ಸೂಪರ್ ಸ್ಟಾರ್ ರಜನಿಕಾಂತ್ ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಇದೇ ಸಮಯವನ್ನು ಗಮನದಲ್ಲಿಟ್ಟುಕೊಂಡು, ಕಿಡಿಗೇಡಿಯೊಬ್ಬ ರಜನಿ ಮನೆಯ ಗಾರ್ಡನ್ ಏರಿಯಾದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ 108ಗೆ ಕರೆ ಮಾಡಿ, ಈ ವಿಚಾರವನ್ನೂ ತಿಳಿಸಿದ್ದಾನೆ. ಗಾಬರಿಯಿಂದ ರಜನಿ ಮನೆಗೆ ಬಂದ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗೆ ಮತ್ತೊಂದು ಶಾಕ್ ಕಾದಿತ್ತು!
ಇದನ್ನೂ ಓದಿ: ಸತೀಶ್ ಹೊಸ ಚಿತ್ರದ ಹೆಸರು ಈ ಗೋಡೆಗಳ ಮೇಲೆ ಅಡಗಿದೆಯಂತೆ!
ಹೌದು, ಗುರುವಾರ ಬೆಳಗ್ಗೆ 10.30ರ ಸುಮಾರಿಗೆ 108 ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಬಾಂಬ್ ಇಟ್ಟಿರುವುದಾಗಿ ಹೇಳಿದ್ದ. ಕೂಡಲೇ ಕಾರ್ಯಪ್ರವೃತ್ತರಾದ 108 ಸಿಬ್ಬಂದಿ ಈ ವಿಚಾರವನ್ನು ಬಾಂಬ್ ನಿಷ್ಕ್ರೀಯ ದಳಕ್ಕೆ ರವಾನಿಸಿದೆ. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ, ಪೊಲೀಸ್ ಸಿಬ್ಬಂದಿ ಸೇರಿ ಮನೆ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದ್ದೇ ತಡ, ಒಂದಷ್ಟು ಅಭಿಮಾನಿಗಳು ಸೂಪರ್ಸ್ಟಾರ್ ಮನೆ ಬಳಿ ಆಗಮಿಸಿದ್ದರು. ಆದರೆ, ಆ ಬಳಿಕ ಅಲ್ಲಾಗಿದ್ದೇ ಬೇರೆ.
ಇದನ್ನೂ ಓದಿ: ಅಭಿನವ್ ಮೇಲೆ ಮಾನನಷ್ಟ ಕೇಸ್ ಹಾಕಿದ ಸಲ್ಮಾನ್ ಸಹೋದರ
ಗಾಬರಿಯಲ್ಲಿ ಮನೆ ಬಳಿ ಆಗಮಿಸಿದ ಸಿಬ್ಬಂದಿ, ರಜನಿ ಅವರ ಕುಟುಂಬದೊಟ್ಟಿಗೆ ಮಾತನಾಡಿದೆ. ಈ ಸುದ್ದಿಯನ್ನು ಅಲ್ಲಗೆಳೆದ, ರಜನಿಕಾಂತ್ ಕುಟುಂಬ ಬಾಂಬ್ ಪರೀಕ್ಷೆಗೂ ಅನುಮತಿ ನೀಡಿಲ್ಲ. ಸದ್ಯಕ್ಕೆ ಕೋವಿಡ್ 19 ಗಿಂತ ಬೇರೆ ದಾಳಿ ಮತ್ತೊಂದಿಲ್ಲ ಎಂದು ಹೇಳಿ, ಅವರ ಕಾಳಜಿಗೆ ಧನ್ಯವಾದ ತಿಳಿಸಿದೆ. ಬಂದಿದ್ದಕ್ಕಾದರೂ ಒಂದು ಪರೀಕ್ಷೆ ನಡೆಸಲು ಮುಂದಾದ ಸಿಬ್ಬಂದಿ, ಮನೆ ಸುತ್ತಲಿನ ಆವರಣದಲ್ಲಿ ಶೋಧ ಕಾರ್ಯ ನಡೆಸಿದೆ. ಯಾವುದೇ ಬಾಂಬ್ ರೀತಿಯ ವಸ್ತುಗಳು ಪತ್ತೆಯಾಗದ ಕಾರಣ, ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿದೆ. ಬಳಿಕ ಇದೊಂದು ಪ್ರಾಂಕ್ ಕರೆ ಎಂಬುದು ಮೇಲಾಧಿಕಾರಿಗಳಿಂದ ಆದೇಶ ಬಂದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ ಸಿಬ್ಬಂದಿ. (ಏಜೆನ್ಸೀಸ್)
ಬಾಲಿವುಡ್ನವರೇ ಮತ್ತು ಕ್ರಿಕೆಟಿಗರೇ, ಚೀನಿ ಉತ್ಪನ್ನ ಪ್ರಚಾರ ಮಾಡಿದ್ದು ಸಾಕಿನ್ನು!