More

    ಕಬಾಬ್​ ಬಿಲ್​ ಕೇಳಿದ್ದಕ್ಕೆ ಬಾಣಸಿಗನ ಹತ್ಯೆ; ಆರೋಪಿಗಳು ಪರಾರಿ

    ಬರೇಲಿ: ಕಬಾಬ್​ ರುಚಿ ಚೆನ್ನಾಗಿರಲಿಲ್ಲ ಹಾಗೂ ಬಿಲ್​ ಪಾವತಿಸಲು ಸೂಚಿಸಿದರು ಎಂಬ ಕಾರಣಕ್ಕೆ ಅಡುಗೆ ಭಟ್ಟನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಘಟನೆಯೂ ಬರೇಲಿಯ ಪ್ರಿಯದರ್ಶಿನಿ ನಗರದಲ್ಲಿ ನಡೆದಿದ್ದು ಮೃತ ದುರ್ದೈವಿಯನ್ನು ಅಂಕುರ್​ ಸಬರ್​ವಾಲ್​(52) ಎಂದು ಗುರುತು ಹಿಡಿಯಲಾಗಿದೆ.

    ಕಳಪೆ ಆಹಾರ ಎಂದು ಖ್ಯಾತೆ

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್​ ಭಾಟಿ ಕುಡಿದ ಮತ್ತಿನಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮೊದಲಿಗೆ ಕಬಾಬ್​ ಆರ್ಡರ್​ ಮಾಡಿ ತರಿಸಿಕೊಂಡು ತಿಂದಿದ್ದಾರೆ.

    ಇದನ್ನೂ ಓದಿ: ಜಮ್ಮು-ಕಾಶ್ಮಿರದಲ್ಲಿ ಸೇನಾ ಹೆಲಿಕಾಪ್ಟರ್​ ಪತನ; ಇಬ್ಬರಿಗೆ ಗಾಯ

    ಆ ನಂತರ ಅಂಗಡಿ ಮಾಲೀಕ ಅಂಕುರ್​ ಅವರ ಬಳಿ ಕಳಪೆ ಗುಣಮಟ್ಟದ ಆಹಾರವನ್ನು ನೀಡಿದ್ದೀಯಾ ಎಂದು ಖ್ಯಾತೆ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ತೆರಳಿದ್ದಾರೆ.

    ಬಿಲ್​ ಕೇಳಿದ್ದಕ್ಕೆ ಹತ್ಯೆ

    ಈ ವೇಳೆ ಅಂಕುರ್​ ತನ್ನ ಬಳಿ ಕೆಲಸಕ್ಕಿದ್ದ ನಸೀರ್​ ಅಹ್ಮದ್​ಗೆ ಆರೋಪಿಗಳ ಬಳಿ ಕಬಾಬ್​ ಬಿಲ್​ 120 ರೂಪಾಯಿಯನ್ನು ತೆಗೆದುಕೊಂಡು ಬರುವಂತೆ ಸೂಚಿಸಿದಾಗ ಕುಪಿತಗೊಂಡ ಆರೋಪಿಗಳು ಅಂಗಡಿ ಮಾಲೀಕ ಅಂಕುರ್​ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

    ತೀವ್ರ ರಕ್ತಸ್ರಾವದಿಂದ ಅಂಗಡಿ ಮಾಲೀಕ ಅಂಕುರ್​ ಸಬರ್​ವಾಲ್​ ಸ್ಥಳದಲ್ಲೇ ಸಾವಿಗೀಡಾಗಿದ್ದು ಹತ್ಯೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಕಾರನ್ನು ಉತ್ತರಾಖಂಡದ ಕಾಶಿಪುರದಲ್ಲಿ ಪತ್ತೆ ಹಚ್ಚಲಾಗಿದೆ.

    ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಅವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್​ ಭಾಟಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts