More

    ಅಭಿನವ್​ ಮೇಲೆ ಮಾನನಷ್ಟ ಕೇಸ್​ ಹಾಕಿದ ಸಲ್ಮಾನ್​ ಸಹೋದರ

    ಸಲ್ಮಾನ್​ ಖಾನ್​ ಅವರ ಕುಟುಂಬದವರು ತಮ್ಮನ್ನು ತುಳಿದರು, ಸರ್ವನಾಶ ಮಾಡಿದರು ಎಂದು ಇತ್ತೀಚೆಗಷ್ಟೇ ದಬಾಂಗ್​ ಚಿತ್ರದ ನಿರ್ದೇಶಕ ಅಭಿನವ್​ ಕಶ್ಯಪ್​ ದೂರಿದ್ದರು. ಈ ವಿಷಯವಾಗಿ, ಸಲ್ಮಾನ್​ ಖಾನ್​ ಅವರ ಸಹೋದರ ಸೋಹೈಲ್​ ಖಾನ್​, ಕೊನೆಗೂ ಅಭಿನವ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ಆಲಿಯಾಗೆ ಗುಡ್​​ಬೈ ಹೇಳಿದ ಕರಣ್​…

    ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸ್ವಜನಪಕ್ಷಪಾತದ ಕುರಿತಾಗಿ ಚರ್ಚೆಯಾಗುತ್ತಿದೆ. ಚಿತ್ರರಂಗದ ಗಟ್ಟಿ ಸ್ಥಾನದಲ್ಲಿರುವವರು ಹೇಗೆ ಹೊಸಬರನ್ನು ತುಳಿಯುತ್ತಿದ್ದಾರೆ ಎಂದು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತು ನಿರ್ದೇಶಕ ದಬಾಂಗ್​ ನಿರ್ದೇಶಕ ಅಭಿನವ್​ ಕಶ್ಯಪ್​ ಸಹ ಮಾತನಾಡಿದ್ದರು.

    ಸಲ್ಮಾನ್​ ಖಾನ್​ ಸಹೋದರರು ತಮಗೆ ಮಾನಸಿಕ ಕಿರುಕುಳ ನೀಡಿದ್ದರಿಂದ, ಕಳೆದ 10 ವರ್ಷದಿಂದ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸಲ್ಮಾನ್​ ಸಹೋದರ ಅರ್ಬಾಜ್​ ಖಾನ್​, ಅಭಿನವ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.

    ಈ ಕುರಿತು ಮಾತನಾಡಿರುವ ಅರ್ಬಾಜ್​ ಖಾನ್​, ಅಭಿನವ್​ ನಮ್ಮ ಮೇಲೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ನಮ್ಮ ಇಡೀ ಕುಟುಂಬದ ಘನತೆಯನ್ನು ಮಣ್ಣುಪಾಲು ಮಾಡುವುದಕ್ಕೆ ಹೊರಟಿದ್ದರು ಅಭಿನವ್​. ನಮಗೆ ಬೇರೆ ದಾರಿಯೇ ಇರಲಿಲ್ಲ. ಹಾಗಾಗಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರಿಯಾ ಜತೆಗೆ ಬ್ರೇಕ್-​ಅಪ್​ ಆಗಿದ್ದು ಸುಶಾಂತ್​ ಸಾವಿಗೆ ಕಾರಣವಾಯಿತಾ?

    ಇನ್ನು ಸಲ್ಮಾನ್ ಖಾನ್​ ತಂದೆ ಸಲೀಂ ಖಾನ್​ ಈ ಕುರಿತು ಮಾತನಾಡಿದ್ದು, ಅಭಿನವ್​ ಮಾಡಿದ್ದು ಸರಿಯಾ ಎಂದು ಪ್ರಶ್ನಿಸಿದ್ದಾರೆ. ಅವರ ಸೋಲಿಗೆ ನಮ್ಮನ್ನು ದೂರುವುದು ಎಷ್ಟು ಸರಿ? ಒಂದು ಚಿತ್ರವನ್ನು ಸೋಲಿಸುವ ಶಕ್ತಿ ನಮಗಿದೆಯಾ? ದಬಾಂಗ್​ ಚಿತ್ರದ ನಂತರ ದಬಾಂಗ್​ 2 ಚಿತ್ರ ನಿರ್ದೇಶಿಸುವುದಕ್ಕೆ ಕೇಳಿದ್ದೆವು. ಆದರೆ, ಅದಕ್ಕೆ ಅವರು ಒಪ್ಪಲಿಲ್ಲ. ಅಲ್ಲಿಗೆ ಪ್ರಕರಣ ಮುಗಿಯಿತು. ಹೀಗಿರುವಾಗ ಇಷ್ಟು ವರ್ಷಗಳ ಮೇಲೆ ನಮ್ಮ ಮೇಲೆ ವೃಥಾ ಆರೋಪ ಹೊರಿಸುವುದು ಎಷ್ಟು ಸರಿ? ನಾನು ನನ್ನ ಚಿತ್ರಜೀವನದಲ್ಲಿ ಇದುವರೆಗೂ 40ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆದಿದ್ದೇನೆ. ನನ್ನದೇ ಗೌರವ ಸಂಪಾದಿಸಿದ್ದೇನೆ. ಹಾಗಿರುವಾಗ ನನ್ನನ್ನು ಈ ವಿಷಯದಲ್ಲಿ ಅವರು ಎಳೆದು ತಂದರು. ಅವರಿಗೆ ನಾಚಿಕೆ ಆಗಬೇಕು ಎಂದು ಸಲೀಂ ಖಾನ್​ ಪ್ರತಿಕ್ರಿಯಿಸಿದ್ದಾರೆ.

    ಬಾಲಿವುಡ್​ನವರೇ ಮತ್ತು ಕ್ರಿಕೆಟಿಗರೇ, ಚೀನಿ ಉತ್ಪನ್ನ ಪ್ರಚಾರ ಮಾಡಿದ್ದು ಸಾಕಿನ್ನು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts