More

    ಬಾಲಿವುಡ್​ನಲ್ಲಿ ಸಿನಿಮಾ ಆಗ್ತಿದೆ ಸುಶಾಂತ್​ ಆತ್ಮಹತ್ಯೆ ಪ್ರಕರಣ!

    ಸುಶಾಂತ್​ ಸಿಂಗ್​ ರಜಪೂತ್​ ಸಾವು ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಘಟಾನುಘಟಿಗಳ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಿರುವಾಗಲೇ ಸುಶಾಂತ್​ ಆತ್ಮಹತ್ಯೆ ಪ್ರಹಸನ ಇದೀಗ ಬಾಲಿವುಡ್​ನಲ್ಲಿ ಸಿನಿಮಾ ಆಗುತ್ತಿದೆ ಎಂದರೆ ನೀವು ನಂಬಲೇಬೇಕು!

    ಇದನ್ನೂ ಓದಿ: ರಜನಿಕಾಂತ್​ ಮನೆ ಮೇಲೆ ಬಾಂಬ್​ ದಾಳಿ ಬೆದರಿಕೆ!

    ಹೌದು, ಸದ್ಯ ಈ ಸುದ್ದಿ ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿದ್ದು, ಸಿನಿಮಾದೊಳಗೆ ಏನೆಲ್ಲ ಇರಲಿದೆ ಎಂಬ ಕುತೂಹಲ ಮೂಡಿಸಿದೆ. ಜತೆಗೆ ಶೀರ್ಷಿಕೆ ಸಹ ಅಷ್ಟೇ ಕೌತುಕ ಹುಟ್ಟಿಸುವಂತಿದೆ. ‘ಸೂಸೈಡ್​ ಆರ್​ ಮರ್ಡರ್​; ಎ ಸ್ಟಾರ್ ವಾಸ್​ ಲೊಸ್ಟ್’ ಟೈಟಲ್​ನಲ್ಲಿ ಸಿನಿಮಾ ಸಿದ್ಧವಾಗಲಿದ್ದು, ವಿಜಯ್​ ಶೇಖರ್​ ಗುಪ್ತಾ ಚಿತ್ರದ ನಿರ್ಮಾಣ ಮಾಡಲಿದ್ದಾರೆ. ಶಮಿಕ್​ ಮೌಲಿಕ್​ ನಿರ್ದೇಶನದ ಜವಾಬ್ದಾರಿ ಹೊತ್ತರೆ, ರಾಕೇಶ್ ಕುಮಾರ್​ ಚಿತ್ರಕಥೆ ಮತ್ತು ಸಂಭಾಷಣೆ ಒದಗಿಸಲಿದ್ದಾರೆ.

    ಇದನ್ನೂ ಓದಿ: ಸತೀಶ್​ ಹೊಸ ಚಿತ್ರದ ಹೆಸರು ಈ ಗೋಡೆಗಳ ಮೇಲೆ ಅಡಗಿದೆಯಂತೆ!

    ಸುಶಾಂತ್​ ಸಿಂಗ್​ ಬಾಲಿವುಡ್​ಗೆ ಬಂದಿದ್ದು, ಸ್ಟಾರ್ ಆಗಿ ಬೆಳೆದಿದ್ದು, ಬಳಿಕ ಕೆಲಸ ಪ್ರೊಡಕ್ಷನ್​ ಹೌಸ್​ಗಳ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಸಿನಿಮಾ ಮಾಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಪೊಲೀಸ್​ ಇಲಾಖೆ ನೀಡುವ ವರದಿಯನ್ನೂ ಆಧರಿಸಿ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತ ಹೋಗುತ್ತಾರಂತೆ ನಿರ್ದೇಶಕರು.
    ಸದ್ಯ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿರುವ ತಂಡ, ಸುಶಾಂತ್​ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ರಿವೀಲ್​ ಮಾಡಲಿದ್ದಾರಂತೆ. (ಏಜೆನ್ಸೀಸ್​)

    2016ರಲ್ಲೇ ಸಾವಿನ ಮುನ್ಸೂಚನೆ ನೀಡಿದ್ರಾ ಸುಶಾಂತ್!​; ತಾಯಿ ನೆನೆದು ಬರೆದ ಮತ್ತೊಂದು ಪತ್ರ ವೈರಲ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts