ಸುಶಾಂತ್ ಸಿಂಗ್ ಆತ್ಮಹತ್ಯನಿಂದ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕರಣ್ ಜೋಹಾರ್ರಂತಹ ಭಲಾಡ್ಯರು ಸುಶಾಂತ್ ಅವರನ್ನು ದೂರ ಇಟ್ಟಿದ್ದರಿಂದಲೇ, ಸುಶಾಂತ್ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬಂತಹ ಸುದ್ದಿಗಳು ಹರಡಿವೆ. ಆಲಿಯಾ ಭಟ್ ಸೇರಿದಂತೆ ಒಂದಿಷ್ಟು ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ, ಸುಶಾಂತ್ರಂತಹ ಕಲಾವಿದರನ್ನು ತುಳಿಯುತ್ತಿದ್ದರು ಎಂದು ಆರೋಪ ಮಾಡಲಾಗಿದೆ. ಈಗಾಗಲೇ, ಕರಣ್ ಜೋಹಾರ್ ಸೇರಿದಂತೆ ಬಾಲಿವುಡ್ನ ಕೆಲವು ಜನಪ್ರಿಯ ನಿರ್ಮಾಪಕರು ಮತ್ತು ನಟರ ಮೇಲೂ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತೆಲುಗು-ತಮಿಳಿನಲ್ಲಿ ಸುದೀಪ್ಗೆ ಡಿಮ್ಯಾಂಡ್
ಈ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕರಣ್ ಜೋಹಾರ್ ತಾವು ಬೆಳೆಸಿದ ಆಲಿಯಾ ಭಟ್ ಮುಂತಾದ ಕಲಾವಿದರನ್ನು ದೂರ ಇಡುವುದರ ಜತೆಗೆ, ಅವರನ್ನು ಅನ್ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು ಕರಣ್. ಅದರಲ್ಲೂ ಟ್ವಿಟರ್ನಲ್ಲಿ ಅವರಿಗೆ ಸಾಕಷ್ಟು ಹಿಂಬಾಲಕರಿದ್ದರು. ಕರಣ್ ಸಹ ಹಲವು ಕಲಾವಿದರನ್ನು ಫಾಲೋ ಮಾಡುತ್ತಿದ್ದರು. ಈಗ ಎಂಟು ಜನರನ್ನು ಬಿಟ್ಟು, ಮಿಕ್ಕಂತೆ ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಕೇವಲ ಎಂಟು ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರಂತೆ ಕರಣ್. ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ, ಶಾರೂಖ್ ಖಾನ್, ಧರ್ಮ ಪ್ರೊಡಕ್ಷನ್ಸ್ ಸೇರಿದಂತೆ ಕೇವಲ ಎಂಟು ಅಕೌಂಟ್ಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಮಿಕ್ಕಂತೆ ಸುಶಾಂತ್ ಸಾವಿನ ನಂತರ, ಆಲಿಯಾ ಭಟ್ ಸೇರಿದಂತೆ ಹಲವರನ್ನು ಅನ್ಫಾಲೋ ಮಾಡುವ ಮೂಲಕ ದೂರ ಇಟ್ಟಿದ್ದಾರೆ. ಸ್ವಜನಪಕ್ಷಪಾತದ ಹಿನ್ನೆಲೆಯಲ್ಲಿ ಅವರು ಈ ರೀತಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಇನ್ನು ಸಂಬಳ ಕೊಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರಂತೆ ಸುಶಾಂತ್!
ಎಲ್ಲಾ ಸರಿ, ತಾವು ಪರಿಚಯಿಸಿದ ಮತ್ತು ಬೆಳೆಸಿದ ಆಲಿಯಾ ಭಟ್ ಸೇರಿದಂತೆ ಕಲಾವಿದರು ಮತ್ತು ತಂತ್ರಜ್ಱರನ್ನು ದೂರ ಇಡುವುದರಿಂದ ಏನು ಬಂದಂತಾಯಿತು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಮುಂದೊಂದು ದಿನ ಕರಣ್ ಈ ಬಗ್ಗೆ ಮಾತನಾಡಬಹುದು. ಅಲ್ಲಿಯವರೆಗೂ ಸುಮ್ಮನೆ ಕಾಯದೆ ವಿಧಿಯಿಲ್ಲ.