More

    ಸಾಹಿತ್ಯಕ್ಕೆ ವರ್ಣ, ಮತ, ಜಾತಿ ಅಂಟಿಸಬೇಡಿ: ಹೆಬ್ರಿ ತಾಲೂಕು ಕಸಾಪ ಸಮ್ಮೇಳನದಲ್ಲಿ ಡಾ.ವೀರಪ್ಪ ಮೊಯ್ಲಿ ಸಲಹೆ

    ವಿಜಯವಾಣಿ ಸುದ್ದಿಜಾಲ ಹೆಬ್ರಿ

    ಕನ್ನಡ ಸಾಹಿತ್ಯಕ್ಕೆ ಜಾತಿ, ಮತ, ವರ್ಣವನ್ನು ಅಂಟಿಸದೆ ಸಾಹಿತ್ಯವನ್ನು ಎಲ್ಲರೂ ಸೇರಿ ಬಳಸಬೇಕು. ನಾನು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದರೆ ಶೂದ್ರನೆಂದು, ಬೇರೆಯವರು ಪಡೆದರೆ ಅರ್ಹವೆಂದು ಪರಿಗಣಿಸುವ ಪರಂಪರೆ ತೊಲಗಿಸಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.

    ಹೆಬ್ರಿ ತಾಲೂಕಿನ ಮುದ್ರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
    ಅಧ್ಯಕ್ಷತೆ ವಹಿಸಿದ್ದ ಸಮ್ಮೇಳಾನಾಧ್ಯಕ್ಷ, ಅಷ್ಟಾವಧಾನಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಮಾತನಾಡಿ, ಸಂಸ್ಕೃತಿ ಎಂದರೆ ಕೇವಲ ಕನ್ನಡ ಸಂಸ್ಕೃತಿಯಲ್ಲ. ಅದು ನಮ್ಮೊಳಗಿನ ಬಹುಭಾಷಾ ಸಂಸ್ಕೃತಿ. ಅಲ್ಲಿ ಕುಂದಗನ್ನಡ, ಹವಿಗನ್ನಡವಿದೆ. ತುಳು, ಕೊಂಕಣಿ ಇದೆ. ಇವೆಲ್ಲವಿದ್ದರೂ ನಾವು ನಮ್ಮನ್ನು ಕನ್ನಡಿಗರೆಂದೇ ಹೇಳಿಕೊಂಡು ಬಂದಿದ್ದೇವೆ ಎಂದರು.

    ಹೆಬ್ರಿ ಕಸಾಪ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಪ್ರಸ್ತಾಪಿಸಿದರು.
    ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಮುನಿಯಾಲು ಗಣೇಶ್ ಶೆಣೈ, ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ, ಉದ್ಯಮಿಗಳಾದ ಗೋಪಿನಾಥ್ ಭಟ್, ಯೋಗೀಶ್ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಲೀಲಾವತಿ, ವರಂಗ ವ್ಯವಸಾಯ ಸೇವಾ ಸಹಕಾರಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಎಸ್‌ಡಿಎಂಸಿ ಅಧ್ಯಕ್ಷ ಶುಭಧರ ಶೆಟ್ಟಿ, ಉಡುಪಿ ಜಿಲ್ಲಾ ಕಸಾಪದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಮನೋಹರ ಪಿ, ಆನಂದ ಸಾಲಿಗ್ರಾಮ, ಕಾರ್ಕಳ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಕನ್ನಡ ಪರ ಸಂಘಟಕ ಅಣ್ಣಪ್ಪ ಕುಲಾಲ್ ಮಂಡಾಡಿಜೆಡ್ಡು, ಗ್ರಾಪಂ ಅಧ್ಯಕ್ಷರಾದ ತಾರನಾಥ ಎಸ್.ಬಂಗೇರ, ವಸಂತಿ ಪೂಜಾರಿ, ಸ್ವಾಗತ ಸಮಿತಿಯ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಸಂಚಾಲಕ ಗಣಪತಿ ಎಂ. ಉಪಸ್ಥಿತರಿದ್ದರು.
    ಗುರುಪ್ರಸಾದ್ ಸುಬ್ಬಣ್ಣ ಕಟ್ಟೆ, ಕಜ್ಕೆ ಮಂಜುನಾಥ ಕಾಮತ್, ಅಕ್ಕಮ್ಮ ಕೇಶವ ಶೆಟ್ಟಿಗಾರ್ ಅವರನ್ನು ಅಭಿನಂದಿಸಲಾಯಿತು.
    ಪ್ರಕಾಶ್ ಪೂಜಾರಿ ಮಾತಿಬೆಟ್ಟು, ಚಂದ್ರಶೇಖರ್ ಭಟ್, ಚೈತ್ರ ಕಬ್ಬಿನಾಲೆ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಕುಲಾಲ್ ವಂದಿಸಿದರು.

    ಪುಸ್ತಕ ಬಿಡುಗಡೆ

    ಬಾಲಕೃಷ್ಣ ಭಾರದ್ವಾಜ್ ಕಬ್ಬಿನಾಲೆ ಬರೆದ ದಾಸ ಪಂಥ: ಒಂದು ತೌಲನಿಕ ಅಧ್ಯಯನ, ನರೇಂದ್ರ ಕಬ್ಬಿನಾಲೆ ಬರೆದ ನನ್ನ ನಿನ್ನ ನಡುವೆ ಕವನ ಸಂಕಲನ, ಅಜಿತ್ ಪೂಜಾರಿ ಮುದ್ರಾಡಿ ಅವರ ಆಂತರ್ಯ ಭಾವನೆಗಳ ಮಿಡಿತ ಕವನ ಸಂಕಲನ, ಪ್ರೇಮ ಬಸನಗೌಡ ಬಿರಾದರ ಬರೆದ ಅದೃಷ್ಟ ಕವನ ಸಂಕಲನವನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಬಿಡುಗಡೆ ಮಾಡಿದರು.

    ಸಾಧಕರಿಗೆ ಸನ್ಮಾನ

    ಸುಕುಮಾರ್ ಮೋಹನ್ ಮುದ್ರಾಡಿ(ನಾಟಕ), ದಾಸ ಶೆಟ್ಟಿ ಮೇಗದ್ದೆ (ಕೃಷಿ), ಪೇತ್ರಿ ಭಾಸ್ಕರ ರಾವ್(ಪತ್ರಿಕೆ), ಡಾ.ರಾಘವೇಂದ್ರ ಬಡ್ಕಿಲ್ಲಾಯ(ವಿಜ್ಞಾನಿ), ನೋಣಯ್ಯ ಬಂಗೇರ(ಧಾರ್ಮಿಕ), ಮಂಡಾಡಿಜೆಡ್ಡು ಲೀಲಾ ಕೆ.ಶೆಟ್ಟಿ(ನಾಟಿವೈದ್ಯ ), ಪ್ರಭಾಕರ ಶೆಟ್ಟಿ ಬೇಳಂಜೆ(ಯಕ್ಷಗಾನ), ರಂಗ ಪಾಣರ(ದೈವಾರಾಧನೆ), ವೀರಣ್ಣ ನಾಯ್ಕ(ಕರಕೌಶಲ) ಅವರಿಗೆ ಸನ್ಮಾನ ನಡೆಯಿತು.

    ವಿವಿಧ ಗೋಷ್ಠಿಗಳು

    ಸ್ವಾಗತ ಸಮಿತಿ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪುಸ್ತಕ ಮಳಿಗೆ ಉದ್ಘಾಟಿಸಿದರು. ಹೆಬ್ರಿ ಬಿಎಎಂಎಸ್ ಆಯುರ್ವೇದೀಯ ಮನೋರೋಗ ತಜ್ಞ ಡಾ.ರವಿಪ್ರಸಾದ್ ಹೆಗ್ಡೆ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ.ರಾಜಲಕ್ಷ್ಮೀ ವಿಷಯ ಮಂಡಿಸಿದರು. ಡಾ.ಎಂ.ಎಸ್.ರಾವ್ ಸಮನ್ವಯ ಮಾಡಿದರು. ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಮಾಮಣಿ ಉಪಸ್ಥಿತರಿದ್ದರು.

    ಪುರ ಮೆರವಣಿಗೆ

    ಮುದ್ರಾಡಿ ಗಣಪತಿ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ಯಕ್ಷಗಾನ ಕುದುರೆ, ವಿವಿಧ ವೇಷ-ಭೂಷಣಗಳು, ಚೆಂಡೆವಾದನ, ವಿವಿಧ ಶಿಕ್ಷಣ ಸಂಸ್ಥೆಗಳ ಬ್ಯಾಂಡ್ ಸೆಟ್, ಮೈಸೂರು ಕಂಸಾಳೆ ನೃತ್ಯ, ತಟ್ಟೀರಾಯ, ಸಾಹಿತಿಗಳು, ಗಣ್ಯರು, ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿದರು. ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳು, ಮೆರವಣಿಗೆಯಲ್ಲಿದ್ದವು. ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಮುದ್ರಾಡಿಯ ಡಾ.ಎಂ.ಎಸ್.ರಾವ್ ಮೆರವಣಿಗೆಗೆ ಚಾಲನೆ ನೀಡಿದರು.

    ಧ್ವಜಾರೋಹಣ

    ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಹೆಬ್ರಿ ಕ.ಸಾ.ಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts