ಹೈದರಾಬಾದ್: ಟಾಲಿವುಡ್ನ ಹಿರಿಯ ನಟ ಚಿರಂಜೀವಿ ಈ ಹಿಂದೆ ತಮ್ಮ ಹೆಸರಲ್ಲಿ ಬ್ಲಡ್ ಬ್ಯಾಂಕ್ ಪ್ರಾರಂಭಿಸಿದ್ದರು. ಈಗ ಅವರು ತಮ್ಮ ಮಗ ರಾಮ್ಚರಣ್ ತೇಜ ಜತೆಗೆ ಸೇರಿಕೊಂಡು ಆಕ್ಸಿಜನ್ ಬ್ಯಾಂಕ್ಗಳನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: 94 ದಿನ ಮುಗಿಸಿದ್ದ ಬಿಗ್ಬಾಸ್ಗೆ ಸಡನ್ ಬ್ರೇಕ್! ಅಧಿಕಾರಿಗಳೇ ಬಂದು ಸೀಲ್ ಮಾಡಿಬಿಟ್ಟರು!
ಹೌದು, ಕರೊನಾ ಕೇಸ್ಗಳಲ್ಲಿ ಹೆಚ್ಚಳ ಕಂಡ ಕಾರಣ, ಇಡೀ ದೇಶದಲ್ಲಿ ಆಕ್ಸಿಜನ್ಗೆ ಬಹಳ ಬೇಡಿಕೆ ಇದೆ. ಇದಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೊರತೇನಲ್ಲ. ಈ ಎರಡೂ ರಾಜ್ಯಗಳಲ್ಲಿ ಆಕ್ಸಿಜನ್ ಅಭಾವ ನೀಗಿಸುವುದಕ್ಕೆ ಅವರು ಆಕ್ಸಿಜನ್ ಬ್ಯಾಂಕ್ಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಈ ಬ್ಯಾಂಕ್ಗಳನ್ನು ಚಿರಂಜೀವಿ ಅಭಿಮಾನಿಗಳ ಸಂಘ ನೋಡಿಕೊಳ್ಳಲಿದ್ದು, ಆಯಾ ಜಿಲ್ಲೆಗಳಲ್ಲಿ ಅಗತ್ಯವಿರುವವರಿಗೆ ಈ ಸಂಘದವರೇ ಆಕ್ಸಿಜನ್ ಪೂರೈಸಲಿದ್ದಾರೆ. ಯಾವುದೇ ಜಿಲ್ಲೆಯಲ್ಲಿ ಯಾರಿಗಾದರೂ ಆಮ್ಲಜನಕದ ಅಗತ್ಯಬಿದ್ದರೆ, ಅವರು ಚಿರಂಜೀವಿ ಅಭಿಮಾನಿಗಳ ಸಂಘವನ್ನು ಸಂಪರ್ಕಿಸಿ, ತರಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ತೌಕ್ತೆ ಚಂಡಮಾರುತಕ್ಕೆ ಮೈದಾನ್ ಚಿತ್ರದ ಸೆಟ್ ಧ್ವಂಸ
ಚಿರಂಜೀವಿ ಚಾರಿಟಬಲ್ ಟ್ರಸ್ಟ್ನಡಿ ಈ ಆಕ್ಸಿಜನ್ ಬ್ಯಾಂಕ್ ಕಾರ್ಯ ನಿರ್ವಹಿಸಲಿದ್ದು, ಇನ್ನೊಂದು ವಾರದಲ್ಲಿ ಸ್ಥಾಪನೆಯಾಗಲಿದೆ. ಈ ಕುರಿತು ಚಿರಂಜೀವಿ ಚಾರಿಟಬಲ್ ಟ್ರಸ್ಟ್ನಿಂದ ಇಂದು ಟ್ವಿಟರ್ನಲ್ಲಿ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.