ನವದೆಹಲಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವುದನ್ನು ನೆನಪಿಸುವಂಥ ಪ್ರಕರಣವಿದು. ಇಲ್ಲಿ ಬ್ಯಾಂಕ್ ಅಧಿಕಾರಿಯೇ ಗ್ರಾಹಕರ ಖಾತೆಯಿಂದ ಕೋಟಿಗಟ್ಟಲೆ ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧಿತನಾಗಿದ್ದಾನೆ.
ಆರ್ಬಿಎಲ್ ಬ್ಯಾಂಕ್ನ ಮಾಜಿ ಸಹಾಯಕ ಉಪಾಧ್ಯಕ್ಷ ನಾಗೇಂದ್ರ ಕುಮಾರ್ ಎಂಬಾತನೇ ಆರೋಪಿ. ಈತ ಬ್ಯಾಂಕ್ನ ಇಬ್ಬರು ಗ್ರಾಹಕರ ಖಾತೆಯಿಂದ ಒಟ್ಟು 19.8 ಕೋಟಿ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. 2020ರ ಆಗಸ್ಟ್ನಲ್ಲಿ ಈತ ಈ ಅಪರಾಧ ಎಸಗಿದ್ದ.
ದೆಹಲಿಯ ವಸಂತಕುಂಜ ಪ್ರದೇಶದಲ್ಲಿ ಆರ್ಬಿಎಲ್ ಬ್ಯಾಂಕ್ನ ಸಹಾಯಕ ಉಪಾಧ್ಯಕ್ಷನಾಗಿದ್ದ ಈತನನ್ನು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಮೆಸರ್ಸ್ ಜುಬಿಲೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ಮತ್ತು ಜುಬಿಲೆಂಟ್ ಅಗ್ರಿ ಆ್ಯಂಡ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಗಳ ಖಾತೆಯ ಬ್ಯಾಂಕ್ ವಹಿವಾಟಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ 2020ರ ಆ.7ರಂದು ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ಸಲ್ಲಿಕೆಯಾಗಿತ್ತು.
ಈ ಮೇರೆಗೆ ತನಿಖೆ ನಡೆಸಿದಾಗ ನಾಗೇಂದ್ರ ಕುಮಾರ್ ಈ ಎರಡು ಖಾತೆಗಳಿಂದ ಐಸಿಐಸಿಐ ಮತ್ತು ಎಚ್ಡಿಎಫ್ಸಿ ಬ್ಯಾಂಕ್ಗಳಲ್ಲಿರುವ ತನ್ನ ಖಾತೆಗಳಿಗೆ 19.8 ಕೋಟಿ ರೂ. ವರ್ಗಾಯಿಸಲು ಯತ್ನಿಸಿರುವುದು ಕಂಡುಬಂದಿತ್ತು.
ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..
ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ