More

    ಆಕ್ಸಿಜನ್ ಬ್ಯಾಂಕ್ ಸ್ಥಾಪಿಸಲು ಮುಂದಾದ ಟಾಲಿವುಡ್ ನಟ ಚಿರಂಜೀವಿ

    ಹೈದರಾಬಾದ್​: ಟಾಲಿವುಡ್​ನ ಹಿರಿಯ ನಟ ಚಿರಂಜೀವಿ ಈ ಹಿಂದೆ ತಮ್ಮ ಹೆಸರಲ್ಲಿ ಬ್ಲಡ್​ ಬ್ಯಾಂಕ್​ ಪ್ರಾರಂಭಿಸಿದ್ದರು. ಈಗ ಅವರು ತಮ್ಮ ಮಗ ರಾಮ್​ಚರಣ್​ ತೇಜ ಜತೆಗೆ ಸೇರಿಕೊಂಡು ಆಕ್ಸಿಜನ್​ ಬ್ಯಾಂಕ್​ಗಳನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ: 94 ದಿನ ಮುಗಿಸಿದ್ದ ಬಿಗ್​ಬಾಸ್​ಗೆ ಸಡನ್​ ಬ್ರೇಕ್​! ಅಧಿಕಾರಿಗಳೇ ಬಂದು ಸೀಲ್​ ಮಾಡಿಬಿಟ್ಟರು!

    ಹೌದು, ಕರೊನಾ ಕೇಸ್​ಗಳಲ್ಲಿ ಹೆಚ್ಚಳ ಕಂಡ ಕಾರಣ, ಇಡೀ ದೇಶದಲ್ಲಿ ಆಕ್ಸಿಜನ್​ಗೆ ಬಹಳ ಬೇಡಿಕೆ ಇದೆ. ಇದಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೊರತೇನಲ್ಲ. ಈ ಎರಡೂ ರಾಜ್ಯಗಳಲ್ಲಿ ಆಕ್ಸಿಜನ್​ ಅಭಾವ ನೀಗಿಸುವುದಕ್ಕೆ ಅವರು ಆಕ್ಸಿಜನ್​ ಬ್ಯಾಂಕ್​ಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ.

    ಈ ಬ್ಯಾಂಕ್​ಗಳನ್ನು ಚಿರಂಜೀವಿ ಅಭಿಮಾನಿಗಳ ಸಂಘ ನೋಡಿಕೊಳ್ಳಲಿದ್ದು, ಆಯಾ ಜಿಲ್ಲೆಗಳಲ್ಲಿ ಅಗತ್ಯವಿರುವವರಿಗೆ ಈ ಸಂಘದವರೇ ಆಕ್ಸಿಜನ್​ ಪೂರೈಸಲಿದ್ದಾರೆ. ಯಾವುದೇ ಜಿಲ್ಲೆಯಲ್ಲಿ ಯಾರಿಗಾದರೂ ಆಮ್ಲಜನಕದ ಅಗತ್ಯಬಿದ್ದರೆ, ಅವರು ಚಿರಂಜೀವಿ ಅಭಿಮಾನಿಗಳ ಸಂಘವನ್ನು ಸಂಪರ್ಕಿಸಿ, ತರಿಸಿಕೊಳ್ಳಬಹುದಾಗಿದೆ.

    ಇದನ್ನೂ ಓದಿ: ತೌಕ್ತೆ ಚಂಡಮಾರುತಕ್ಕೆ ಮೈದಾನ್ ಚಿತ್ರದ ಸೆಟ್​ ಧ್ವಂಸ

    ಚಿರಂಜೀವಿ ಚಾರಿಟಬಲ್​ ಟ್ರಸ್ಟ್​ನಡಿ ಈ ಆಕ್ಸಿಜನ್​ ಬ್ಯಾಂಕ್​ ಕಾರ್ಯ ನಿರ್ವಹಿಸಲಿದ್ದು, ಇನ್ನೊಂದು ವಾರದಲ್ಲಿ ಸ್ಥಾಪನೆಯಾಗಲಿದೆ. ಈ ಕುರಿತು ಚಿರಂಜೀವಿ ಚಾರಿಟಬಲ್​ ಟ್ರಸ್ಟ್​ನಿಂದ ಇಂದು ಟ್ವಿಟರ್​ನಲ್ಲಿ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.

    ಬಡವರ ಹತ್ತಿರ ಭಿಕ್ಷೆ ಕೇಳಬೇಡಿ … ಕಂಗನಾ ಟಾಂಗ್ ಕೊಟ್ಟಿದ್ದು ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts