ಚಿಕ್ಕಬಳ್ಳಾಪುರ: ತಾಲೂಕಿನ ಸೂಸೇಪಾಳ್ಯ-ಅರಿಕೇರಿ ಗೋಮಾಳ ಜಾಗದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಯೇಸು ಶಿಲುಬೆ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಗೋಮಾಳದಲ್ಲಿ ಬೃಹತ್ ಶಿಲುಬೆಯ ಜತೆಗೆ ಅಲ್ಲಲ್ಲಿ 5ಕ್ಕೂ ಶಿಲುಬೆ ಸ್ಥಾಪಿಸಲಾಗಿದೆ. ಪ್ರಾರ್ಥನೆಗೆ ಅಲ್ಲಲ್ಲಿ ಅಕ್ರಮವಾಗಿ ನೆಲಸಮತಟ್ಟು ಮಾಡಿ, ಪ್ರಚಾರ ಚಿತ್ರಗಳನ್ನು ಸಮುದಾಯದ ಮುಖಂಡರು ಹಾಕಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೂ ಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾಡಳಿತವು ಪೊಲೀಸ್ ಬಂದೋಬಸ್ತ್ ನಲ್ಲಿ ಯೇಸು ಶಿಲುಬೆ ತೆರವು ಕಾರ್ಯಚರಣೆಯನ್ನು ಬುಧವಾರ ಬೆಳಗ್ಗೆಯೇ ಕೈಗೊಂಡಿದೆ. ಇದನ್ನೂ ಓದಿರಿ ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಯಡಿಯೂರಪ್ಪ
ಶಿಲುಬೆ ತೆರವಿಗೆ ಕ್ರೈಸ್ತ ಸಮುದಾಯ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟಿನ ಆದೇಶದಂತೆ ಜಿಲ್ಲಾಡಳಿತವು ತೆರವು ಕಾರ್ಯ ಆರಂಭಸಿದೆ. ಚಿಕ್ಕಬಳ್ಳಾಪುರ ಎಸಿ ರಘುನಂದನ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಕ್ರೈಸ್ತಧರ್ಮದ ಸ್ಥಳೀಯ ವಾಸಿಗಳು ಬೆಟ್ಟದ ತಪ್ಪಲಿನಲ್ಲಿ ಜಿಲ್ಲಾಡಳಿತ, ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು. ಬೆಟ್ಟದ ಮೇಲಿನ ಸ್ಥಳಕ್ಕೆ ತೆರಳಲು ಸಾರ್ವಜನಿಕರಿಗೆ ಸದ್ಯ ನಿರ್ಬಂಧ ಏರಲಾಗಿದೆ.
ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…