More

    ವಾಟ್ಸ್​ಆ್ಯಪ್​ನಲ್ಲಿ ಕೋಟ್ಯಂತರ ರೂ. ಗಳಿಸಿ ಲಕ್ಷುರಿ ಜೀವನ: ಪೊಲೀಸ್​ ತನಿಖೆಯಲ್ಲಿ ಅಸಲಿ ಮುಖವಾಡ ಬಯಲು

    ಪಟ್ಟಣಂತಿಟ್ಟ: ಇಂದಿನ ಡಿಜಿಟಲ್​ ಯುಗದಲ್ಲಿ ಅಂತರ್ಜಾಲದ ಬಳಕೆ ಎಲ್ಲೆಡೆ ಹೆಚ್ಚಾಗುತ್ತಿದೆ. ಬಹುತೇಕ ವ್ಯವಹಾರಗಳು ಇಂದು ಆನ್​ಲೈನ್​ನಲ್ಲೇ ನಡೆಯುತ್ತಿರುವ ಪರಿಣಾಮ ನಗದು ಚಲಾವಣೆಯು ಸಹ ಕಡಿಮೆಯಾಗುತ್ತಿದೆ. ಇದರಿಂದ ಹಣ ಕಳ್ಳತನ ಪ್ರಕರಣಗಳು ಕಡಿಮೆಯಾಗಬಹುದು ಅಂದುಕೊಂಡರೆ ಅದು ನಮ್ಮ ತಪ್ಪು. ಏಕೆಂದರೆ ಕಳ್ಳರು ಸಹ ಡಿಜಿಟಲ್​ ಯುಗಕ್ಕೆ ಬದಲಾಗಿದ್ದು, ಡಿಸೈನ್​ ಡಿಸೈನ್​ ಆಗಿ ವಂಚನೆ ಮಾಡುತ್ತಿದ್ದಾರೆ. ಆನ್​ಲೈನ್​ನಲ್ಲಿ ವೇಷ ಬದಲಿಸಿಕೊಂಡು ಅಮಾಯಕ ಜನರ ಕಣ್ಣಿಗೆ ಮಣ್ಣೆರೆಚುವ ದುಷ್ಕೃತ್ಯ ಎಸಗುತ್ತಿದ್ದಾರೆ.

    ಇದಕ್ಕೆ ಉದಾಹರಣೆಯಾಗಿ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಘಟನೆಯೊಂದು ನಡೆದಿದೆ. ವಂಚಕನೊಬ್ಬ ವಾಟ್ಸ್​ಆ್ಯಪ್​ ಬಳಸಿಕೊಂಡು ಕೋಟ್ಯಂತರ ರೂಪಾಯಿ ಹಣವನ್ನು ವಂಚನೆ ಮಾಡಿದ್ದಾನೆ. ಕೇರಳ ಕೃಷಿ ಇಲಾಖೆಯ ನಕಲಿ ದಾಖಲೆಗಳನ್ನು ಇಟ್ಟುಕೊಂಡು, ಮಲೇಷಿಯಾದ ತೆಂಗಿನ ಸಸಿಗಳು ಸೇರಿದಂತೆ ಉತ್ತಮ ಗುಣಮಟ್ಟದ ಬೆಳೆಗಳನ್ನು ಕೊಡಿಸುವುದಾಗಿ ಸಾಕಷ್ಟು ಮಂದಿಯನ್ನು ನಂಬಿಸಿ ವಂಚನೆ ಎಸಗಿದ್ದಾನೆ.

    ಇದನ್ನೂ ಓದಿ: ಸಾವಿರ ಕೋಟಿ ಟಾರ್ಗೆಟ್! ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ರೂ. ಗಳಿಕೆ ಕಡಿಮೆ ಎಂದ ಸಲ್ಮಾನ್

    ಪುನ್ನವೇಲಿ ಮೂಲದ ವಿಪಿ ಜೇಮ್ಸ್ ಎಂಬಾತನನ್ನು ತಿರುವಳ್ಳ ಪೊಲೀಸರು ಬಂಧಿಸಿದ್ದಾರೆ. ವಾಟ್ಸ್​ಆ್ಯಪ್​ ಮತ್ತು ಆಫ್‌ಲೈನ್ ಮೂಲಕ ಕೇರಳದ ಅಗ್ರಿಕಲ್ಚರಲ್ ಫಾರ್ಮ್‌ನ ನಕಲಿ ಐಡಿಗಳೊಂದಿಗೆ ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದ. ನಂತರ ತನ್ನ ಬಳಿ ಗುಣಮಟ್ಟದ ಬೀಜಗಳು ಇವೆ ಎಂದು ಜನರನ್ನು ನಂಬಿಸುತ್ತಿದ್ದ. ಇದೇ ರೀತಿ ಮಲೇಷಿಯಾದ ತೆಂಗಿನ ಸಸಿ ಕೊಡುವುದಾಗಿ ಹೇಳಿ ತಿರುವಳ್ಳ ನಿವಾಸಿಯಿಂದ 6 ಲಕ್ಷಕ್ಕೂ ಹೆಚ್ಚು ಹಣವನ್ನು ಸುಲಿಗೆ ಮಾಡಿದ್ದನು.

    ರಂಬುಟಾನ್ ಸಸಿ, ಅಡಕೆ, ತೆಂಗಿನ ಸಸಿ, ಹಲಸಿನ ಸಸಿಗಳನ್ನು ಕೊಡಿಸುವುದಾಗಿ ಹೇಳಿ ರಾಜ್ಯದೆಲ್ಲೆಡೆ ಹಲವರನ್ನು ಈತ ವಂಚಿಸಿದ್ದಾನೆ. ಪೊಲೀಸರಿಗೆ ಬಂದಿರುವ ದೂರುಗಳ ಪ್ರಕಾರ ಜೇಮ್ಸ್ 1 ಕೋಟಿ 20 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಇನ್ನೂ ಹೆಚ್ಚಿನ ದೂರುಗಳು ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯು ಸ್ಥಳೀಯರನ್ನು ವಂಚಿಸಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಸದ್ಯ ಬಂಧಿತ ಆರೋಪಿಯನ್ನು ತಿರುವಳ್ಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಿಮ್ಯಾಂಡ್​ಗೆ ನೀಡಲಾಗಿದೆ. (ಏಜೆನ್ಸೀಸ್​)

    ನಿನ್ನ ಲವರ್​ ತಲೆ ತಂದಿದ್ದೇನೆ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದವನ ತಲೆ ಕಡಿದು ಪತ್ನಿ ಮನೆಗೆ ಕೊಂಡೊಯ್ದ ಪತಿ

    ಚಿಕ್ಕ ಮಗುವನ್ನು ಟಾರ್ಗೆಟ್​ ಮಾಡಲಾಗ್ತಿದೆ: ಸನಾತನ ವಿವಾದದ ಬಗ್ಗೆ ನಟ ಕಮಲ್​ ಹಾಸನ್​ ಪ್ರತಿಕ್ರಿಯೆ

    VIDEO| ಮಗನಿಗೆ ಶಿಕ್ಷೆ ನೀಡಿದ ಎಂಬ ಕಾರಣಕ್ಕೆ ಶಿಕ್ಷಕನನ್ನು ಅಮಾನುಷವಾಗಿ ಥಳಿಸಿದ ಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts