ಚೆನ್ನೈ: ತನ್ನ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿದ್ದವನ ತಲೆಯನ್ನು ತುಂಡರಿಸಿದ ಪತಿರಾಯನೊಬ್ಬ ಆ ತಲೆಯನ್ನು ಪತ್ನಿಯ ಮನೆಯ ಮುಂದೆಯೇ ಇಟ್ಟು ಬಂದಂತಹ ಭಯಾನಕ ಘಟನೆ ತಮಿಳುನಾಡಿನಲ್ಲಿ ಗುರುವಾರ ಸಂಜೆ ನಡೆದಿದೆ.
ವೇಲುಸ್ವಾಮಿ (32) ಮತ್ತು ಇಸಾಕಿಯಮ್ಮಾಳ್ ದಂಪತಿ ತೆಂಕಾಸಿ ಜಿಲ್ಲೆಯ ಓಥುಮಲೈ ಬಳಿಯ ಗಿಮ್ಕುಲಂ ಗ್ರಾಮದ ನಿವಾಸಿಗಳು. ಅದೇ ಏರಿಯಾದ ಮುರುಗನ್ (41) ಎಂಬಾತನ ಜತೆ ಇಸಾಕಿಯಮ್ಮಾಳ್ ಪರಿಚಯವಾಗಿತ್ತು. ಇದೇ ಪರಿಚಯ ನಂತರದಲ್ಲಿ ಅಕ್ರಮ ಸಂಬಂಧಕ್ಕೆ ತಿರುಗಿತ್ತು.
ಇಬ್ಬರ ಅನೈತಿಕ ಸಂಬಂಧ ಗಂಡ ವೇಲುಸ್ವಾಮಿಗೆ ತಿಳಿದು ಪತ್ನಿ ಇಸಾಕಿಯಮ್ಮಾಳ್ಗೆ ಎಚ್ಚರಿಕೆ ನೀಡಿದ್ದ. ಆದರೆ, ಇದಕ್ಕೆ ಕ್ಯಾರೆ ಎನ್ನದ ಆಕೆ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು. ಬಳಿಕ ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಳಗ ನಡೆಯುತ್ತಿತ್ತು. ಇತ್ತೀಚೆಗೂ ಜಗಳ ನಡೆದು, ಇಸಾಕಿಯಮ್ಮಾಳ್ ಗಂಡನ ಜತೆ ಮುನಿಸಿಕೊಂಡು ತೂತುಕುಡಿಯಲ್ಲಿರುವ ತವರು ಮನೆ ಸೇರಿದ್ದಳು.
ಇದರಿಂದ ಆಕ್ರೋಶಗೊಂಡ ವೇಲುಸ್ವಾಮಿ, ಮರುಗನ್ ಹುಡುಕಿಕೊಂಡು ಹೋಗಿ ಆತನ ಜತೆ ಜಗಳವಾಡಿದ್ದಾನೆ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ತಾಳ್ಮೆ ಕಳೆದುಕೊಂಡ ವೇಲುಸ್ವಾಮಿ, ಚುಪಾದ ಆಯುಧದಿಂದ ಮುರುಗನ್ ತಲೆಯನ್ನು ತುಂಡರಿಸಿದ್ದಾನೆ. ಬಳಿಕ ತಲೆಯ ಸಮೇತ ಪತ್ನಿಯ ಮನೆಗೆ ಹೋದ ವೇಲುಸ್ವಾಮಿ, ನೋಡು ನಾನು ನಿನ್ನ ಲವರ್ ತಲೆಯನ್ನು ತಂದಿದ್ದೇನೆ ಎಂದು ಹೇಳಿದ್ದಾನೆ.
ಮುರುಗನ್ ತಲೆಯನ್ನು ನೋಡಿ ಗಾಬರಿಗೊಂಡ ಪತ್ನಿ ಇಸಾಕಿಯಮ್ಮಾಳ್ ಹಾಗೂ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವೇಲುಸ್ವಾಮಿಯನ್ನು ಬಂಧಿಸಿದ್ದಾರೆ. ಅಲ್ಲದೇ ಮುರುಗನ್ ಅವರ ತಲೆಯನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ತಿರುನಲ್ವೇಲಿ, ಬಾಲಯನಕೋಟ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಘಟನೆ ಆ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ. (ಏಜೆನ್ಸೀಸ್)
ಚಿಕ್ಕ ಮಗುವನ್ನು ಟಾರ್ಗೆಟ್ ಮಾಡಲಾಗ್ತಿದೆ: ಸನಾತನ ವಿವಾದದ ಬಗ್ಗೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ
ಕಾವೇರಿ ವಿವಾದ: ಕರ್ನಾಟಕ ಬಂದ್ಗೆ ನಡೆದಿದೆ ಸಿದ್ಧತೆ, ಇಂದಿನ ಮಹತ್ವದ ಸಭೆಯಲ್ಲಿ ತೀರ್ಮಾನ ಸಾಧ್ಯತೆ