ಭೋಪಾಲ್: ಯಾವುದೋ ಪ್ರಕರಣದಲ್ಲಿ ಜೈಲು ಸೇರಿದ್ದ ತಂದೆಯನ್ನು ಬಿಡಿಸುವುದಕ್ಕಾಗಿ ಒದ್ದಾಡುತ್ತಿದ್ದ ಮಗಳೊಬ್ಬಳು ರೈಲಿನಲ್ಲೇ ಬರ್ಬವರಾಗಿ ಹತ್ಯೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಅಪರಿಚಿತರು ಯುವತಿಯ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.
21 ವರ್ಷದ ಆ ಯುವತಿಯ ತಂದೆ ಜೈಲಿನಲ್ಲಿದ್ದಾನೆ. ಆತನಿಗೆ ಬೇಲ್ ಕೊಡಿಸಲೆಂದು ಆಕೆ ಸಾಹಸ ಮಾಡುತ್ತಿದ್ದಳು. ಜಿಲ್ಲಾ ನ್ಯಾಯಾಲದಯಲ್ಲಿ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಈ ಮಧ್ಯೆ ಬಿಹಾರದಲ್ಲಿ ವಾಸವಿರುವ ಅಣ್ಣನನ್ನು ನೋಡಲೆಂದು ಯುವತಿ ಇಂಡೋರ್ನಿಂದ ನರ್ಮದಾ ಎಕ್ಸ್ಪ್ರೆಸ್ ರೈಲಿನಲ್ಲಿ ಹೊರಟಿದ್ದಾಳೆ. ಸ್ಲೀಪರ್ ಕೋಚ್ನಲ್ಲಿ ಸಾಗುತ್ತಿದ್ದ ಯುವತಿ ಸೆಹೋರ್ ರೈಲ್ವೆ ನಿಲ್ದಾಣ ತಲುಪುವುದರೊಳಗೆ ಹೆಣವಾಗಿದ್ದಾಳೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಂದ ಹಾಗೆ ಯುವತಿ ರೈಲು ಹತ್ತಿದಾಗಿನಿಂದ ಅಣ್ಣನ ಸಂಪರ್ಕದಲ್ಲಿದ್ದಳು. ರೈಲಿನಲ್ಲಿ ಯಾರೋ ತನಗೆ ಹಿಂಸೆ ಕೊಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾಳೆ. ಆ ವಿಚಾರವಾಗಿ ಆಕೆಯ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅದನ್ನು ಪರಿಶೀಲನೆ ಮಾಡಲು ಬಂದ ಪೊಲೀಸರಿಗೆ ಯುವತಿಯ ಹೆಣ ಸಿಕ್ಕಿದೆ.
ಸೆಹೋರ್ ರೈಲ್ವೆ ನಿಲ್ದಾಣಕ್ಕೆ ತಲುಪಲು ಕೆಲ ನಿಮಿಷಗಳ ಮೊದಲು ಕೊಲೆ ನಡೆದಿರುವುದಾಗಿ ಹೇಳಲಾಗಿದೆ. ಬೋಗಿಯಲ್ಲಿ ಸೀಟಿನ ವಿಚಾರಕ್ಕೆ ಯಾರೋ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಅದೇ ಬೋಗಿಯಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಚೂಪಾದ ವಸ್ತುವಿನಿಂದ ಯುವತಿಗೆ ಚುಚ್ಚಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…
ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್ ತಾಳಲಾರದೆ ಆತ್ಮಹತ್ಯೆ!
‘ಅಪ್ಪಾ, ನನ್ನ ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ವೈದ್ಯೆ
ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!