More

    ಕಳ್ಳತನ ಶಂಕೆ; ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಹಾಸ್ಟೆಲ್​ ವಾರ್ಡನ್​

    ನವದೆಹಲಿ: ಕಳ್ಳತನ ಮಾಡಿದ್ದಾರೆ ಎಂದು ಶಂಕಿಸಿ ನರ್ಸಿಂಗ್​ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರನ್ನು ಹಾಸ್ಟೆಲ್ ವಾರ್ಡನ್​ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಆರೋಪಿ ಮಹಿಳಾ ವಾರ್ಡನ್​ನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಹಣ ದೋಚಿದ್ದಾರೆ ಎಂದು ಆರೋಪ

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು LNJP ಸರ್ಕಾರಿ ಆಸ್ಪತ್ರೆಯ ಅಹಲ್ಯಾಭಾಯಿ ಕಾಲೇಜ್​ ಆಪ್​ ನರ್ಸಿಂಗ್​ನಲ್ಲಿ ಮಂಗಳವಾರ ತಡರಾತ್ರಿ ಘಟನೆ ನಡೆದಿದೆ.

    ಅಂತಿಮ ವರ್ಷ ಬಿಎಸ್​ಸಿ ಪದವಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತ ವಿದ್ಯಾರ್ಥಿನಿಯರು ಹಾಸ್ಟೆಲ್​ ವಾರ್ಡನ್​ ಹಾಗೂ ಸಹಪಾಠಿಗಳೊಂದಿಗೆ ದೆಹಲಿಯ ಮಂಡಿ ಪ್ರದೇಶದಲ್ಲಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು.

    ಈ ವೇಳೆ ಹಾಸ್ಟೆಲ್​ ವಾರ್ಡನ್​ ತನ್ನ ಬ್ಯಾಗಿನಲ್ಲಿದ್ದ 8,000 ಸಾವಿರ ರೂಪಾಯಿ ಕಾಣೆಯಾಗಿರುವ ಕುರಿತು ಹೇಳಿದ್ದಾರೆ ಮತ್ತು ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಬಿರುಬೇಸಿಗೆಯಲ್ಲೂ ತಂಪೆರೆದ ಮಳೆರಾಯ; ರಾಷ್ಟ್ರ ರಾಜಧಾನಿ ಸಖತ್​… ಕೂಲ್​

    Delhi police

    ಸಹಪಾಠಿಗಳ ಸಹಾಯ

    ಹಾಸ್ಟೆಲ್​ಗೆ ಬಂದ ನಂತರ ಸಹಪಾಠಿಗಳ ಸಹಾಯದೊಂದಿಗೆ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಹಾಸ್ಟೆಲ್​ ವಾರ್ಡನ್​ ದುಡ್ಡು ಙತ್ತೆಯಾಗದ ಕಾರಣ ಬಿಟ್ಟು ಕಳುಹಿಸಿದ್ದಾರೆ.

    ತಮ್ಮಗೆ ಈಗಾದ ಕುರಿತು ಸಂತ್ರಸ್ತ ವಿದ್ಯಾರ್ಥಿನಿಯರು ಪೋಷಕರ ಬಳಿ ಅಳಲು ತೋಡಿಕೊಂಡಿದ್ದು ಈ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳ ತಂಡ ವಿದ್ಯಾರ್ಥಿನಿಯರ ಹೇಳಿಕೆಯನ್ನು ಪಡೆದು ಅವರನ್ನು ರಕ್ಷಿಸಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಪ್ರಕರಣ ದಾಖಲು

    ವಿದ್ಯಾರ್ಥಿನಿಯರು ನೀಡಿದ ದೂರಿನ ಮೇರೆಗೆ ಆರೋಪಿ ಮಹಿಳಾ ವಾರ್ಡನ್​ ಹಾಗೂ ಕೃತ್ಯಕ್ಕೆ ಸಹಕರಿಸಿದವರ ವಿರುದ್ಧ ತಿಲಕ್​ ಮಾರ್ಗ್​​ ಪೊಲೀಸ್​ ಠಾಣೆಯಲ್ಲಿ ಭಾರತ ದಂಡ ಸಂಹಿತೆ(IPC Section) 354 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

    ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತಿರುವ ಅಹಲ್ಯಾಭಾಯಿ ಕಾಲೇಜು ಆಡಳಿತ ಮಂಡಳಿ ಪ್ರಾಂಶುಪಾಲರ ನೇತೃತ್ವದಲ್ಲಿ ಸಮಿತಿ ಒಂದನ್ನು ರಚಿಸಿದ್ದು ಆರೋಪಿ ಮಹಿಳಾ ವಾರ್ಡನ್​ ಹಾಗೂ ಜೃತ್ಯಕ್ಕೆ ಸಹಕರಿಸಿದ ವಿದ್ಯಾರ್ಥಿನಿಯರನ್ನು ಅಮಾನತತ್ತಿನಲ್ಲಿರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts