ಸುಶಾಂತ್ ಸಿಂಗ್ ರಜಪೂತ್ ಸಾವು ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಘಟಾನುಘಟಿಗಳ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಿರುವಾಗಲೇ ಸುಶಾಂತ್ ಆತ್ಮಹತ್ಯೆ ಪ್ರಹಸನ ಇದೀಗ ಬಾಲಿವುಡ್ನಲ್ಲಿ ಸಿನಿಮಾ ಆಗುತ್ತಿದೆ ಎಂದರೆ ನೀವು ನಂಬಲೇಬೇಕು!
ಇದನ್ನೂ ಓದಿ: ರಜನಿಕಾಂತ್ ಮನೆ ಮೇಲೆ ಬಾಂಬ್ ದಾಳಿ ಬೆದರಿಕೆ!
ಹೌದು, ಸದ್ಯ ಈ ಸುದ್ದಿ ಬಾಲಿವುಡ್ನಲ್ಲಿ ಸದ್ದು ಮಾಡುತ್ತಿದ್ದು, ಸಿನಿಮಾದೊಳಗೆ ಏನೆಲ್ಲ ಇರಲಿದೆ ಎಂಬ ಕುತೂಹಲ ಮೂಡಿಸಿದೆ. ಜತೆಗೆ ಶೀರ್ಷಿಕೆ ಸಹ ಅಷ್ಟೇ ಕೌತುಕ ಹುಟ್ಟಿಸುವಂತಿದೆ. ‘ಸೂಸೈಡ್ ಆರ್ ಮರ್ಡರ್; ಎ ಸ್ಟಾರ್ ವಾಸ್ ಲೊಸ್ಟ್’ ಟೈಟಲ್ನಲ್ಲಿ ಸಿನಿಮಾ ಸಿದ್ಧವಾಗಲಿದ್ದು, ವಿಜಯ್ ಶೇಖರ್ ಗುಪ್ತಾ ಚಿತ್ರದ ನಿರ್ಮಾಣ ಮಾಡಲಿದ್ದಾರೆ. ಶಮಿಕ್ ಮೌಲಿಕ್ ನಿರ್ದೇಶನದ ಜವಾಬ್ದಾರಿ ಹೊತ್ತರೆ, ರಾಕೇಶ್ ಕುಮಾರ್ ಚಿತ್ರಕಥೆ ಮತ್ತು ಸಂಭಾಷಣೆ ಒದಗಿಸಲಿದ್ದಾರೆ.
ಇದನ್ನೂ ಓದಿ: ಸತೀಶ್ ಹೊಸ ಚಿತ್ರದ ಹೆಸರು ಈ ಗೋಡೆಗಳ ಮೇಲೆ ಅಡಗಿದೆಯಂತೆ!
ಸುಶಾಂತ್ ಸಿಂಗ್ ಬಾಲಿವುಡ್ಗೆ ಬಂದಿದ್ದು, ಸ್ಟಾರ್ ಆಗಿ ಬೆಳೆದಿದ್ದು, ಬಳಿಕ ಕೆಲಸ ಪ್ರೊಡಕ್ಷನ್ ಹೌಸ್ಗಳ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಸಿನಿಮಾ ಮಾಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ನೀಡುವ ವರದಿಯನ್ನೂ ಆಧರಿಸಿ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತ ಹೋಗುತ್ತಾರಂತೆ ನಿರ್ದೇಶಕರು.
ಸದ್ಯ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿರುವ ತಂಡ, ಸುಶಾಂತ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ರಿವೀಲ್ ಮಾಡಲಿದ್ದಾರಂತೆ. (ಏಜೆನ್ಸೀಸ್)
2016ರಲ್ಲೇ ಸಾವಿನ ಮುನ್ಸೂಚನೆ ನೀಡಿದ್ರಾ ಸುಶಾಂತ್!; ತಾಯಿ ನೆನೆದು ಬರೆದ ಮತ್ತೊಂದು ಪತ್ರ ವೈರಲ್…