ಹೈದರಾಬಾದ್: ಇತ್ತೀಚೆಗೆ ‘ಅಖಂಡ‘ ಚಿತ್ರದ ಯಶಸ್ಸಿನೊಂದಿಗೆ ಬಹಳಷ್ಟು ಹೆಸರು ಮಾಡಿದ ಟಾಲಿವುಡ್ ಸೂಪರ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರು ತಮ್ಮ ಮುಂಬರುವ ಚಿತ್ರ ‘ಎನ್ಬಿಕೆ 107′ ಚಿತ್ರೀಕರಣಕ್ಕೆ ರೆಡಿಯಾಗಿದ್ದಾರೆ. ‘ಕ್ರ್ಯಾಕ್‘ ಸಿನಿಮಾ ಖ್ಯಾತಿಯ ಗೋಪಿಚಂದ್ ಮಲ್ಲಿನೇನಿ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ಕನ್ನಡದ ಜನಪ್ರಿಯ ನಾಯಕ ನಟ ದುನಿಯಾ ವಿಜಯ್ ಅವರನ್ನು ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಗಳು ಕೇಳಿಬಂದಿವೆ. ಆದರೆ, ಈಗ ಅದು ಅಧಿಕೃತವಾಗಿದೆ. ಹೌದು, ಸ್ವತಃ ಚಿತ್ರತಂಡ ಈ ಕುರಿತು ಮಾಹಿತಿ ನೀಡಿದೆ.
ಈ ಹೆಸರಿಡದ ಚಿತ್ರವು ತೆಲುಗಿನಲ್ಲಿ ನಟ ದುನಿಯಾ ವಿಜಯ್ ಅವರ ಚೊಚ್ಚಲ ಸಿನಿಮಾ ಆಗಲಿದೆ. ನಟ ದುನಿಯಾ ವಿಜಯ್ ಸಿನಿಮಾದಲ್ಲಿ ಒಂದು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರವನ್ನು ‘ಮೈತ್ರಿ ಮೂವೀ ಮೇಕರ್ಸ್‘ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಒಂದು ಮಾಸ್, ಕಮರ್ಷಿಯಲ್ ಎಂಟರ್ಟೈನರ್ ಚಿತ್ರವಂತೆ. ನಟ ಬಾಲಕೃಷ್ಣ ಅವರಿಗೆ ನಾಯಕಿಯಾಗಿ ನಟಿ ಶ್ರುತಿ ಹಾಸನ್ ಆಯ್ಕೆಯಾಗಿದ್ದಾರೆ. ತಾತ್ಕಾಲಿಕವಾಗಿ ‘#NBK107’ ಎಂಬ ಹೆಸರನ್ನು ಈ ಚಿತ್ರಕ್ಕೆ ನೀಡಲಾಗಿದೆ. ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ NBK107 ಚಿತ್ರವನ್ನು ನಿರ್ಮಿಸುತ್ತಿದ್ದು, ಎಸ್.ಎಸ್.ಥಮನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಮುಖ ತೋರಿಸ್ರೀ.. ಅಂತ ಅದಿತಿ ಕೇಳಿದ್ರೂ ಭಾವಿಪತಿ ಕಿವಿಗೊಡಲಿಲ್ಲ! ವಿಡಿಯೋ ವೈರಲ್
‘ಐ ಲವ್ ಯೂ ರಮ್ಯಾ’, ಪ್ಲೀಸ್ ಈ ಒಂದು ಬೇಡಿಕೆ ಈಡೇರಿಸು ಎಂದ ರಚ್ಚು! ಏನದು…?
2022ರಲ್ಲಿ ವೈರಿಗಳು, ಎಫ್ಐಆರ್ಗಳು ಕಡಿಮೆಯಾಗಲಿ ಅಂತ ತಿರುಪತಿಗೆ ಹೋದ ಕಂಗನಾ! ಫೋಟೋ ವೈರಲ್…