ಬೆಂಗಳೂರು: ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದನೆಂಬ ಸಿಟ್ಟಿಗೆ ವ್ಯಕ್ತಿಯೊಬ್ಬ ತನ್ನೊಂದಿಗೆ ಕೆಲಸ ಮಾಡುತ್ತಿದ್ದವನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜೆಪಿ ನಗರದಲ್ಲಿರುವ 55 ವಾಲ್ಸ್ಟ್ರೀಟ್ ಪಬ್ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸಾಗರ್(22) ಕೊಲೆಯಾದ ಯುವಕ. ಅದೇ ಪಬ್ನಲ್ಲಿ ತ್ರಿಪುರ ಮೂಲದ ಮೌಸಿಕ್ ಹೆಸರಿನ ಯುವಕ ಕೆಲಸ ಮಾಡುತ್ತಿದ್ದ. ಇವರಿಬ್ಬರು ಸಹಾಯಕ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. ಶನಿವಾರದಂದು ಈ ಇಬ್ಬರ ನಡುವೆ ಜಗಳವಾಗಿದೆ. ನೀನು ಸರಿಯಾಗಿ ಕೆಲಸ ಮಾಡುವುದಿಲ್ಲವೆಂದು ಸಾಗರ್, ಮೌಸಿಕ್ ಬಗ್ಗೆ ಆರೋಪ ವ್ಯಕ್ತಪಡಿಸಿದ್ದಾನೆ. ಸಿಟ್ಟಿನಿಂದ ಒಂದೇಟನ್ನೂ ಹೊಡೆದಿದ್ದ.
ಹೊಡೆತ ತಿಂದ ಸಿಟ್ಟಿನಿಂದಾಗಿ ಮೌಸಿಕ್ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದಾನೆ. ರಾತ್ರಿ 9.30ರ ಸಮಯಕ್ಕೆ ಕಿಚನ್ನಲ್ಲಿದ್ದ ಚಾಕು ತಂದು ಸಾಗರ್ಗೆ ಚುಚ್ಚಿದ್ದಾನೆ. ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. ಸಾಗರ್ಗೆ ತೀವ್ರ ರಕ್ತಸ್ರಾವವಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ. ಈ ಬಗ್ಗೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಮೆಯಲ್ಲೂ ಇದೆ ಏಕಪತ್ನಿವ್ರತಸ್ಥ ಸಂಪ್ರದಾಯ! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…
ಮದ್ಯದ ಅಮಲಿನಲ್ಲಿ ದೇವಸ್ಥಾನದ ಸಾಧುವಿನ ಮೇಲೆ ಹಲ್ಲೆ; ಕೊಡಲಿಯಿಂದ ಹೊಡೆದು ಕೊಂದ ಪಾಪಿ!
ಬಿಗ್ ಬಾಸ್ ಮನೆಯಲ್ಲಿ ಎರಡೆರೆಡು ಲವ್ ಸ್ಟೋರಿ! ಶುಭಾ ಮದುವೆ ನಂತರ ಇವರ ಮದುವೆ ಫಿಕ್ಸ್ ಅಂತೆ!