಇಂದು ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಆರ್. ಮಿಧಾ, ನ್ಯಾಯಾಲಯಕ್ಕೆ ಬರುವ ಮುನ್ನ ಜೂಹಿ ಚಾವ್ಲಾ ಅವರು ಈ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕಿತ್ತು ಸರ್ಕಾರದಿಂದ ಸಮಂಜಸ ಉತ್ತರ ಬರದಿದ್ದರೆ ನ್ಯಾಯಾಲಯಕ್ಕೆ ಬರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
5ಜಿ ಅನುಷ್ಠಾನದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ಅವರು, ಅರ್ಜಿಯು ದೋಷಪೂರಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಪ್ರಚಾರ ಪಡೆಯುವುದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಯೋಪಿಕ್ ಆಗ್ತಿದೆ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಜೀವನ; ಹೀರೋ ಯಾರಿರಬಹುದು ಹೇಳಿ?
ಇತ್ತೀಚಿನ ದಿನಗಳಲ್ಲಿ ಪರಿಸರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಜೂಹಿ ಚಾವ್ಲಾಗೆ ಇದರಿಂದ ತೀವ್ರ ಹಿನ್ನೆಡೆ ಉಂಟಾಗಿದೆ.
ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್ ತಾರೆ…