ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿರು ಸರ್ಜಾ ನಿಧನರಾಗಿ ಮೂರು ದಿನ ಕಳೆದ ಬೆನ್ನಲ್ಲೆ, ಕುಟುಂಬಸ್ಥರು ಕನಕಪುರ ರಸ್ತೆಯ ನೆಲಗುಳಿಯಲ್ಲಿನ ಬೃಂದಾವನ ಫಾರ್ಮ್ಹೌಸ್ಗೆ ತೆರಳಿ, ಅಲ್ಲಿನ ಸಮಾಧಿ ಬಳಿ ಬೆಳಗ್ಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದರು.
ಇದನ್ನೂ ಓದಿ: 15 ವರ್ಷಗಳ ನಂತರ ರಾಜಮೌಳಿ ಚಿತ್ರದಲ್ಲಿ ಶ್ರೀಯಾ!
ಈ ವೇಳೆ ಪತ್ನಿ ಮೇಘನಾ ಸರ್ಜಾ, ಧ್ರುವ ಸರ್ಜಾ, ತಂದೆ ವಿಜಯ್ಕುಮಾರ್ ಸೇರಿ ಕುಟುಂಬದವರೆಲ್ಲ ಅಗಲಿದ ಚಿರುವಿಗೆ ಹಾಲು ತುಪ್ಪ ಅರ್ಪಿಸಿದರು. ಅಂತ್ಯಸಂಸ್ಕಾರದ ವಿಧಿ ವಿಧಾನ ನೆರವೇರಿಸಿದ್ದ ಮೋಹನ್ ಪುರೋಹಿತರ ಸಮ್ಮುಖದಲ್ಲಿ ಹಾಲು ತುಪ್ಪ ಕಾರ್ಯ ನಡೆಯಿತು.
ಇದನ್ನೂ ಓದಿ: ಬಾಲಿವುಡ್ನ ಈ ಬಯೋಪಿಕ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲ್ಲ!
ಕಳೆದ ಎರಡು ದಿನದಿಂದ ದುಃಖದ ಮಡುವಿನಲ್ಲೇ ಇದ್ದ ಮೇಘನಾ, ಈ ಕಾರ್ಯದ ಸಂದರ್ಭದಲ್ಲೂ ಕಣ್ಣೀರಾಗಿದ್ದರು. ಧ್ರುವ ಸರ್ಜಾ ಅಣ್ಣನ ಸಮಾಧಿ ಸುತ್ತಲೇ ಅತ್ತಿಂದಿತ್ತ ಓಡಾಡುತ್ತ ಅಣ್ಣನ ನೆನಪಲ್ಲೇ ಮೌನವಾಗಿದ್ದರು.
PHOTO GALLERY| ಕಿರುತೆರೆಯ ರೌಡಿ ಬೇಬಿಗೆ ಬರ್ತಡೇ ಸಂಭ್ರಮ: ನಿಶಾರ ನಶೆ ಏರಿಸೋ ಫೋಟೋಗಳಿವು!