ಗುರುಗ್ರಾಮ: ವೈದ್ಯರೇ ನಡೆದಾಡುವ ದೇವರು ಎನ್ನುತ್ತಾರೆ. ಆದರೆ ಅದೆಷ್ಟೋ ಬಾರಿ ಅದೇ ದೇವರು ಮಾಡುವ ತಪ್ಪಿನಿಂದ ರೋಗಿಗಳು ಸಾವನ್ನಪ್ಪಿರುವುದೂ ಇದೆ. ಅದೇ ರೀತಿ ಗರ್ಭಿಣಿಯೊಬ್ಬಳ ಆಪರೇಷನ್ ಮಾಡಿದ ವೈದ್ಯರು ಮಗವನ್ನು ಹೊರತೆಗೆದು ಹತ್ತಿಯನ್ನು ಹೊಟ್ಟೆಯಲ್ಲೇ ಬಿಟ್ಟಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ತಪ್ಪಿನ ಅರಿವಾಗಿ ಮರು ಆಪರೇಷನ್ ಮಾಡಿದ ನಂತರ ತಾಯಿ ಮೇಲೆದ್ದಿಲ್ಲ ಎನ್ನಲಾಗಿದೆ.
ಆ ಮಹಿಳೆ ಇತ್ತೀಚೆಗೆ ಹೆರಿಗೆ ನೋವಿನೊಂದಿಗೆ ಗುರುಗ್ರಾಮದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದಳು. ನಾರ್ಮಲ್ ಹೆರಿಗೆ ಆಗುವುದಿಲ್ಲ, ಮಗುವನ್ನು ಸಿಜರಿಯನ್ ಮಾಡಿಯೇ ತೆಗೆಯಬೇಕು ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಸಿಜರಿಯನ್ ಮಾಡಿ ಮಗುವನ್ನು ಹೊರತೆಗೆಯಲಾಗಿದೆ. ಅದಾದ ಮೇಲೆ ತಾಯಿ ಮಗುವನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮನೆಗೆ ತೆರಳಿದ ಒಂದೆರೆಡು ದಿನಗಳಲ್ಲಿ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಪರೇಷನ್ ಮಾಡಿದ್ದ ವೈದ್ಯರಿಗೆ ಕೇಳಿದರೆ ಮಾತ್ರೆ ಕೊಟ್ಟು ಕಳುಹಿಸಿದ್ದಾರೆ.
ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಬೇರೊಬ್ಬ ವೈದ್ಯರ ಸಲಹೆಯಂತೆ ಅಲ್ಟ್ರಾಸೌಂಡ್ ಮಾಡಿಸಲಾಗಿದೆ. ಅದರಲ್ಲಿ ಹೊಟ್ಟಡಯೊಳಗೆ ಹತ್ತಿಯಿರುವುದು ಕಂಡುಬಂದಿದೆ. ತಕ್ಷಣ ಬಾಣಂತಿಯ ಕುಟುಂಬಸ್ಥರು ಆಪರೇಷನ್ ಮಾಡಿದ್ದ ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದಾರೆ. ಮೊದಲಿಗೆ ವೈದ್ಯರು ತಪ್ಪೊಪ್ಪಿಕೊಂಡಿಲ್ಲವಾದರೂ ರಿಪೋರ್ಟ್ ತೋರಿಸಿದ ನಂತರ ಒಪ್ಪಿಕೊಂಡಿದ್ದಾರೆ. ಬಾಣಂತಿಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದಾರೆ.
ಬಾಣಂತಿ ಆಸ್ಪತ್ರೆಗೆ ದಾಖಲಾದ ನಂತರ ಕುಟುಂಬಸ್ಥರ ಅನುಮತಿ ಇಲ್ಲದೆಯೇ ಮತ್ತೊಮ್ಮೆ ಆಪರೇಷನ್ ಮಾಡಲಾಗಿದೆಯೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆ ಆಪರೇಷನ್ ಆದಾಗಿನಿಂದ ಆಕೆ ಮೇಲೆ ಎದ್ದಿಲ್ಲವೆಂದೂ ಹೇಳಲಾಗಿದೆ. ಸದ್ಯ ಈ ವಿಚಾರವಾಗಿ ಬಾಣಂತಿಯ ಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. (ಏಜೆನ್ಸೀಸ್)
ಒಂದೇ ವರ್ಷದಲ್ಲಿ 20 ಮಕ್ಕಳ ತಾಯಿಯಾದ 23ರ ಬೆಡಗಿ! ಇನ್ನೂ ಮುಗಿದಿಲ್ಲವಂತೆ ತಾಯಿಯಾಗುವ ಬಯಕೆ!
17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…
ಬಾಸ್ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್