ಉತ್ತರಪ್ರದೇಶ: ಇಲ್ಲಿನ ಅಮೇಥಿಯ ಗೌರಿಗಂಜ್ ಪ್ರದೇಶದಲ್ಲಿದ್ದ ಕಾಂಗ್ರೆಸ್ ಕಚೇರಿ ಎದುರು ನಿಲ್ಲಿಸಲಾಗಿದ್ದ ‘ಕೈ’ ಕಾರ್ಯಕರ್ತರ ಕಾರುಗಳನ್ನು ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಹಿನ್ನಲೆ ಬಿಜೆಪಿ ವಿರುದ್ಧ ನೇರ ಆರೋಪ ಎಸಗಿದ ಕಾಂಗ್ರೆಸ್, ತಪ್ಪಿತಸ್ಥರು ಬೇರಾರು ಅಲ್ಲ, ಬಿಜೆಪಿ ಗೂಂಡಾಗಳು ಎಂದು ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕ್ಷಣಗಣನೆ; ಇದೊಂದು ವಿಷಯಕ್ಕೆ ಕಾಯ್ತಿದ್ದಾರೆ ಎಸ್ಐಟಿ ಅಧಿಕಾರಿಗಳು
ಒಂದಲ್ಲ, ಎರಡಲ್ಲ ಹಲವು ಕಾರುಗಳನ್ನು ಜಖಂಗೊಳಿಸಿರುವ ದುಷ್ಕರ್ಮಿಗಳು ಬಿಜೆಪಿಯವರೇ ಎಂದು ದೂರಿದ ಕಾಂಗ್ರೆಸ್, ಈ ದುಷ್ಕೃತ್ಯಕ್ಕೆ ಅವರ ಕಾರ್ಯಕರ್ತರೇ ಕಾರಣ ಎಂದು ತಿಳಿಸಿದೆ.
#WATCH | Uttar Pradesh: Vehicles parked outside Congress office in Gauriganj, Amethi were vandalised by unidentified people last night. Police reached the spot and spoke with the party workers who took to the streets in protest against this. Details awaited. pic.twitter.com/Hf4IUTtRr3
— ANI (@ANI) May 6, 2024
ಇದಕ್ಕೆಲ್ಲಾ ಮೂಲ ಕಾರಣ ಸೃತಿ ಇರಾನಿ, ಯಾಕಂದ್ರೆ, ಇಲ್ಲಿನ ಲೋಕಸಭಾ ಕ್ಷೇತ್ರದಿಂದಲೇ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಅವರಿಗೆ ಸೋಲು ಖಚಿತ ಎಂಬುದು ತಿಳಿಯುತ್ತಿದ್ದಂತೆ, ಅವರ ಪಕ್ಷದ ಕಾರ್ಯಕರ್ತರು ಇಂಥ ಕಿಡಿಗೇಡಿ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದೆ,(ಏಜೆನ್ಸೀಸ್).
5 ರೂ. ಪಾರ್ಲೆ-ಜಿ ಬಿಸ್ಕತ್ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕ್ಷಣಗಣನೆ; ಇದೊಂದು ವಿಷಯಕ್ಕೆ ಕಾಯ್ತಿದ್ದಾರೆ ಎಸ್ಐಟಿ ಅಧಿಕಾರಿಗಳು