More

    ಸುಶಾಂತ್​ ಆತ್ಮಹತ್ಯೆ: ಆಲಿಯಾಗೆ ಗುಡ್​​ಬೈ ಹೇಳಿದ ಕರಣ್​…

    ಸುಶಾಂತ್​ ಸಿಂಗ್​ ಆತ್ಮಹತ್ಯನಿಂದ ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕರಣ್​ ಜೋಹಾರ್​ರಂತಹ ಭಲಾಡ್ಯರು ಸುಶಾಂತ್​ ಅವರನ್ನು ದೂರ ಇಟ್ಟಿದ್ದರಿಂದಲೇ, ಸುಶಾಂತ್​ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬಂತಹ ಸುದ್ದಿಗಳು ಹರಡಿವೆ. ಆಲಿಯಾ ಭಟ್​ ಸೇರಿದಂತೆ ಒಂದಿಷ್ಟು ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ, ಸುಶಾಂತ್​ರಂತಹ ಕಲಾವಿದರನ್ನು ತುಳಿಯುತ್ತಿದ್ದರು ಎಂದು ಆರೋಪ ಮಾಡಲಾಗಿದೆ. ಈಗಾಗಲೇ, ಕರಣ್​ ಜೋಹಾರ್​ ಸೇರಿದಂತೆ ಬಾಲಿವುಡ್​ನ ಕೆಲವು ಜನಪ್ರಿಯ ನಿರ್ಮಾಪಕರು ಮತ್ತು ನಟರ ಮೇಲೂ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ತೆಲುಗು-ತಮಿಳಿನಲ್ಲಿ ಸುದೀಪ್​ಗೆ ಡಿಮ್ಯಾಂಡ್

    ಈ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕರಣ್​ ಜೋಹಾರ್​ ತಾವು ಬೆಳೆಸಿದ ಆಲಿಯಾ ಭಟ್​ ಮುಂತಾದ ಕಲಾವಿದರನ್ನು ದೂರ ಇಡುವುದರ ಜತೆಗೆ, ಅವರನ್ನು ಅನ್​ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು ಕರಣ್. ಅದರಲ್ಲೂ ಟ್ವಿಟರ್​ನಲ್ಲಿ ಅವರಿಗೆ ಸಾಕಷ್ಟು ಹಿಂಬಾಲಕರಿದ್ದರು. ಕರಣ್​ ಸಹ ಹಲವು ಕಲಾವಿದರನ್ನು ಫಾಲೋ ಮಾಡುತ್ತಿದ್ದರು. ಈಗ ಎಂಟು ಜನರನ್ನು ಬಿಟ್ಟು, ಮಿಕ್ಕಂತೆ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಕೇವಲ ಎಂಟು ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರಂತೆ ಕರಣ್​. ಅಮಿತಾಭ್​ ಬಚ್ಚನ್​, ಅಕ್ಷಯ್​ ಕುಮಾರ್​, ಪ್ರಧಾನಿ ನರೇಂದ್ರ ಮೋದಿ, ಶಾರೂಖ್​ ಖಾನ್​, ಧರ್ಮ ಪ್ರೊಡಕ್ಷನ್ಸ್​ ಸೇರಿದಂತೆ ಕೇವಲ ಎಂಟು ಅಕೌಂಟ್​ಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಮಿಕ್ಕಂತೆ ಸುಶಾಂತ್​ ಸಾವಿನ ನಂತರ, ಆಲಿಯಾ ಭಟ್​ ಸೇರಿದಂತೆ ಹಲವರನ್ನು ಅನ್​ಫಾಲೋ ಮಾಡುವ ಮೂಲಕ ದೂರ ಇಟ್ಟಿದ್ದಾರೆ. ಸ್ವಜನಪಕ್ಷಪಾತದ ಹಿನ್ನೆಲೆಯಲ್ಲಿ ಅವರು ಈ ರೀತಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ: ಇನ್ನು ಸಂಬಳ ಕೊಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರಂತೆ ಸುಶಾಂತ್​!

    ಎಲ್ಲಾ ಸರಿ, ತಾವು ಪರಿಚಯಿಸಿದ ಮತ್ತು ಬೆಳೆಸಿದ ಆಲಿಯಾ ಭಟ್​ ಸೇರಿದಂತೆ ಕಲಾವಿದರು ಮತ್ತು ತಂತ್ರಜ್ಱರನ್ನು ದೂರ ಇಡುವುದರಿಂದ ಏನು ಬಂದಂತಾಯಿತು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಮುಂದೊಂದು ದಿನ ಕರಣ್​ ಈ ಬಗ್ಗೆ ಮಾತನಾಡಬಹುದು. ಅಲ್ಲಿಯವರೆಗೂ ಸುಮ್ಮನೆ ಕಾಯದೆ ವಿಧಿಯಿಲ್ಲ.

    ರಿಯಾ ಜತೆಗೆ ಬ್ರೇಕ್-​ಅಪ್​ ಆಗಿದ್ದು ಸುಶಾಂತ್​ ಸಾವಿಗೆ ಕಾರಣವಾಯಿತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts